ಬಿಹಾರದಲ್ಲಿ ಭಾಜಪದ ಸಚಿವನ ಮಗನಿಂದ ಮಕ್ಕಳನ್ನು ಥಳಿಸುತ್ತಾ ಗುಂಡಿನ ದಾಳಿ

ಗ್ರಾಮಸ್ಥರು ಅಟ್ಟಿಸಿಕೊಂಡು ಹೋಗಿದ್ದರಿಂದ ವಾಹನ ಬಿಟ್ಟು ಪರಾರಿ !

ಭಾಜಪದ ಸಚಿವರ ಮಗನಿಂದ ಈ ರೀತಿಯ ನಡೆಯುವುದು ರಾಷ್ಟ್ರಪ್ರೇಮಿಗಳಿಗೆ ಅಪೇಕ್ಷಿತವಿಲ್ಲ. ಸರಕಾರವು ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !

ಚಂಪಾರಣ (ಬಿಹಾರ) – ಇಲ್ಲಿಯ ನೌತಾನ ಚುನಾವಣಾ ಕ್ಷೇತ್ರದಲ್ಲಿ ಭಾಜಪದ ಶಾಸಕ ಮತ್ತು ಬಿಹಾರದ ಪ್ರವಾಸೋದ್ಯಮ ಸಚಿವ ನಾರಾಯಣ ಪ್ರಸಾದ ಇವರ ಮಗ ನೀರಜ ಕುಮಾರ ಅಲಿಯಾಸ್ ಬಬಲು ಇವನು ತನ್ನ ಉದ್ಯಾನದಲ್ಲಿ ಕ್ರಿಕೆಟ್ ಆಡುವ ಮಕ್ಕಳ ಜೊತೆಗೆ ಜಗಳವಾಯಿತು. ನಂತರ ಸಿಟ್ಟಿನಿಂದ ಬಬಲು ಇವನು ಹುಡುಗರ ಮೇಲೆ ಗುಂಡು ಹಾರಾಟ ನಡೆಸಿದನು. ಈ ಸಮಯದಲ್ಲಿ ನಡೆದ ಹೊಡೆದಾಟದಲ್ಲಿ ಒಂದು ಸಣ್ಣ ಮಗು ಸಹಿತ ಕೆಲವರು ಗಾಯಗೊಂಡಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಸೇರಿಸಿಲಾಗಿದೆ. ಬೆತಿಯಾದಲ್ಲಿ ಹರದಿಯಾ ಫುಲವಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮಸ್ಥರು, ‘ಬಬಲು ಇವನು ಮತ್ತು ಅವನ ಜೊತೆ ಇರುವ ಜನರು ಹುಡುಗರಿಗೆ ಹೊಡೆಯುತ್ತಾ ಗುಂಡುಹಾರಾಟ ನಡೆಸಿದರು.’ ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಬಬಲು ಮತ್ತು ಅವನ ಸಹಚರರನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಆ ಸಮಯದಲ್ಲಿ ಬಬಲು ಮತ್ತು ಅವನ ಸಹಚರರು ಪರವಾನಗಿ ಇರುವ ರೈಫಲ್, ಪಿಸ್ತೂಲು ತೆಗೆದುಕೊಂಡು ಮತ್ತು ವಾಹನ ಅಲ್ಲೇ ಬಿಟ್ಟು ಓಡಿ ಹೋದರು ಎಂದು ಹೇಳಿದರು. ಗ್ರಾಮಸ್ಥರು ಬಬಲು ಯಾವ ವಾಹನದಲ್ಲಿ ಬಂದಿದ್ದನು ಆ ವಾಹನ ವಶಪಡಿಸಿಕೊಂಡಿದ್ದಾರೆ. ‘ಬಬಲು ಮತ್ತು ಇತರ ಆರೋಪಿಗಳು ಘಟನಾ ಸ್ಥಳದಿಂದ ಓಡಿ ಹೋಗದಿದ್ದರೆ, ಪರಿಸ್ಥಿತಿ ಇನ್ನು ಹದಗೆಡಬಹುದಿತ್ತು’, ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.