ಜಾರ್ಖಂಡದಲ್ಲಿ ಸಂಸದ ಓವೈಸಿಯನ್ನು ‘ಪಾಕಿಸ್ತಾನ ಜಿಂದಾಬಾದ’ ಘೋಷಣೆಯೋಂದಿಗೆ ಸ್ವಾಗತಿಸಲಾಯಿತು !

ರಾಂಚಿ – ಇಲ್ಲಿಯ ಉಪಚುನಾವಣೆ ಪ್ರಚಾರಕ್ಕಾಗಿ ಬಂದಿದ್ದ ಎಂ.ಐ.ಎಂ. ಪಕ್ಷದ ಅಧ್ಯಕ್ಷ ಸಂಸದ ಅಸಾದುದ್ದಿನ ಓವೈಸಿಯ ಸ್ವಾಗತವನ್ನು ‘ಪಾಕಿಸ್ತಾನ ಜಿಂದಾಬಾದ’ ಘೋಷಣೆಯೋಂದಿಗೆ ಮಾಡಲಾಯಿತು. ಈ ಘೋಷಣೆಯನ್ನು ನೀಡಿದವರ ಗುರುತು ಪತ್ತೆಯಾಗಿಲ್ಲ. ಜೂನ ೧೯ರ ಮಧ್ಯಾಹ್ನ ಈ ಘಟನೆ ನಡೆದಿದೆ. ರಾಂಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಓವೈಸಿ ಅವರನ್ನು ಕಾರ್ಯಕರ್ತರು ಸ್ವಾಗತಿಸಿದರು, ಆ ಸಮಯದಲ್ಲಿ ಘೋಷಣೆ ನೀಡಲಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲಿದೆ. ಈ ಘಟನೆಯ ಕುರಿತು ಆಳವಾದ ತನಿಖೆ ನಡೆಸಲಾಗುವುದು ಎಂದು ರಾಂಚಿ ಪೊಲೀಸ ವರಿಷ್ಠಾಧಿಕಾರಿ ಅಂಶುಮನ ಕುಮಾರ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇದರಿಂದ ಮತಾಂಧರಿಗೆ ಪೊಲೀಸ, ಆಡಳಿತ, ಸರಕಾರ, ಕಾನೂನು ಇತ್ಯಾದಿಗಳ ಭಯ ಉಳಿದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ರೀತಿಯಲ್ಲಿ ಆಗುವುದು ಇದು ಸರಕಾರಿ ಸಂಸ್ಥೆಗಳಿಗೆ ನಾಚಿಕೆಗೇಡಿನ ಸಂಗತಿ !