ಬಾಗಪತ (ಉತ್ತರ ಪ್ರದೇಶ)ದಲ್ಲಿ ಮುಸಲ್ಮಾನರ ವಿರೋಧದ ನಂತರವೂ ಕಳೆದ ೫ ವರ್ಷಗಳಿಂದ ಕಾವಡ ಯಾತ್ರೆಯಲ್ಲಿ ಸಹಭಾಗಿ ಆಗುವ ಬಾಬು ಖಾನ !

ಪ್ರತಿದಿನ ಶಿವಮಂದಿರದ ಸ್ವಚ್ಛತೆ ಮಾಡುತ್ತಾರೆ !

ಬಾಗಪಾತ(ಉತ್ತರ ಪ್ರದೇಶ) – ಇಲ್ಲಿಯ ಬಾಬು ಖಾನ ಕಳೆದ ೫ ವರ್ಷಗಳಿಂದ ಕಾವಡ ಯಾತ್ರೆ ಮಾಡುತ್ತಿದ್ದಾರೆ. ೨೦೧೮ ರಲ್ಲಿ ಅವರು ಮೊದಲ ಬಾರಿ ಕಾವಡ ಯಾತ್ರೆ ಮಾಡಿದ್ದರು, ಆಗ ಅವರಿಗೆ ಸ್ಥಳೀಯ ಮುಸಲ್ಮಾನರು ಮಸೀದಿಯಿಂದ ಹೊರಗೆ ಹಾಕಿದ್ದರು; ಆದರೂ ಅವರು ಕಳೆದ ೫ ವರ್ಷಗಳಿಂದ ಕಾವಡ ಯಾತ್ರೆಯಲ್ಲಿ ಸಹಭಾಗಿ ಆಗುತ್ತಾರೆ.

ಬಾಬು ಖಾನ ಅವರು, ಯಾವಾಗ ನಾನು ಮೊದಲು ಬಾರಿ ಕಾವಡ ಯಾತ್ರೆಯಲ್ಲಿ ಸಹಭಾಗಿಯಾದೆ, ಆಗ ಮನೆಯಲ್ಲಿ ಜಗಳವಾಯಿತು. ನಾನು ಕುಟುಂಬದವರನ್ನು ಹೇಗೋ ಸಮಾಧಾನ ಮಾಡಿದೆ, ಆ ಸಮಯದಲ್ಲಿ ಯಾತ್ರೆಯಿಂದ ಬಂದ ಮೇಲೆ ಮಹಾದೇವ ಮಂದಿರದಲ್ಲಿ ಜಲಾಭಿಷೇಕ ಮಾಡಿದೆ. ಮರುದಿನ ಮಸೀದಿಯಲ್ಲಿ ನಮಾಜಗಾಗಿ ಹೋದಾಗ ಅವರು ನನ್ನ ಮೇಲೆ ಬಹಿಷ್ಕಾರ ಹೇರಿ ನನ್ನನ್ನು ಹೊರಗೆ ಹಾಕಿದರು. ಈ ವಿಷಯವಾಗಿ ನಾನು ಪೊಲೀಸರಲ್ಲಿ ದೂರು ನೀಡಿದ ನಂತರ ಮಸೀದಿಯಿಂದ ಹೊರಗೆ ಹಾಕುವವರಿಗೆ ಬಂಧಿಸಲಾಯಿತು. ಈಗ ನಾನು ಬೆಳಿಗ್ಗೆ ೫ ಗಂಟೆಗೆ ಮಸೀದಿಗೆ ಹೋಗಿ ನಮಾಜ್ ಮಾಡುತ್ತೇನೆ ನಂತರ ಶಿವಮಂದಿರಕ್ಕೆ ಹೋಗಿ ಸ್ವಚ್ಛತೆ ಮಾಡುತ್ತೇನೆ. ನಾನು ಇಸ್ಲಾಂ ತ್ಯಜಿಸಿಲ್ಲ, ಆದರೆ ನನಗೆ ಕಾವಡ ಯಾತ್ರೆಯ ಮೇಲೆ ಶ್ರದ್ಧೆಯಿದೆ. ಆದ್ದರಿಂದ ನಾನು ಪ್ರತಿ ವರ್ಷ ಹರಿದ್ವಾರಕ್ಕೆ ಹೋಗುತ್ತೇನೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಕಾವಡ ಯಾತ್ರೆಯಲ್ಲಿ ಸಹಭಾಗಿಯಾದ ನಂತರ ವಿರೋಧ ಮಾಡುವ ಮುಸಲ್ಮಾನರು ಜಾತ್ಯತೀತ ಮತ್ತು ಪ್ರಗತಿ(ಅಧೋಗತಿ)ಪರರು ಈ ಸರ್ವಧರ್ಮ ಸಮಭಾವದ ಮತ್ತು ಜಾತ್ಯತೀತೆಯ ಉಪದೇಶ ಏಕೆ ಕೊಡುವುದಿಲ್ಲ ಅಥವಾ ಈ ಉಪದೇಶ ಕೇವಲ ಸಹಿಷ್ಣು ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಹಿಂದೂಗಳಿಗಾಗಿ ಇದೆ, ಎಂದು ಅವರಿಗೆ ಅನಿಸುತ್ತಿದೆಯೇ ?
  • ಹಿಂದೂಗಳು ಮುಸಲ್ಮಾನರ ಹಬ್ಬಗಳಲ್ಲಿ ಇಫ್ತಾರ್‌ಗಾಗಿ ಸಹಭಾಗಿ ಆಗುತ್ತಾರೆ; ಆದರೆ ಕೆಲವೇ ಕೆಲವು ಮುಸಲ್ಮಾನರು ಹಿಂದೂಗಳ ಹಬ್ಬದಲ್ಲಿ ಸಹಭಾಗಿಯಾಗುವುದು ಬಿಟ್ಟರೆ, ಹಿಂದೂಗಳ ಹಬ್ಬದಲ್ಲಿ ಅವರು ಎಂದು ಸಹಭಾಗಿ ಆಗುವದಿಲ್ಲ, ತದ್ವಿರುದ್ಧ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ದಾಳಿ ನಡೆಸುವುದು ವಾಸ್ತವವಾಗಿದೆ !