|

ರಾಯಪುರ (ಛತ್ತಿಸ್ಗಢ) – ಛತ್ತಿಸ್ಗಢ ರಾಜ್ಯದ ಬಾಲೋದ ಜಿಲ್ಲೆಯ ಘುಮಕಾ ಗ್ರಾಮದಲ್ಲಿ ಗ್ರಾಮಸ್ಥರಿಂದ ಸಾರಾಯಿ ನಿಷೇಧ ಘೋಷಿಸಲಾಗಿದೆ. ಗ್ರಾಮದಲ್ಲಿ ಯಾರಾದರೂ ಸಾರಾಯಿ ಮಾರಾಟ ಮಾಡಿದರೆ, ಅವರಿಗೆ ೫೧ ಸಾವಿರ ರೂಪಾಯಿ ದಂಡ ಭರಿಸುವ ನಿಯಮ ಮಾಡಲಾಗಿದೆ. ಸಾರಾಯಿ ಮಾರಾಟದ ಕಡೆಗೆ ನಿಗಾ ವಹಿಸಲು ೩ ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಸಾರಾಯಿ ಕುಡಿಯುವುದರಿಂದ ಆಗುವ ಅಪರಾಧಗಳನ್ನು ತಡೆಯುವದಕ್ಕಾಗಿ ಗ್ರಾಮಸ್ಥರು ಈ ನಿರ್ಣಯ ತೆಗೆದುಕೊಂಡ್ಡಿದ್ದಾರೆ. ಸರಪಂಚ ಮಿಲಾಪ ಸಿಂಹ ಠಾಕೂರ ಅವರು, ಘುಮಕಾ ಗ್ರಾಮದ ಪ್ರತಿಯೊಂದು ಮನೆಯ ಒಬ್ಬ ವ್ಯಕ್ತಿ ವ್ಯಸನಾಧೀನನಾಗಿದ್ದರು. ಇದರಿಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆಗುವ ತೊಂದರೆ ಸಹಿಸಬೇಕಾಗುತ್ತಿತ್ತು. ಮಹಿಳೆಯರು ಈ ಸಂದರ್ಭದಲ್ಲಿ ಮಾಡಿರುವ ವಿನಂತಿಯ ಮೇರೆಗೆ ಗ್ರಾಮದಲ್ಲಿ ಸಾರಾಯಿ ನಿಷೇಧಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಪ್ರತಿಯೊಂದು ಸರಕಾರ ತೆರಿಗೆಗಾಗಿ ಸಾರಾಯಿ ಮಾರಾಟಕ್ಕೆ ಅನುಮತಿ ನೀಡುತ್ತದೆ ಮತ್ತು ಸಮಾಜದ ಅಧೋಗತಿ ಮಾಡುತ್ತದೆ. ‘ಕೆಲವು ರಾಜ್ಯಗಳಲ್ಲಿ ಸಾರಾಯಿ ಮಾರಾಟ ನಿಷೇಧವಿದ್ದರೂ ಅದು ಕೇವಲ ಕಾಗದ ಪತ್ರಗಳ ಮೇಲೆ ಇರುತ್ತದೆ’, ಅದು ನಮಗೆ ಇಲ್ಲಿಯವರೆಗೆ ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಘುಮಕಾ ಗ್ರಾಮ ಮಾಡಿರುವ ಪ್ರಯತ್ನ ಶ್ಲಾಘನೀಯವಾಗಿದೆ. ದೇಶದ ಪ್ರತಿಯೊಂದು ಗ್ರಾಮವು ಈ ರೀತಿಯಲ್ಲಿ ಪ್ರಯತ್ನಿಸಿದರೇ, ಭಾರತದಲ್ಲಿ ನಡೆಯುವ ಅಧೋಗತಿ ಸ್ವಲ್ಪ ಪ್ರಮಾಣದಲ್ಲಿ ನಿಲ್ಲುವುದು ! |
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ
ಕೇಂದ್ರೀಯ ಕಾಯ್ದೆಯಡಿಯ ಶಿಕ್ಷೆ ಈಗಾಗಲೇ ಪೂರ್ಣಗೊಂಡಿದ್ದರೆ, ಅವಧಿಗೂ ಮುನ್ನ ಬಿಡುಗಡೆ ಏಕೆ ಇಲ್ಲ?
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished