ದೇಶವಿರೋಧಿ ಕಾರ್ಯಾಚರಣೆ ನಡೆಸಲು ಹಣ ಕೂಡಿಸಿದ ಪ್ರಕರಣದಲ್ಲಿ ಪಾಪ್ಯುಲರ ಫ್ರಂಟ ಆಫ್ ಇಂಡಿಯಾದ ಅಧಿಕಾರಿಯ ಬಂಧನ !

ದೇಶದಿಂದ ಓಡಿಹೋಗುವ ಪ್ರಯತ್ನದಲ್ಲಿರುವಾಗ ಅವನನ್ನು ತಡೆದರು !

ದೇಶ ಘಾತಕ ಕಾರ್ಯಾಚರಣೆಯನ್ನು ಮಾಡುವ ಪಾಪ್ಯುಲರ ಫ್ರಂಟ ಆಫ್ ಇಂಡಿಯಾದ ಮೇಲೆ ಯಾವಾಗ ನಿರ್ಬಂಧ ಹೇರಲಾಗುವುದು ?

ನವ ದೆಹಲಿ – ಜಾರಿ ನಿರ್ದೇಶನಾಲು (‘ಈಡಿ’ಯು) ಕೇರಳದ ಕೊಳಿಕೊಡ ವಿಮಾನ ನಿಲ್ದಾಣದಿಂದ ಪಾಪ್ಯುಲರ ಫ್ರಂಟ ಆಫ್ ಇಂಡಿಯಾದ ಅಧಿಕಾರಿ ಅಬ್ದುಲ ರಜ್ಜಾಕ ಬಿಪಿ ಎಂಬುವವನನ್ನು ಬಂಧಿಸಿದೆ. ಆತ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವಾಗ ಹಿಡಿದುಕೊಳ್ಳಲಾಯಿತು. ಅವನ ಮೇಲೆ ದೇಶವಿರೋಧಿ ಕಾರ್ಯಾಚರಣೆಗಾಗಿ ಹಣ ಸೇರಿಸುತ್ತಿರುವ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಯಿತು.
ಪಾಪ್ಯುಲರ ಫ್ರಂಟ ಆಫ್ ಇಂಡಿಯಾ ಕೇರಳದ ಅಧ್ಯಕ್ಷ ಸಿ.ಪಿ. ಮಹಂಮದ ಬಶೀರ ಈ ವಿಷಯದ ಬಗ್ಗೆ, ಜಾರಿ ನಿರ್ದೇಶನಾಲಯದ ಅಧಿಕಾರಿ ಉದ್ದೇಶಪೂರ್ವಕವಾಗಿ ರಜ್ಜಾಕನನ್ನು ಬಂಧಿಸಿ ಅವನನ್ನು ಬಲಿಪಶು ಮಾಡುವನ್ನಾಗಿ ಪ್ರಯತ್ನಿಸಿದೆ. ‘ಈಡಿ’ಯ ಕಾರ್ಯಾಚರಣೆ ಖಂಡನೀಯವಾಗಿದೆ ಎಂದು ಹೇಳಿದರು.