ಲಖಿಮಪುರ ಖಿರಿ (ಉತ್ತರ ಪ್ರದೇಶ) ಇಲ್ಲಿಯ ಇಬ್ಬರು ಅಪ್ರಾಪ್ತ ಹುಡುಗಿಯರ ಮೇಲೆ ಬಲಾತ್ಕಾರ ನಡೆಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೬ ಜನರ ಬಂಧನ

೬ ಜನರ ಬಂಧನ

ಲಖಿಮಪುರ ಖಿರಿ (ಉತ್ತರ ಪ್ರದೇಶ) – ಇಲ್ಲಿ ಸಪ್ಟೆಂಬರ್ ೧೪ ರಂದು ಇಬ್ಬರು ಅಪ್ರಾಪ್ತ ಹುಡುಗಿಯರ ಅಪಹರಣ ನಡೆಸಿ, ಬಲಾತ್ಕಾರ ಮಾಡಿ ನಂತರ ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ೬ ಜನರನ್ನು ಬಂಧಿಸಿದ್ದಾರೆ. ಛೋಟು ಗೌತಮ್, ಜುನೈದ, ಸುಹೇಲ್, ಕರಿಮುದ್ದಿನ್, ಆರೀಫ್ ಮತ್ತು ಹಾಫಿಜುರ ರಹಮಾನ್ ಎಂದು ಅವರ ಹೆಸರುಗಳಾಗಿವೆ. ಒಬ್ಬ ಆರೋಪಿಗೆ ಬಂಧಿಸುವಾಗ ಪೊಲೀಸರು ನಡೆಸಿರುವ ಗುಂಡಿನ ಹಾರಾಟದಲ್ಲಿ ಅವನು ಗಾಯಗೊಂಡನು. ಈ ಪ್ರಕರಣದಲ್ಲಿ ಪೊಲೀಸರು ನಡೆಸಿರುವ ಪ್ರಾಥಮಿಕ ವಿಚಾರಣೆಯಲ್ಲಿ ಹುಡುಗಿಯರು ಆರೋಪಿ ಯುವಕರ ಜೊತೆಗೆ ತಾವಾಗಿಯೇ ಹೋಗಿರುವುದು ಹೇಳಲಾಗುತ್ತಿದೆ. ಆದರೆ ಹುಡುಗಿಯ ತಾಯಿ ಮಾತ್ರ ಆರೋಪಿಯು ಆಕೆಯನ್ನು ಕರೆದುಕೊಂಡು ಹೋಗಿದ್ದಾನೆಂದು ಹೇಳಿದ್ದಾರೆ.

ಪೊಲೀಸರು, ಛೋಟು ಹುಡುಗಿಯನ್ನು ಇನ್ನೋರ್ವ ಯುವಕರ ಜೊತೆ ಪರಿಚಯ ಮಾಡಿಕೊಟ್ಟನು. ಘಟನೆಯ ಸಮಯದಲ್ಲಿ ಅವನು ಉಪಸ್ಥಿತ ಇರಲಿಲ್ಲ. ಹುಡುಗಿಯರನ್ನು ಜುನೈದ್ ಮತ್ತು ಸುಹೇಲ್ ಇವರ ಜೊತೆಗೆ ವಿವಾಹ ಮಾಡಿಕೊಳ್ಳುವುದಿತ್ತು ಮತ್ತು ಅದಕ್ಕಾಗಿ ಅವರ ಮೇಲೆ ಒತ್ತಡ ಹೇರಲಾಗಿತ್ತು. ಅವರು ಹುಡುಗಿಯರ ಜೊತೆಗೆ ಶಾರೀರಿಕ ಸಂಬಂಧ ಇರಿಸಿಕೊಂಡಿದ್ದರು. ಘಟನೆಯ ಸಮಯದಲ್ಲಿ ಸಂಬಂಧ ಇರಿಸಿದ ನಂತರ ಅವರನ್ನು ಕತ್ತುಹಿಸಿಕೀ ಕೊಲೆ ಮಾಡಿ ನಂತರ ಅವರನ್ನು ನೇಣು ಹಾಕಿದರು ಇದು ಕೊಲೆ ಅಲ್ಲ ಆತ್ಮಹತ್ಯೆ ಎಂದು ಅನಿಸಬೇಕು, ಎಂದು ತೋರಿಸುವ ಪ್ರಯತ್ನ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಕಾಮುಕರನ್ನು ಇಸ್ಲಾಮಿ ದೇಶದಲ್ಲಿ ಯಾವ ರೀತಿ ಶರಿಯತ ಕಾನೂನಿನ ಪ್ರಕಾರ ಸೊಂಟದವರೆಗೆ ಹಳ್ಳದಲ್ಲಿ ಹುಗಿದು ಕಲ್ಲಿನಿಂದ ಹೊಡೆದು ಕೊಲ್ಲುವ ಶಿಕ್ಷೆ ನೀಡುತ್ತಾರೆ ಆ ರೀತಿ ಶಿಕ್ಷೆ ನೀಡಬೇಕೆಂದು ಯಾರಾದರು ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ !