ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಕನ್ಯೆಯ ತೀವ್ರ ವಿರೋಧದ ನಂತರ ‘ಝೀ ನ್ಯೂಸ್’ ನ ರಾಷ್ಟ್ರೀಯ ಸಂಪಾದಕ ಸುಧೀರ್ ಚೌಧರಿ ಅವರನ್ನು ಕಾರ್ಯಕ್ರಮದಿಂದ ಕೈಬಿಡಲಾಯಿತು !

ರಾಜಕನ್ಯೆ ಇವರಿಂದ ಸುಧೀರ್ ಚೌಧರಿ ಅವರಿಗೆ ‘ಅಸಹಿಷ್ಣುತೆ’ ಮತ್ತು ‘ಭಯೋತ್ಪಾದಕ’ ಎಂಬ ಶಬ್ದಗಳಲ್ಲಿ ನಿಂದನೆ !

* ಭಾರತದಲ್ಲಿ ಹಿಂದೂದ್ವೇಷಿಗಳಿಗೆ ಎಂದಾದರೂ ಈ ರೀತಿಯಲ್ಲಿ ವಿರೋಧಿಸಲಾಗುತ್ತದೆಯೇ ? ಭಾರತದಲ್ಲಿಯ ಕಾಂಗ್ರೆಸ್ಸಿನ ಮುಸಲ್ಮಾನ ನಾಯಕರು, ಕೆಲವು ಮುಸಲ್ಮಾನ ಪತ್ರಕರ್ತರು ನಿರಂತರವಾಗಿ ಹಿಂದೂದ್ವೇಷ ಮತ್ತು ಹಿಂದುತ್ವವನ್ನು ಅವಮಾನಿಸುತ್ತಾರೆ, ಆದರೆ ಅವರನ್ನು ಎಲ್ಲೆಡೆ ಗೌರವಿಸಲಾಗುತ್ತದೆ, ಎಂಬುದನ್ನು ಗಮನದಲ್ಲಿಡಿ !

* ಶ್ರೀ. ಸುಧೀರ ಚೌಧರಿ ಅವರು ನಿರಂತರವಾಗಿ ಮತಾಂಧರ ನಿಜ ಸ್ವರೂಪವನ್ನು ಸಮಾಜದ ಮುಂದೆ ತಂದು ಸಮಾಜವನ್ನು ಜಾಗೃತಗೊಳಿಸುತ್ತಿರುವುದರಿಂದ ಈ ರೀತಿ ವಿರೋಧ ವ್ಯಕ್ತವಾಗುತ್ತಿದೆ, ಎಂಬುದು ಗಮನಕ್ಕೆ ಬರುತ್ತದೆ !

ನವದೆಹಲಿ : ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಕನ್ಯೆ ಹೆಂಡ ಬಿಂತ ಎ ಫೈಸಲ್ ಅಲ್ ಕಾಸಿಮ್ ಇವರು ವಿರೋಧ ವ್ಯಕ್ತಪಡಿಸಿದ ನಂತರ ‘ಝೀ ನ್ಯೂಸ್’ನ ಸಂಪಾದಕ ಶ್ರೀ. ಸುಧೀರ ಚೌಧರಿ ಇವರ ಹೆಸರನ್ನು ‘ಅಬು ಧಾಬಿ ಚಾರ್ಟರ್ಡ್ ಅಕೌಂಟೆಂಟ್ಸ್’ ಕಾರ್ಯಕ್ರಮದಲ್ಲಿ ವಕ್ತಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಶ್ರೀ. ಸುಧೀರ ಚೌಧರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವಾಗ ರಾಜಕನ್ಯೆ ಕಾಸಿಮ್ ಇವರು ಶ್ರೀ. ಚೌಧರಿ ಅವರನ್ನು ‘ಅಸಹಿಷ್ಣು’ ಮತ್ತು ‘ಭಯೋತ್ಪಾದಕ’ ಎಂದು ಹೇಳಿದ್ದಾರೆ. ಅನಂತರ ಕಾರ್ಯಕ್ರಮದ ಆಯೋಜಕರು ಚೌಧರಿ ಹೆಸರನ್ನು ತೆಗೆದುಹಾಕಲು ನಿರ್ಧರಿಸಿದರು.

ರಾಜಕನ್ಯೆ ಕಾಸಿಮ್ ಶ್ರೀ. ಸುಧೀರ್ ಚೌಧರಿ ಅವರನ್ನು ವಿರೋಧಿಸುತ್ತಾ,

ಒಬ್ಬ ನಿರೂಪಕನು ಹಗಲು ರಾತ್ರಿ ಮುಸಲ್ಮಾನರನ್ನು ಅವಮಾನಿಸುತ್ತಾನೆ ಮತ್ತು ಆತನನ್ನು ನಮ್ಮ ದೇಶದಲ್ಲಿ ಮಾತನಾಡಲು ಮತ್ತು ಅವನನ್ನು ಗೌರವಿಸಲು ಕರೆಯಲಾಗುತ್ತದೆ. ಸುಧೀರ್ ಚೌಧರಿ ಇವರ ಮೇಲೆ ಸುಳ್ಳು ವಾರ್ತೆ ನೀಡುವುದು, ’ಇಸ್ಲಾಮೊಫೋಬಿಕ್’(ಇಸ್ಲಾಂ ಬಗ್ಗೆ ದ್ವೇಷವಿರುವ) ಮತ್ತು ಕೋಮುದ್ವೇಷ ಮಾಡುವ ಮತ್ತು ಅದರ ಪ್ರಸಾರ ಮಾಡುವ ಆರೋಪವಿದೆ. ಓರ್ವ ಅಪ್ರಾಮಾಣಿಕ ಪತ್ರಕರ್ತನನ್ನು ವೇದಿಕೆಗೆ ಮತ್ತು ಪ್ರೇಕ್ಷಕರ ಮುಂದೆ ಆಹ್ವಾನಿಸಿ ನಮ್ಮ ಪ್ರತಿಷ್ಠೆ ಹಾಗೂ ಗೌರವವನ್ನು ಕಡಿಮೆ ಮಾಡಿಕೊಳ್ಳಬೇಕೇ ? ಸುಧೀರ್ ಚೌಧರಿ ಭಾರತದಲ್ಲಿ ೨೦ ಕೋಟಿ ಮುಸಲ್ಮಾನರನ್ನು ಗುರಿಯಾಗಿಸುತ್ತಾರೆ. ದೇಶದಾದ್ಯಂತ ನಡೆಯುವ ಮುಸಲ್ಮಾನರ ದೌರ್ಜನ್ಯಕ್ಕೆ ಅವರ ಅನೇಕ ಕಾರ್ಯಕ್ರಮಗಳು ನೇರವಾಗಿ ಯೋಗದಾನವಾಗಿದೆ ಎಂದು ಹೇಳಿದರು.