ಮೈಸೂರು -ಬೆಂಗಳೂರು ಟಿಪ್ಪು ಎಕ್ಸಪ್ರೆಸ್ನ ಹೆಸರನ್ನು ಒಡೆಯರ್ ಎಕ್ಸಪ್ರೆಸ್ ಎಂದು ಬದಲಾಯಿಸಿ ! – ಮೈಸೂರಿನ ಭಾಜಪದ ಶಾಸಕ ಪ್ರತಾಪ್ ಸಿಂಹರವರ ಬೇಡಿಕೆ

ಈ ರೀತಿಯ ಬೇಡಿಕೆಯನ್ನು ಮಾಡುವಂತಾಗಬಾರದು ರೈಲ್ವೆ ಇಲಾಖೆಯು ತಾವಾಗಿಯೇ ಈ ಬದಲಾವಣೆಯನ್ನು ಮಾಡಬೇಕು !

ಆಕ್ರಮಣಕಾರನ ಸ್ಮೃತಿಯನ್ನು ಒರಸುವ ಬದಲು ಅದನ್ನು ವರ್ಷಗಟ್ಟಲೆ ಕಾಪಾಡುವ ಜಗತ್ತಿನ ಏಕೈಕ ದೇಶ ಭಾರತ !

ಪ್ರಾತಿನಿಧಿಕ ಚಿತ್ರ

ಮೈಸೂರು – ಇಲ್ಲಿಯ ಭಾಜಪದ ಶಾಸಕ ಪ್ರತಾಪ ಸಿಂಹ ಇವರು ಮೈಸೂರು -ಬೆಂಗಳೂರು ಟಿಪ್ಪು ಎಕ್ಸಪ್ರೆಸ್ನ ಹೆಸರನ್ನು ಬದಲಿಸಿ ಒಡೆಯರ ಎಕ್ಸಪ್ರೆಸ್ ಮಾಡುವಂತೆ ರೈಲ್ವೆ ಸಚಿವ ಶ್ರೀ. ಅಶ್ವಿನಿ ವೈಷ್ಣವ್ ಇವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಸಿಂಹ ಇವರು ಪತ್ರದಲ್ಲಿ ಎಲ್ಲಿಯು ಟಿಪ್ಪುವಿನ ಹೆಸರನ್ನು ತೆಗೆದುಕೊಳ್ಳದೆ ಕೇವಲ ರೈಲಿನ ಸಂಖ್ಯೆಯನ್ನು ಬರೆದಿದ್ದಾರೆ.

ಸಿಂಹ ಇವರು ಪತ್ರದಲ್ಲಿ, ಮೈಸೂರು ಸಂಸ್ಥಾನದ ಒಡೆಯರ ಮಹಾರಾಜರ ರೈಲ್ವೆಯ ಅಭಿವೃದ್ಧಿಯಲ್ಲಿ ದೊಡ್ಡ ಯೋಗದಾನವಿದೆ. ಅವನ (ಟಿಪ್ಪು ಸುಲ್ತಾನನ) ಕಾಲದಲ್ಲಿ ರಾಜ್ಯದ ವಿಕಾಸಕ್ಕಾಗಿ ನೀಡಿದ ಯೋಗದಾನವು ಯಾವುದೇ ಐತಿಹಾಸಿಕವಾದ ಪುರಾವೆಯಿಲ್ಲ ಎಂದು ಹೇಳಿದ್ದಾರೆ.