ಹಾಜಿಪುರದಲ್ಲಿ ಸಾಧುಗಳ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ೫ ಮುಸಲ್ಮಾನ ಯುವಕರನ್ನು ಬಜರಂಗ ದಳ ಹಿಡಿದಿದೆ !

ವೈಶಾಲಿ (ಬಿಹಾರ) – ಇಲ್ಲಿಯ ಹಾಜಿಪುರದಲ್ಲಿ ಸಾಧುಗಳ ವೇಷ ಧರಿಸಿ ಮತ್ತು ಅಲಂಕರಿಸಿರುವ ಎತ್ತನ್ನು ಹಿಡಿದುಕೊಂಡು ಭಿಕ್ಷೆ ಬೇಡುವ ೫ ಮುಸಲ್ಮಾನ ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಅವರ ವಿಚಾರಣೆ ನಡೆಸುತ್ತಿದ್ದಾರೆ. ಬಜರಂಗದಳದ ಕಾರ್ಯಕರ್ತರು ಅವರನ್ನು ಹಿಡಿದಿದ್ದಾರೆ ಮತ್ತು ಪೊಲೀಸರ ವಶಕ್ಕೆ ನೀಡಿದ್ದಾರೆ. ಅವರಿಂದ ೨ ಆಧಾರ ಕಾರ್ಡ್ ಮತ್ತು ೫ ಸಂಚಾರಿವಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರೆಲ್ಲರೂ ಉತ್ತರ ಪ್ರದೇಶದ ನಿವಾಸಿಗಳು.

ಬಜರಂಗ ದಳದ ಜಿಲ್ಲಾಧ್ಯಕ್ಷ ಆರ್ಯಾನ್ ಸಿಂಹ ಇವರು, ಇವರೆಲ್ಲರೂ ರೋಹಿಂಗ್ಯ ಮುಸಲ್ಮಾನರು. ಅವರು ಯಾವುದಾದರೂ ಸಂಘಟನೆಯ ಜೊತೆ ಸಂಬಂಧ ಹೊಂದಿದ್ದಾರೆ. ಇದು ಒಂದು ಷಡ್ಯಂತ್ರವಾಗಿದೆ ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಸಾಧುಗಳ ವೇಷ ಧರಿಸಿ ಕೇವಲ ಭಿಕ್ಷೆ ಬೇಡುವ ಪ್ರಯತ್ನವೋ ಏನಾದರೂ ದೊಡ್ದ ಷಡ್ಯಂತ್ರವೋ ಎಂಬುವುದನ್ನು ಪೊಲೀಸರು ಆಳವಾದ ವಿಚಾರಣೆ ನಡೆಸಿ ಹುಡುಕಬೇಕು. ಇದರ ಜೊತೆಗೆ ಇಂತಹವರನ್ನು ಜನ್ಮವಿಡೀ ಜೈಲಿಗಟ್ಟುವ ಪ್ರಯತ್ನ ಮಾಡಬೇಕು.

ಬಜರಂಗ ದಳಕ್ಕೆ ಗಮನಕ್ಕೆ ಬಂದ ವಿಷಯ ಪೊಲೀಸ ಗುಪ್ತಚರ ಇಲಾಖೆಯ ಗಮನಕ್ಕೆ ಬರುವುದಿಲ್ಲವೇ? ಅಥವಾ ಅದು ನಿಷ್ಕ್ರಿಯವಾಗಿದೆಯೇ ?