ಜೆ.ಎನ್.ಯು.ನಲ್ಲಿ ಬಾಬ್ರಿಯ ಬೆಂಬಲಕ್ಕಾಗಿ ಕಮ್ಯುನಿಸ್ಟ ವಿಚಾರ ಸರಣಿಯ ವಿದ್ಯಾರ್ಥಿಗಳ ಸಂಘಟನೆಯಿಂದ ಆಂದೋಲನ

ಭಾರತದ ಮುಸಲ್ಮಾನ್ ದಾಳಿಕೋರರು ಹಿಂದುಗಳ ನಾಲ್ಕುವರೆ ಲಕ್ಷ ದೇವಸ್ಥಾನಗಳನ್ನು ಧ್ವಂಸ ಮಾಡಿದರು, ಮೂರು ದಶಕಗಳ ಮೊದಲು ಮತಾಂಧರು ಕಾಶ್ಮೀರದಿಂದ ನಾಲ್ಕುವರೆ ಲಕ್ಷ ಹಿಂದುಗಳನ್ನು ಓಡಿಸಿದರು, ಹಾಗೂ ಅಲ್ಲಿಯ ನೂರಾರು ದೇವಸ್ಥಾನಗಳ ಮೇಲೆ ದಾಳಿ ನಡೆಸಿದರು, ಈ ವಿಷಯವಾಗಿ ಕಮ್ಯುನಿಸ್ಟ ವಿದ್ಯಾರ್ಥಿ ಸಂಘಟನೆ ಆಂದೋಲನ ನಡೆಸಬೇಕೆಂದು ಅನಿಸುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ನವದೆಹಲಿ – ಇಲ್ಲಿಯ ವಿವಾದಿತ ಜವಾಹರಲಾಲ್ ನೆಹರು ವಿದ್ಯಾಪೀಠ ಅಂದರೆ ಜೆ.ಎನ್.ಯು.ನಲ್ಲಿ ಡಿಸೆಂಬರ್ ೬ ರ ರಾತ್ರಿ ಜೆ.ಎನ್.ಯು.ನ ವಿದ್ಯಾರ್ಥಿ ಸಂಘಟನೆ ಬಾಬ್ರಿಯನ್ನು ಬೆಂಬಲಿಸಲು ಆಂದೋಲನ ನಡೆಸಿದರು. ಈ ಸಮಯದಲ್ಲಿ ಬಾಬ್ರಿಯ ಬೆಂಬಲದ ಘೋಷಣೆ ಕೂಗಲಾಯಿತು. ಇದರ ಜೊತೆಗೆ ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷ ಸಾಕೆತ ಮೂನ ಈತ, ಹಾಗೂ ಆಂದೋಲನದಲ್ಲಿ ಭಾಗವಹಿಸಿದ್ದ ಇತರ ಕಮ್ಯುನಿಸ್ಟ ವಿಚಾರ ಸರಣಿಯ ಸಂಘಟನೆಯ ಕಾರ್ಯಕರ್ತರು ಬಾಬ್ರಿ ಮಸೀದಿ ಮತ್ತೆ ನಿರ್ಮಾಣ ಮಾಡುವ ಬೇಡಿಕೆಯನ್ನು ಮಾಡಿದರು.