ಮುಂಬೈಯಲ್ಲಿ ನೆರವೇರಿದ ಹಿಂದೂ ದೇವತೆಗಳನ್ನು ಅಪಹಾಸ್ಯಗೈಯ್ಯುವ ಮುನಾವರ ಫಾರೂಕಿ ಇವನ ಕಾರ್ಯಕ್ರಮ !

ಕಾಂಗ್ರೆಸ್‍ನ ಹಿಂದೂದ್ರೋಹ ಅರಿಯಿರಿ !

ಇಲ್ಲಿಯವರೆಗೆ 12 ಕಾರ್ಯಕ್ರಮಗಳು ರದ್ದು

ಹಿಂದೂಗಳೇ, ಹಿಂದೂ ದೇವತೆಗಳನ್ನು ಪದೇ ಪದೇ ಅಪಹಾಸ್ಯ ಮಾಡುವವರಿಗೆ ಭಯ ಹುಟ್ಟಿಸಲು ಧರ್ಮನಿಂದೆಯ ಕಾನೂನನ್ನು ಜಾರಿಗೊಳಿಸುವುದು ಅಗತ್ಯವೆಂದು ತಿಳಿಯಿರಿ ಮತ್ತು ಇದಕ್ಕಾಗಿ ಸಂಘಟಿತ ಮತ್ತು ಕಾನೂನಿನ ಮಾರ್ಗವಾಗಿ ರಾಷ್ಟ್ರವ್ಯಾಪಿ ಆಂದೋಲನವನ್ನು ಆಯೋಜಿಸಿ ! – ಸಂಪಾದಕರು 

ಮುನಾವರ ಫಾರೂಕಿ

ಮುಂಬಯಿ : ಹಿಂದೂ ದೇವತೆಗಳ ಅಪಹಾಸ್ಯ ಮಾಡುವ ಮುನಾವರ ಫಾರೂಕಿಯ ಕಾರ್ಯಕ್ರಮವನ್ನು ಡಿಸೆಂಬರ್ 18 ರಂದು ವೈ.ಬಿ.ಚವ್ಹಾಣ್ ಸೆಂಟರ್ ನಲ್ಲಿ ಕಾಂಗ್ರೆಸ್‍ನ ನೆರವಿನೊಂದಿಗೆ ಆಯೋಜಿಸಲಾಗಿತ್ತು. ಕಾಂಗ್ರೆಸ್‍ನ ಶಾಖೆಯಾದ `ಆಲ್ ಇಂಡಿಯಾ ಪ್ರೊಫೆಷನಲ್ಸ್ ಕಾಂಗ್ರೆಸ್’ ಈ ಬಗ್ಗೆ ‘ಟ್ವಿಟರ್’ನಲ್ಲಿ ಮಾಹಿತಿ ನೀಡಿದೆ. `ಮುಕ್ತ ಸಂಭಾಷಣೆ ಎಂದು ಆತ ಹಿಂದೂ ದೇವತೆಗಳ ವಿಡಂಬನೆ ಮಾಡಿದ್ದಾನೆ’, ಎಂದು ಕಾಂಗ್ರೆಸ್‍ನ ಹೇಳಿಕೆಯಾಗಿದೆ. (ಹಿಂದೂ ದೇವತೆಗಳನ್ನು ಬಹಿರಂಗವಾಗಿ ಅಪಹಾಸ್ಯ ಮಾಡುತ್ತಿರುವ ಹಿಂದೂದ್ವೇಷಿ ಕಾಂಗ್ರೆಸ್ ! – ಸಂಪಾದಕರು)

ಫಾರೂಕಿ ಆತನ ಮುಂದಿನ ಕಾರ್ಯಕ್ರಮವು ಜನವರಿ 2022 ರಲ್ಲಿ ಕೋಲಕಾತಾದಲ್ಲಿ ನಡೆಯಲಿದೆ. ಇದಕ್ಕಾಗಿ ಟಿಕೆಟ್ ಮಾರಾಟವೂ ಆರಂಭವಾಗಿದೆ. ಟಿಕೆಟ್ ಬೆಲೆ 799 ರೂಪಾಯಿ ಇದೆ. (ಕೋಲಕಾತಾದಲ್ಲಿ ಫಾರೂಕಿಯವನ ಕಾರ್ಯಕ್ರಮವನ್ನು ರದ್ದುಗೊಳಿಸಲು ಹಿಂದೂಗಳು ಕಾನೂನು ರೀತಿಯಲ್ಲಿ ಪ್ರಯತ್ನಿಸಬೇಕು ! – ಸಂಪಾದಕರು) ಈ ಹಿಂದೆ, ಬೆಂಗಳೂರಿನಲ್ಲಿ ನಡೆಯಲಿದ್ದ ಫಾರುಕಿಯ ಕಾರ್ಯಕ್ರಮವನ್ನು ಹಿಂದುತ್ವನಿಷ್ಠರ ವಿರೋಧದಿಂದ ರದ್ದುಗೊಳಿಸಲಾಗಿತ್ತು. ಇಲ್ಲಿಯವರೆಗೆ, ಆತನ 12 ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಆತನ ವಿರುದ್ಧ ಇಂದೂರನಲ್ಲಿ ದೂರು ದಾಖಲಾಗಿದೆ. ಇದರಲ್ಲಿ ಅವನ ಮೇಲೆ ಹಿಂದೂಗಳ ಭಾವನೆಗಳನ್ನು ನೋಯಿಸಲಾಗಿದೆ ಎಂದು ಆರೋಪಿಸಲಾಗಿದೆ.