ರಾಜಸ್ಥಾನ, ಉತ್ತರಪ್ರದೇಶ, ಗುಜರಾತ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ‘ಸರ ತನ ಸೆ ಜುದಾ’ದ ಘೋಷಣೆ !

‘ಮಿಲಾದ-ಉನ-ನಬೀ’ಯ ಸಮಯದಲ್ಲಿ ಮತಾಂಧ ಮುಸಲ್ಮಾನರ ಸ್ವೇಚ್ಛಾಚಾರ !

(ಸರ ತನ ಸೆ ಜುದಾ ಅಂದರೆ ತಲೆಯನ್ನು ದೇಹದಿಂದ ಬೇರ್ಪಡಿಸುವುದು)
(’ಮಿಲಾದ-ಉನ-ನಬೀ’ ಅಂದರೆ ಮಹಂಮದ ಪೈಗಂಬರರ ಜನ್ಮೋತ್ಸವ)

ಮುಸಲ್ಮಾನರ ಧಾರ್ಮಿಕ ಮಹೋತ್ಸವ

ಲಕ್ಷ್ಮಣಪುರಿ (ಉತ್ತರಪ್ರದೇಶ) : ‘ಮಿಲಾದ-ಉನ-ನಬೀ’ಯ ಮುಸಲ್ಮಾನರ ಧಾರ್ಮಿಕ ಮಹೋತ್ಸವದ ದಿನ ಅಂದರೆ ಅಕ್ಟೋಬರ್ ೯ರಂದು ದೇಶದಲ್ಲಿನ ವಿವಿಧ ಭಾಗಗಳಲ್ಲಿ ‘ಸರ ತನ ಸೆ ಜುದಾ’ನ ಘೋಷಣೆಗಳು ಕೇಳಿಬಂದವು. ಇವುಗಳಲ್ಲಿ ರಾಜಸ್ಥಾನದ ಜೋಧಪುರ ಮತ್ತು ಉದಯಪುರ, ಉತ್ತರಪ್ರದೇಶದಲ್ಲಿನ ಅಮೇಠಿ ಹಾಗೂ ಆಝಮಗಡ, ಗುಜರಾತನ ಊನಾ, ಹಾಗೆಯೇ ಮಧ್ಯಪ್ರದೇಶದಲ್ಲಿನ ಖಂಡವಾ ಹಾಗೂ ಮಹಾರಾಷ್ಟ್ರದಲ್ಲಿನ ಅಮರಾವತಿಗಳು ಸೇರಿವೆ. ಹಿಂದುತ್ವನಿಷ್ಠ ಸಂಘಟನೆಗಳು ಇದನ್ನು ಬಲವಾಗಿ ವಿರೋಧಿಸಿದ್ದಾರೆ. ಪೊಲೀಸರು ಈ ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಉತ್ತರಪ್ರದೇಶ

ಉತ್ತರಪ್ರದೇಶದ ಆಝಮಗಡದಲ್ಲಿ ‘ಮಿಲಾದ-ಉನ-ನಬೀ’ಯ ಸಮಯದಲ್ಲಿ ನಡೆಸಲಾದ ಫೇರಿಯಲ್ಲಿ ‘ಸರ ತನ ಸೆ ಜುದಾ’ನ ಘೋಷಣೆ ನೀಡಲಾಯಿತು. ನಗರದಲ್ಲಿನ ಹಳೆಯ ಕೋತವಾಲಿ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಈ ಸಮಯದಲ್ಲಿ ‘ಅಲ್ಲಾ ಹು ಅಕಬರ’ ರಂಬ ಘೋಷಣೆ ನೀಡಲಾಗಿದೆ. ಈ ವಿಡಿಯೋ ದೊಡ್ಡ ಪ್ರಮಾಣದಲ್ಲಿ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುತ್ತಿದೆ. ಈ ಘಟನೆಯ ವಿರುದ್ಧ ಪೊಲೀಸರು ೩ ಅಪ್ರಾಪ್ತ ಹುಡುಗರನ್ನು ವಶಕ್ಕೆ ಪಡೆದಿದ್ದಾರೆ. ಇತರ ಆರೋಪಿಗಳನ್ನು ಗುರುತಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಮಧ್ಯಪ್ರದೇಶ

ಮಧ್ಯಪ್ರದೇಶದ ಖಂಡವಾದಲ್ಲಿಯೂ ಕೂಡ ‘ಸರ್ ತನ್ ಸೇ ಜೂದಾ’ ಈ ಘೋಷಣೆ ಕೂಗುವ ವಿಡಿಯೋ ಪ್ರಸಾರವಾಗಿದೆ. ಈ ಸಮಯದಲ್ಲಿ ರಸ್ತೆಯಲ್ಲಿ ಹಸಿರು ಬಾವುಟ ಹಾರಿಸಲಾಗಿದೆ. ಸ್ಥಳೀಯ ಪ್ರಸಾರ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಪೊಲೀಸರು ಘೋಷಣೆ ಕೂಗುವ ೪ ಯುವಕರನ್ನು ಅಕ್ಟೋಬರ್ ೯ ರ ರಾತ್ರಿ ಬಂಧಿಸಿದ್ದಾರೆ. ಈ ಕಾರ್ಯಾಚರಣೆಯ ವಿರೋಧ ವ್ಯಕ್ತಪಡಿಸುವುದಕ್ಕಾಗಿ ಅಸಂಖ್ಯ ಮುಸಲ್ಮಾನ ಮಹಿಳೆಯರು ಪೊಲೀಸ ಠಾಣೆ ಎದುರು ಧರಣೀ ಆಂದೋಲನ ಮಾಡಲು ಪ್ರಾರಂಭಿಸಿದರು. ಆ ಸಮಯದಲ್ಲಿ ನಗರದ ಕಾಜಿ ಕೂಡ (ಮುಸಲ್ಮಾನ ಸಾಂಪ್ರದಾಯ ಶಾಸ್ತ್ರನುಸಾರ ತೀರ್ಪು ನೀಡುವ ನ್ಯಾಯಾಧೀಶ) ಇದರಲ್ಲಿ ಸಹ ಭಾಗಿಯಾಗಿದ್ದನು. ಆಂದೋಲನಕಾರರ ಒತ್ತಡಕ್ಕೆ ಮಣಿದು ತಡರಾತ್ರಿ ಪೊಲೀಸರು ನಾಲ್ಕು ಆರೋಪಿಗಳನ್ನು ಬಿಡುಗಡೆ ಮಾಡಬೇಕಾಯಿತು. ಈ ಆಂದೋಲನದ ವಿಡಿಯೋ ಎಲ್ಲೆಡೆ ಪ್ರಸಾರಗೊಳ್ಳುತ್ತಿದೆ. ಈ ಪ್ರಕರಣದಲ್ಲಿ ರಾಜ್ಯದ ಗೃಹ ಸಚಿವ ಡಾ. ನರೋತ್ತಮ ಮಿಶ್ರ ಇವರು, ದೂರು ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಗುಜರಾತ

ಗುಜರಾತನ ಊನಾದಲ್ಲಿ ನಡೆದಿರುವ ಆಂದೋಲನದ ಸಮಯದಲ್ಲಿ ‘ಸರ್ ತನ್ ಸೇ ಜೂದಾ’ ಈ ಘೋಷಣೆ ನೀಡುವವರಲ್ಲಿ ಕೆಲವು ಅಪ್ರಾಪ್ತ ಮಕ್ಕಳು ಇರುವ ವಿಡಿಯೋ ಬೆಳಕಿಗೆ ಬಂದಿದೆ. ಮತಾಂಧ ಮುಸಲ್ಮಾನರು ಇಲ್ಲಿಯ ಪೊಲೀಸ ಠಾಣೆಯ ಎದುರಿನಿಂದ ಹೋಗುತ್ತಿರುವ ಒಂದು ವಿಡಿಯೋ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರ

ಮಹಾರಾಷ್ಟ್ರದಲ್ಲಿನ ಅಮರಾವತಿಯಲ್ಲಿ ಡಿಜೆ ಮೇಲೆ ‘ಸರ್ ತನ್ ಸೇ ಜೂದಾ’ ಈ ಹಾಡು ನುಡಿಸುತ್ತಿರುವುದು ಬೆಳಕಿಗೆ ಬಂದಿದೆ. ಆ ಸಮಯದಲ್ಲಿ ಮತಾಂಧ ಮುಸಲ್ಮಾನರು ಈ ಹಾಡಿನ ಜೊತೆ ತಾವು ಹಾಡುವುದು ವಿಡಿಯೋದಲ್ಲಿ ಕಾಣುತ್ತಿದೆ. ಇಲ್ಲಿಯೂ ಕೂಡ ಹಸಿರು ಬಾವುಟ ಕೈಯಲ್ಲಿ ಹಿಡಿದಿರುವ ಅನೇಕ ಅಪ್ರಾಪ್ತ ಮಕ್ಕಳು ಕಾಣುತ್ತಿವೆ. ಇಲ್ಲಿಯ ಭಾಜಪದ ರಾಜ್ಯಸಭೆಯಲ್ಲಿ ಶಾಸಕ ಡಾ. ಅನಿಲ ಬೋಂಡೇ ಇವರು, ಘೋಷಣೆ ಕೂಗುವ ಮುಸಲ್ಮಾನ್ ಇವರು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ಗೆ ಸಂಬಂಧ ಪಟ್ಟವರಾಗಿದ್ದಾರೆ ಎಂದು ಹೇಳಿದರು.

ಇದೆ ರೀತಿ ಉತ್ತರ ಪ್ರದೇಶದ ಅಮೇಠಿ ಮತ್ತು ರಾಜಸ್ಥಾನದ ಜೋಧಪುರದಲ್ಲಿಯೂ ‘ಸರ್ ತನ್ ಸೇ ಜೂದಾ’ದ ಘೋಷಣೆ ನೀಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ.

ಸಂಪಾದಕೀಯ ನಿಲುವು

  • ಹಿಂದೂಗಳ ಭಾರತವನ್ನು ೨೦೪೭ರ ವರೆಗೆ ಇಸ್ಲಾಮೀ ರಾಷ್ಟ್ರವೆಂದು ಘೋಷಿಸುವ ಷಡ್ಯಂತ್ರ ಹೊಂದಿದ್ದ ‘ಪಿ.ಎಫ್.ಐ.’ನ ಮುಸುಕನ್ನು ತೆಗೆಯಲಾಗಿದ್ದರೂ ಅದರ ಬೆಂಬಲಿಗರ ಮೇಲೆ ಎಲ್ಲಿಯವರೆಗೆ ಕಾರ್ಯಾಚರಣೆಯಾಗುವುದಿಲ್ಲವೋ ಅಲ್ಲಿಯವರೆಗೆ ಹಿಂದೂಗಳ ಜೀವಕ್ಕೆ ಬಂದಿರುವ ಷಡ್ಯಂತ್ರವು ನಾಶವಾಗುವುದಿಲ್ಲ ! ಹಿಂದೂಗಳ ರಕ್ಷಣೆಯಾಗಲು ಹಿಂದೂರಾಷ್ಟ್ರದ ಸ್ಥಾಪನೆಯೇ ಏಕೈಕ ಮಾರ್ಗವಾಗಿದೆ ಎಂಬುದನ್ನು ಗಮನದಲ್ಲಿಡಿ !
  • ಭಾರತವು ಮುಸಲ್ಮಾನರಿಗಾಗಿ ಅಸುರಕ್ಷಿತವಾಗಿರುವುದಾಗಿ ಕಿರುಚಾಡುವ ಜಾತ್ಯತೀತರು ಈ ಘಟನೆ ಕಾಣಿಸುವುದಿಲ್ಲವೇ ? ಕಟ್ಟರತಾವಾದಿ ಬಹುಸಂಖ್ಯಾತರ ಕಥಿತ ಆಕ್ರಮಣಗಳಿಂದಾಗಿ ‘ಹೆದರಿರುವ ಭಾರತೀಯ ಮುಸಲ್ಮಾನರು’ ಎಂದು ಯಾವಾಗಲಾದರೂ ವರ್ತಿಸಬಹುದೇ ?