ತೆಲಂಗಾಣದ ಭಾಜಪ ಪ್ರದೇಶಾಧ್ಯಕ್ಷರಾಗಿರುವ ಸೋಮೂ ವೀರರಾಜು ಇವರ ಜನತಾದ್ರೋಹಿ ಕರೆ !
|

ಭಾಗ್ಯನಗರ (ತೆಲಂಗಾಣ) – ಭಾಜಪಕ್ಕೆ ಮತವನ್ನು ನೀಡಿದರೆ ೫೦ ರೂಪಾಯಿಯಲ್ಲಿ ಉತ್ತಮ ದರ್ಜೆಯ ಮದ್ಯ ನೀಡುವೆವು ಎಂದು ಭಾಜಪದ ತೆಲಂಗಾಣ ಪ್ರದೇಶಾಧ್ಯಕ್ಷರಾದ ಸೋಮೂ ವೀರರಾಜು ಆಶ್ವಾಸನೆ ನೀಡಿದ್ದಾರೆ. ಸದ್ಯ ಉತ್ತಮ ದರ್ಜೆಯ ಮದ್ಯ ೨೦೦ ರೂಪಾಯಿಗಳಿಗೆ ಸಿಗುತ್ತದೆ. ಅವರು ಪಕ್ಷದ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಕಳಪೆ ಮಟ್ಟದ ಮದ್ಯವನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದರ ಬಗ್ಗೆ ಅವರು ರಾಜ್ಯ ಸರಕಾರವನ್ನು ಟೀಕಿಸಿದರು. (ರಾಜ್ಯದಲ್ಲಿ ಹಾಲಿನಲ್ಲಿ ಮತ್ತು ಇತರೆ ಖಾದ್ಯ ಪದಾರ್ಥಗಳಲ್ಲಿ ಕಲಬೆರಕೆ ಮಾಡಲಾಗುತ್ತದೆ. ಈ ಕುರಿತು ಮಾತನಾಡಬೇಕೆಂದು ಸೋಮರಾಜು ಇವರಿಗೆ ಏಕೆ ಅನಿಸಲಿಲ್ಲ?- ಸಂಪಾದಕರು) ‘ರಾಜ್ಯದಲ್ಲಿ ಬಹಳಷ್ಟು ಕಂಪನಿಗಳು ಅಧಿಕ ಬೆಲೆಗೆ ಮದ್ಯವನ್ನು ಮಾರಾಟ ಮಾಡುತ್ತವೆ. ಮದ್ಯವನ್ನು ತಯಾರಿಸುವ ಹೆಸರುವಾಸಿ ಕಂಪನಿಗಳು ರಾಜ್ಯದಲ್ಲಿ ಇಲ್ಲ ಎಂದು ಅವರು ಆರೋಪಿಸಿದರು.
Andhra Pradesh BJP president Somu Veerraju promises to give liquor at Rs 50 https://t.co/4yh3NjXz9H
— The Times Of India (@timesofindia) December 29, 2021
ವೀರರಾಜು ಇವರು ಮುಂದುವರಿಸುತ್ತಾ, ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯು ಮದ್ಯಕ್ಕಾಗಿ ಪ್ರತಿ ತಿಂಗಳು ೧೨ ಸಾವಿರ ರೂಪಾಯಿಗಳನ್ನು ವೆಚ್ಚ ಮಾಡುತ್ತಿದ್ದು, ಈ ಹಣ ಸರಕಾರಿ ಖಜಾನೆಗೆ ಜಮೆಯಾಗುತ್ತದೆ ಮತ್ತು ಇದೇ ಹಣವನ್ನು ಸರಕಾರಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಉಪಯೋಗಿಸಲಾಗುತ್ತದೆ. ರಾಜ್ಯದ ೧ ಕೋಟಿ ಜನರು ಮದ್ಯ ಸೇವನೆಯನ್ನು ಮಾಡುತ್ತಿದ್ದಾರೆ. ಹಾಗಾಗಿ ೨೦೨೪ ನೇ ಇಸವಿಯ ಚುನಾವಣೆಯಲ್ಲಿ ಈ ೧ ಕೋಟಿ ಜನರು ಭಾಜಪಕ್ಕೆ ಮತದಾನ ಮಾಡಬೇಕು ಎನ್ನುವುದು ನಮ್ಮ ಇಚ್ಛೆಯಾಗಿದೆ. ಒಂದು ವೇಳೆ ಭಾಜಪಕ್ಕೆ ೧ ಕೋಟಿ ಮತಗಳು ಸಿಕ್ಕರೆ, ರಾಜ್ಯದಲ್ಲಿ ೭೫ ರೂಪಾಯಿಗಳಿಗೆ ಪ್ರತಿ ಬಾಟಲಿಯಂತೆ ಉತ್ತಮ ದರ್ಜೆಯ ಮದ್ಯ ಸಿಗುವುದು. ಒಂದು ವೇಳೆ ಅಧಿಕ ಆದಾಯ ಸಂಗ್ರಹವಾದರೆ ಇದೇ ಮದ್ಯದ ಬೆಲೆಯನ್ನು ೭೫ ರೂಪಾಯಿಗಳ ಬದಲು ೫೦ ರೂಪಾಯಿಗೆ ಪ್ರತಿ ಬಾಟಲಿಯಂತೆ ಮಾರಾಟ ಮಾಡಲಾಗುವುದು, ಎಂದರು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !