ಸಮಯ ಇರುವಾಗಲೇ ಸ್ವಂತದಲ್ಲಿ ಬದಲಾವಣೆ ತನ್ನಿ ಇಲ್ಲವಾದರೆ ಪರಿವರ್ತನೆಯಾಗಬಹುದು !

ಸಂಸತ್ತಿನಲ್ಲಿ ಗೈರುಹಾಜರಿರುವ ಭಾಜಪದ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಎಚ್ಚರಿಕೆ !

ಆಡಳಿತಾರೂಢ ಪಕ್ಷದ ಸಂಸದರಿಗೆ ಈ ರೀತಿಯ ಎಚ್ಚರಿಕೆ ನೀಡಬೇಕಾಗುತ್ತದೆ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ನವ ದೆಹಲಿ – ನಾನು ನಿಮಗೆ ಯಾವಾಗಲೂ ಸಂಸತ್ತಿನಲ್ಲಿ ಹಾಜರಾಗಲು ಹೇಳುತ್ತಿರುತ್ತೇನೆ. ಯಾವಾಗ ನೀವು ನಿಮ್ಮ ಮಕ್ಕಳಿಗೆ ಮನೆಯ ಕೆಲವು ಕೆಲಸಗಳನ್ನು ಮಾಡಲು ಹೇಳಿದಾಗ ಅವರು ಮಾಡದಿದ್ದರೆ, ಆಗ ನಿಮಗೆ ಸಿಟ್ಟು ಬರುತ್ತದೆ. ಹಾಗಾದರೆ, ನಾನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಅವಸ್ಥೆ ಏನಾಗಬಹುದು. ಎಂದು ಯೋಚನೆ ಮಾಡಿರಿ. ನಿಮ್ಮ ಗೈರುಹಾಜರಿಂದ ನಮಗೆ ಇಷ್ಟು ಬೇಸರವಾಗಬಹುದು. ಸಮಯ ಇರುವಾಗಲೇ ತಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಿ, ಇಲ್ಲವಾದರೆ ಪರಿವರ್ತನೆಯಾಗಬಹುದು, ಎಂದು ಪ್ರಧಾನಿ ಮೋದಿಯವರು ಭಾಜಪದ ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ. ಅವರು ಭಾಜಪಾದ ಸಂಸದೀಯ ಸಮಿತಿಯ ಸಭೆಯಲ್ಲಿ ಮಾತನಾಡುತ್ತಿದ್ದರು. ಭಾಜಪದ ಎಲ್ಲಾ ಸಂಸದರು ಚಳಿಗಾಲದ ಅಧಿವೇಶನದ ಸಮಯಕ್ಕೆ ಸರಿಯಾಗಿ ಸಭಾಗೃಹದಲ್ಲಿ ಉಪಸ್ಥಿತ ಇರುವಂತೆ ಎಚ್ಚರಿಕೆ ನೀಡಿದರು.