ಶ್ರೀನಗರದಲ್ಲಿ ನಡೆದ ಪೋಲೀಸರ ಬಸ್ ಮೇಲಿನ ಭಯೋತ್ಪಾದನೆಯ ದಾಳಿಯಲ್ಲಿ ೨ ಪೊಲೀಸರು ಹುತಾತ್ಮ : ೧೨ ಜನರಿಗೆ ಗಾಯ

ಶ್ರೀನಗರ (ಜಮ್ಮು-ಕಾಶ್ಮೀರ) – ಇಲ್ಲಿಯ ಜೇವನ ಭಾಗದಲ್ಲಿ ಡಿಸೆಂಬರ ೧೩ ರಂದು ಸಂಜೆ ಪೊಲೀಸರ ಬಸ್‌ನ ಮೇಲೆ ನಡೆದಿರುವ ಉಗ್ರರ ಆಕ್ರಮಣದಲ್ಲಿ ೩ ಪೊಲೀಸರು ಹುತಾತ್ಮರಾಗಿದ್ದಾರೆ. ಈ ಬಸ್‌ನಲ್ಲಿ ಒಟ್ಟು ೧೪ ಪೊಲೀಸರು ಹಾಗೂ ಒಬ್ಬ ವಾಹನ ಚಾಲಕ ಇದ್ದರು. ಬಸ್‌ನಲ್ಲಿದ್ದ ಪೊಲೀಸರ ಬಳಿ ಶಸ್ತ್ರಾಸ್ತ್ರಗಳು ಇರಲಿಲ್ಲ. ಉಗ್ರರು ಸರಿ ಸುಮಾರು ೬ ನಿಮಿಷದವರೆಗೂ ಬಸ್ಸಿನ ಮೇಲೆ ಗುಂಡಿನ ದಾಳಿ ನಡೆಸಿರುವುದರಿಂದ ಅದರಲ್ಲಿದ್ದ ಎಲ್ಲಾ ಪೊಲೀಸರೂ ಗಾಯಗೊಂಡಿದ್ದಾರೆ ಹಾಗೂ ಅದರಲ್ಲಿ ೩ ಜನರ ಮೃತ್ಯು ಆಗಿದೆ. ಈ ಬಸ್ ಇಲ್ಲಿಯ ಪೊಲೀಸ್ ಮುಖ್ಯ ಕಚೇರಿಗೆ ಹೋಗುತ್ತಿತ್ತು. ಈ ಬಸ್ ‘ಬುಲೆಟ್ ಪ್ರೂಫ್’ ಆಗಿರಲಿಲ್ಲ, ಎಂದೂ ಗಮನಕ್ಕೆ ಬಂದಿದೆ.

ಆಕ್ರಮಣ ನಡೆಸಿ ಪಲಾಯನ ಮಾಡಿರುವ ಉಗ್ರರನ್ನು ಪೊಲೀಸರು ಮತ್ತು ಭದ್ರತಾ ಪಡೆಗಳು ಹುಡುಕಾಟ ನಡೆಸುತ್ತಿದ್ದಾರೆ.