ಶಾಲೆಯ ಆಡಳಿತದಿಂದ ಕಾರ್ಯಾಚರಣೆಗೆ ವಿರೋಧ
ಅನಧಿಕೃತ ಕಟ್ಟಡ ನಿರ್ಮಾಣವಾಗುವವರೆಗೆ ಆಡಳಿತ ನಿದ್ದೆ ಮಾಡುತ್ತಿತ್ತೆ ? ಎಂಬ ಪ್ರಶ್ನೆ ಯಾವಾಗಲೂ ನಿರ್ಮಾಣವಾಗುತ್ತವೆ !

ಆಗ್ರಾ (ಉತ್ತರ ಪ್ರದೇಶ) – ಇಲ್ಲಿಯ ಮಾಲ್ ರಸ್ತೆಯಲ್ಲಿರುವ ಆಥನಿ ಗರ್ಲ್ಸ್ ಸ್ಕೂಲ್ಗೆ ನೋಟಿಸ್ ಜಾರಿ ಮಾಡಿದ್ದರೂ ಕಾನೂನುಬಾಹಿರ ಕಟ್ಟಡ ತೆರವುಗೊಳಿಸದೆ ಇದ್ದರಿಂದ ‘ಕಂಟೋನ್ಮೆಂಟ್ ಬೋರ್ಡ್’ನ ಪಡೆಯು ಶಾಲೆಯ ಪರಿಸರದಲ್ಲಿರುವ ಸೈಕಲ್ ಸ್ಟ್ಯಾಂಡ್, ವ್ಯಾಸಪೀಠ ಮತ್ತು ಗಾರ್ಡ್ ರೂಮ್ನ ಕಟ್ಟಡವನ್ನು ಬುಲ್ಡೋಜರ್ದಿಂದ ನೆಲಸಮ ಮಾಡಿದ್ದಾರೆ. ಶಾಲಾ ಆಡಳಿತವು ಮಾತ್ರ ಈ ಕಾನೂನು ಬಾಹಿರ ಕಟ್ಟಡವನ್ನು ನೆಲಸಮ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ‘ಇನ್ನೊಂದು ಕಡೆಗೆ ಸರಕಾರ ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬ ಮಾತುಗಳನ್ನು ಹೇಳುತ್ತದೆ ಹಾಗೂ ಇನ್ನೊಂದೆಡೆಗೆ ಅದೇ ಸರಕಾರದ ಕಾರ್ಮಿಕರು ಶಾಲೆಯನ್ನು ನೆಲಸಮ ಮಾಡುವ ಕೆಲಸ ಮಾಡುತ್ತಾರೆ’, ಇಂದು ಶಾಲೆಯ ಶಿಕ್ಷಕರು ಹೇಳಿದ್ದಾರೆ. (ಈ ಯುಕ್ತವಾದವೆಂದರೆ ಕಳ್ಳನಿಗೊಂದು ಪಿಳ್ಳೆ ನೆವವೇ ಆಗಿದೆ ! ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ಕಾನೂನುಬಾಹಿರ ಕಟ್ಟಡ ನಿರ್ಮಾಣ ಮಾಡಬಹುದೆಂದು ಸರಕಾರ ಎಲ್ಲಿಯೂ ಹೇಳಿಲ್ಲ; ಆದರೆ ಕಾನ್ವೆಂಟ್ ಶಾಲೆ ಈ ರೀತಿ ಕಾನೂನುಬಾಹಿರ ಕೆಲಸ ಮಾಡಿ ಒಂದು ರೀತಿಯಲ್ಲಿ ಶಾಲೆಗೆ ಕಲಂಕ ತರುತ್ತಿದ್ದಾರೆ, ಇದು ಅವರ ಗಮನಕ್ಕೆ ಬರುವುದಿಲ್ಲವೇ ? – ಸಂಪಾದಕರು)
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!