ಇಂತಹವರಿಗೆ ಶರಿಯತ್ ಕಾನೂನಿನ ಅನುಸಾರ ಕೈಕಾಲು ಕತ್ತರಿಸುವ ಶಿಕ್ಷೆಯನ್ನು ನೀಡಬೇಕು ಎಂದು ಯಾರಾದರೂ ಮನವಿ ಮಾಡಿದರೆ ಆಶ್ಚರ್ಯವೆನಿಸಬಾರದು !

ಭಾಗ್ಯನಗರ – ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ತೆಲಂಗಾಣಾ ರಾಷ್ಟ್ರ ಸಮಿತಿಯ ನೇತಾರ ಸಾಜಿದ ಖಾನನು ಓರ್ವ ೧೫ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಘಟನೆಯು ಫೆಬ್ರುವರಿ ೨೭ರಂದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ೩ ಜನರ ವಿರುದ್ಧ ‘ಪೋಕ್ಸೋ’ ಕಾನೂನಿನ ಅಡಿಯಲ್ಲಿ ಅಪರಾಧ ದಾಖಲಿಸಿದ್ದಾರೆ. ಘಟನೆಯ ನಂತರ ಸಾಜಿದ ಖಾನನು ಪರಾರಿಯಾಗಿದ್ದು, ಪೊಲೀಸರು ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಓರ್ವ ಮಹಿಳೆಯೂ ಇದ್ದಾರೆ. ಖಾನನು ನಿರ್ಮಲ ಜಿಲ್ಲೆಯಲ್ಲಿನ ಒಂದು ನಗರಪಾಲಿಕೆಯ ಪರಿಷತ್ತಿನ ಉಪಾಧ್ಯಕ್ಷನಾಗಿದ್ದನು. ಆರೋಪಿ ಮಹಿಳೆಯು ಸಂತ್ರಸ್ತೆಯನ್ನು ಕಾರ್ಯಕ್ರಮಕ್ಕೆ ಒಯ್ಯುವ ನೆಪ ಹೇಳಿ ಭಾಗ್ಯನಗರ (ಹೈದ್ರಾಬಾದ)ಕ್ಕೆ ಕರೆತಂದಳು. ಅಲ್ಲಿ ಆಕೆಯನ್ನು ಹೋಟೆಲಿನಲ್ಲಿ ಇರಿಸಲಾಯಿತು. ಅಲ್ಲಿಯೇ ಖಾನನು ಆಕೆಯ ಮೇಲೆ ಬಲಾತ್ಕಾರ ಮಾಡಿದನು. ಸಂತ್ರಸ್ತೆಯ ಆರೋಗ್ಯವು ಹದಗೆಟ್ಟ ನಂತರ ಈ ಘಟನೆಯು ಬಹಿರಂಗವಾಗಿದೆ. ಬಾಲ ಕಲ್ಯಾಣ ಸಮಿತಿಯು ಈ ಘಟನೆಯ ಮಾಹಿತಿಯನ್ನು ಪೊಲೀಸರಿಗೆ ನೀಡಿದೆ. ಖಾನನನ್ನು ಬಂಧಿಸಲು ಪೊಲೀಸರ ೪ ಗುಂಪುಗಳನ್ನು ಸಿದ್ಧಗೊಳಿಸಲಾಗಿರುವುದಾಗಿ ಪೊಲೀಸ ಅಧೀಕ್ಷರರಾದ ಪ್ರವೀಣ ಕುಮಾರರವರು ಹೇಳಿದ್ದಾರೆ.
#तेलंगाना के निर्मल शहर में पुलिस ने बुधवार को निर्मल नगर परिषद के उपाध्यक्ष साजिद खान को गिरफ्तार कर लिया, जो एक नाबालिग लड़की से कथित तौर पर दुष्कर्म के आरोप में मामला दर्ज होने के बाद से फरार था।
पुलिस अधिकारी ने कहा कि आरोपी कुछ अन्य मामलों में भी शामिल था। pic.twitter.com/187ZRCqGVm
— IANS Hindi (@IANSKhabar) March 2, 2022
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ