|

ರಾಯಪುರ (ಛತ್ತಿಸ್ಗಢ) – ಛತ್ತಿಸ್ಗಢ ರಾಜ್ಯದ ಬಾಲೋದ ಜಿಲ್ಲೆಯ ಘುಮಕಾ ಗ್ರಾಮದಲ್ಲಿ ಗ್ರಾಮಸ್ಥರಿಂದ ಸಾರಾಯಿ ನಿಷೇಧ ಘೋಷಿಸಲಾಗಿದೆ. ಗ್ರಾಮದಲ್ಲಿ ಯಾರಾದರೂ ಸಾರಾಯಿ ಮಾರಾಟ ಮಾಡಿದರೆ, ಅವರಿಗೆ ೫೧ ಸಾವಿರ ರೂಪಾಯಿ ದಂಡ ಭರಿಸುವ ನಿಯಮ ಮಾಡಲಾಗಿದೆ. ಸಾರಾಯಿ ಮಾರಾಟದ ಕಡೆಗೆ ನಿಗಾ ವಹಿಸಲು ೩ ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಸಾರಾಯಿ ಕುಡಿಯುವುದರಿಂದ ಆಗುವ ಅಪರಾಧಗಳನ್ನು ತಡೆಯುವದಕ್ಕಾಗಿ ಗ್ರಾಮಸ್ಥರು ಈ ನಿರ್ಣಯ ತೆಗೆದುಕೊಂಡ್ಡಿದ್ದಾರೆ. ಸರಪಂಚ ಮಿಲಾಪ ಸಿಂಹ ಠಾಕೂರ ಅವರು, ಘುಮಕಾ ಗ್ರಾಮದ ಪ್ರತಿಯೊಂದು ಮನೆಯ ಒಬ್ಬ ವ್ಯಕ್ತಿ ವ್ಯಸನಾಧೀನನಾಗಿದ್ದರು. ಇದರಿಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆಗುವ ತೊಂದರೆ ಸಹಿಸಬೇಕಾಗುತ್ತಿತ್ತು. ಮಹಿಳೆಯರು ಈ ಸಂದರ್ಭದಲ್ಲಿ ಮಾಡಿರುವ ವಿನಂತಿಯ ಮೇರೆಗೆ ಗ್ರಾಮದಲ್ಲಿ ಸಾರಾಯಿ ನಿಷೇಧಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಪ್ರತಿಯೊಂದು ಸರಕಾರ ತೆರಿಗೆಗಾಗಿ ಸಾರಾಯಿ ಮಾರಾಟಕ್ಕೆ ಅನುಮತಿ ನೀಡುತ್ತದೆ ಮತ್ತು ಸಮಾಜದ ಅಧೋಗತಿ ಮಾಡುತ್ತದೆ. ‘ಕೆಲವು ರಾಜ್ಯಗಳಲ್ಲಿ ಸಾರಾಯಿ ಮಾರಾಟ ನಿಷೇಧವಿದ್ದರೂ ಅದು ಕೇವಲ ಕಾಗದ ಪತ್ರಗಳ ಮೇಲೆ ಇರುತ್ತದೆ’, ಅದು ನಮಗೆ ಇಲ್ಲಿಯವರೆಗೆ ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಘುಮಕಾ ಗ್ರಾಮ ಮಾಡಿರುವ ಪ್ರಯತ್ನ ಶ್ಲಾಘನೀಯವಾಗಿದೆ. ದೇಶದ ಪ್ರತಿಯೊಂದು ಗ್ರಾಮವು ಈ ರೀತಿಯಲ್ಲಿ ಪ್ರಯತ್ನಿಸಿದರೇ, ಭಾರತದಲ್ಲಿ ನಡೆಯುವ ಅಧೋಗತಿ ಸ್ವಲ್ಪ ಪ್ರಮಾಣದಲ್ಲಿ ನಿಲ್ಲುವುದು ! |
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !
ಛತ್ತೀಸಗಢದ ಅಲೀಶಾ ಖಾತೂನ್ ಉತ್ತರ ಪ್ರದೇಶದ ಜೋಗೇಂದ್ರ ಸೈನಿಯನ್ನು ವಿವಾಹವಾದರು!
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ
ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿಯ ಮಾಹಿತಿ