ನೇತಾಜಿ ಸುಭಾಷ ಚಂದ್ರ ಬೋಸ ಇವರ ಅಸ್ತಿಯನ್ನು ಭಾರತಕ್ಕೆ ತನ್ನಿ ! – ನೇತಾಜಿ ಸುಭಾಷ ಚಂದ್ರ ಬೋಸ ಅವರ ಪುತ್ರಿ ಅನಿತಾ ಬೋಸ ಇವರ ಮನವಿ

ನೇತಾಜಿ ಬೋಸ ಅವರ ಪುತ್ರಿ ಪುತ್ರಿ ಅನಿತಾ ಬೋಸ

ಮುಂಬಯಿ – ನೇತಾಜಿ ಸುಭಾಷ ಚಂದ್ರ ಬೋಸ ಅವರ ಸಾವಿಗೆ ೭೭ ವರ್ಷ ಕಳೆದರೂ, ಜಪಾನಿನಲ್ಲಿ ಇರುವ ಅವರ ಅಸ್ತಿ ಭಾರತಕ್ಕೆ ತರಲು ಸಾಧ್ಯವಾಗಿಲ್ಲ. ನೇತಾಜಿ ಬೋಸ ಅವರ ಪುತ್ರಿಯಾಗಿ ನನಗೆ ನೇತಾಜಿಯವರ ಅಸ್ತಿ ಭಾರತಕ್ಕೆ ಬರುವುದನ್ನು ನೋಡಲು ಬಯಸುತ್ತೇನೆ. ನನ್ನ ತಂದೆಯು ತಮ್ಮ ದೇಶವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಗುವುದು ಅವರ ಕನಸಾಗಿತ್ತು; ಆದರೆ ಅವರಿಗೆ ಅದು ನೋಡಲು ಸಾಧ್ಯವಾಗಲಿಲ್ಲ. ಆದರೂ ಅವರ ಮೃತ್ಯು ನಂತರ ಅವರ ಅಸ್ತಿ ಅವರ ಪ್ರಾಣ ಪ್ರಿಯ ದೇಶಕ್ಕೆ ಮುಟ್ಟಬೇಕು, ಎಂದು ನೇತಾಜಿ ಸುಭಾಷ ಚಂದ್ರ ಬೋಸ ಅವರ ಏಕೈಕ ಪುತ್ರಿ ಅನಿತಾ ಬೋಸ ಇವರು ಭಾವನೆಯನ್ನು ಒಂದು ಸಂದರ್ಶನದಲ್ಲಿ ವ್ಯಕ್ತ ಪಡಿಸಿದರು. ಜನವರಿ ೨೩ ರಂದು ನೇತಾಜಿ ಬೋಸ ಅವರ ಜಯಂತಿ ಇದೆ.

ಅನಿತಾ ಬೋಸ ತಮ್ಮ ಮಾತನ್ನು ಮುಂದುವರೆಸುತ್ತಾ, ನೇತಾಜಿ ಸುಭಾಷ ಚಂದ್ರ ಬೋಸ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ನೀಡಿರುವ ಯೋಗದಾನವನ್ನು ಉದ್ದೇಶ ಪೂರ್ವಕ ನಿರ್ಲಕ್ಷಿಸಲಾಯಿತು. ಕಾಂಗ್ರೆಸನ ರಾಜಕೀಯದ ಷಡ್ಯಂತ್ರದ ಒಂದು ಭಾಗವೆಂದು ದೇಶದ ಸ್ವಾತಂತ್ರ್ಯದ ಸಂಪೂರ್ಣ ಶ್ರೇಯಸ್ಸನ್ನು ಅಹಿಂಸಾತ್ಮಕ ಆಂದೋಲನಕ್ಕೆ ನೀಡಿದೆ; ಆದರೆ ಆಜಾದ್ ಹಿಂದ ಸೇನೆಯ ಸೈನಿಕರ ಹೋರಾಟದಿಂದ ಬ್ರಿಟೀಷ ಸರಕಾರ ಹೆದರಿತ್ತು. ಆದ್ದರಿಂದ ಇನ್ನು ಮುಂದೆ ಭಾರತದ ಮೇಲೆ ನಿಯಂತ್ರಣ ಸಾಧಿಸುವುದು ಕಷ್ಟಸಾಧ್ಯವೆಂದು ಅರಿವು ಬ್ರಿಟಿಷ ಸರಕಾರಕ್ಕೆ ಆಗಿತ್ತು. ಈ ಹೇಳಿಕೆಗೆ ಪುಷ್ಟಿ ನೀಡುವ ಹಲವಾರು ದಾಖಲೆಗಳು ಉಪಲಬ್ಧವಿದೆ.

ನೇತಾಜಿ ಸುಭಾಷ ಚಂದ್ರ ಬೋಸ ಇವರ ಮೃತ್ಯುವಿನ ವಿವಾದಕ್ಕೆ ಎಳ್ಳು ನೀರು ಬಿಡಬೇಕು !

ನೇತಾಜಿ ಸುಭಾಷ ಚಂದ್ರ ಬೋಸ ಇವರ ಮೃತ್ಯುವಿನ ವಿವಾದಕ್ಕೆ ಎಳ್ಳು ನೀರು ಬಿಡಬೇಕು. ನೇತಾಜಿಯವರ ಮೃತ್ಯುಕ್ಕಿಂತ ಅವರ ಜೀವನ ಕಾರ್ಯ, ದೇಶಪ್ರೇಮದ ವಿಚಾರ ಎಷ್ಟೋ ದೊಡ್ಡದಾಗಿದೆ. ಅವರ ನೆನಪು ಇಟ್ಟುಕೊಳ್ಳುವ ಅವಶ್ಯಕತೆ ಇರುವುದಾಗಿ ಅನಿತಾ ಬೋಸ ಹೇಳಿದರು.

ಮ. ಗಾಂಧಿ ಧೂರ್ತ ರಾಜಕಾರಣಿ ಆಗಿದ್ದರು ಮತ್ತು ಅವರು ಅವರ ವಿಚಾರ ಸರಣಿಗೆ ಸಹಮತ ಇಲ್ಲದಿರುವವರಿಗೆ ಪಾಠ ಕಲಿಸುತ್ತಿದ್ದರು !

ನೇತಾಜಿ ಸುಭಾಷ ಚಂದ್ರ ಬೋಸ ಮತ್ತು ಮ. ಗಾಂಧಿ ಇವರ ನಡುವಿನ ಮತಭೇದ ಜಗತ್ತಿಗೇ ತಿಳಿದಿತ್ತು; ಆದರೂ ಸಹ ನೇತಾಜಿಯವರಿಗೆ ಗಾಂಧಿಯವರ ಬಗ್ಗೆ ಅಪಾರ ಗೌರವ ಇತ್ತು. ಆದರೂ ಗಾಂಧಿ ಒಬ್ಬ ಧೂರ್ತ ರಾಜಕಾರಣಿ ಆಗಿದ್ದರು. ಅವರ ವಿಚಾರ ಸರಣಿಯನ್ನು ಒಪ್ಪದಿರುವವರಿಗೆ ಪಾಠ ಕಲಿಸುತ್ತಿದ್ದರು. ತದ್ವಿರುದ್ಧ ನೇತಾಜಿ ಸರಳ ಜೀವಿ ಮತ್ತು ಸ್ಪಷ್ಟವಾಗಿ ಮಾತನಾಡುವವರಾಗಿದ್ದರು. ನೆಹರುಗಿಂತಲೂ ನೇತಾಜಿಯವರ ಯೋಗದಾನ ಹೆಚ್ಚಿತ್ತು ಇದರ ಅರಿವು ದೇಶವಾಸಿಗಳಿಗೆ ಇದೆ, ಎಂದು ಅನಿತಾ ಬೋಸ ಇವರು ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.