ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವ ಬಗ್ಗೆ ಹಿಂದೂಗಳಿಗೆ ಪ್ರತಿಜ್ಞೆ ನೀಡಿದ ವ್ಯಾಪಾರಿ ವಿರುದ್ಧ ದೂರು ದಾಖಲು !

ಪಾಕಿಸ್ತಾನ ನಿರ್ಮಾಣ ಮಾಡಲು ಅನುಮತಿ ನೀಡುವ ಕಾಂಗ್ರೆಸ್‌ನ ಸರಕಾರ ಛತ್ತೀಸ್‌ಗಡದಲ್ಲಿ ಇರುವುದರಿಂದ ಇಂತಹ ದೂರು ದಾಖಲಾಗುವುದು ಆಶ್ಚರ್ಯವೇನಿಲ್ಲ ? – ಸಂಪಾದಕರು 

ಕೊರಬಾ (ಛತ್ತೀಸಗಡ) – ಇಲ್ಲಿಯ ಒಬ್ಬ ವ್ಯಾಪಾರಿಯು ಹಿಂದೂಗಳಿಗೆ ಅಗ್ನಿಸಾಕ್ಷಿಯಾಗಿ ‘ಹಿಂದೂ ರಾಷ್ಟ್ರ’ ಸ್ಥಾಪನೆ ಮಾಡುವ ಹಾಗೂ ತನ್ನ ಕಂಪನಿಯಲ್ಲಿ ಕೇವಲ ಹಿಂದೂಗಳಿಗೆ ಕೆಲಸ ನೀಡುವಂತೆ ಪ್ರತಿಜ್ಞೆ ನೀಡಿದನು. ಇದರಿಂದ ಅವರ ಮೇಲೆ ದೂರು ದಾಖಲಿಸಲಾಯಿತು. ಈ ಪ್ರತಿಜ್ಞೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ದೂರ ದಾಖಲಿಸಲಾಗಿದೆ. ಪ್ರತಿಜ್ಞೆ ನೀಡಿದ ವ್ಯಾಪಾರಿಯ ಹೆಸರು ಪ್ರಮೋದ ಅಗ್ರವಾಲ ಇದೆ. ಅವರು ಹಿಂದೂ ಸುರಕ್ಷಾ ಸೇನೆಗಾಗಿ ಕೆಲಸ ಮಾಡುತ್ತಾರೆ.