
ಬರೇಲಿ (ಉತ್ತರ ಪ್ರದೇಶ) – ಇಲ್ಲಿ ಕಾವಡ ಯಾತ್ರಿಕರ ಮಾರ್ಗದಲ್ಲಿ ಬಿರಿಯಾನಿ ಮತ್ತು ಮಾಂಸ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚುವ ಆದೇಶ ಪಾಲಿಕೆ ಆಡಳಿತದಿಂದ ನೀಡಲಾಗಿತ್ತು. ಆದರೂ ಕೂಡ ಕೆಲವು ಸ್ಥಳಗಳಲ್ಲಿ ಅಂಗಡಿಗಳು ತೆರೆದಿದ್ದವು. ಈ ಅಂಗಡಿಗಳನ್ನು ಮುಚ್ಚಿಸಲು ಪಾಲಿಕೆ ದಳದ ಜೊತೆಗೆ ಹೋಗಿರುವ ಭಾಜಪದ ನಾಯಕ ಅಂಕಿತ ಭಾಟಿಯಾ ಮತ್ತು ಇನ್ನೂ ಕೆಲವು ಜನರ ಮೇಲೆ ಮತಾಂಧರು ಕತ್ತಿ ಮತ್ತು ಲಾಠೀ ಕೋಲುಗಳೊಂದಿಗೆ ದಾಳಿ ಮಾಡಿದರು. ಇದರಲ್ಲಿ ಅಂಕಿತ ಭಾಟಿಯಾ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಸಿಟಿವಿಯಲ್ಲಿ ಈ ದಾಳಿಯು ಚಿತ್ರೀಕರಣ ಆಗಿದೆ. ಈ ಘಟನೆಯ ನಂತರ ಉದ್ರಿಕ್ತ ಹಿಂದೂಗಳು ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು. ಈಗ ಅಲ್ಲಿ ಶಾಂತಿ ನೆಲೆಸಿದರೂ ವಾತಾವರಣದಲ್ಲಿ ಉದ್ವಿಗ್ನತೆಯಿದೆ. ಇಲ್ಲಿಯ ರಾಮ ಜಾನಕಿ ದೇವಸ್ಥಾನದ ಹತ್ತಿರ ಈ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ೪ ಜನರನ್ನು ವಶಕ್ಕೆ ಪಡೆಯಲಾಗಿದ್ದು ಅವರ ವಿಚಾರಣೆ ನಡೆಯುತ್ತಿದೆ.
(ಸೌಜನ್ಯ : Zee News)
| ಸಂಪಾದಕೀಯ ನಿಲುವು
ಕಾವಡ ಯಾತ್ರೆಯ ಮಾರ್ಗದಲ್ಲಿ ಮಾಂಸ ಅಂಗಡಿಗಳು ಮುಚ್ಚುವ ಬರೇಲಿ ಪಾಲಿಕೆಯ ಆದೇಶದ ಉಲ್ಲಂಘನೆ ! ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಭಾಜಪದ ನಾಯಕರ ಮೇಲೆ ಈ ರೀತಿಯ ದಾಳಿ ಮಾಡುವ ಧೈರ್ಯ ಮತಾಂಧರಿಗೆ ಹೇಗೆ ಬರುತ್ತದೆ? |
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!