ಕಾಶ್ಮೀರದಲ್ಲಿ 5 ಉಗ್ರರ ಬಂಧನ

ಇಂತಹವರನ್ನು ಜೀವನಪೂರ್ತಿ ಸಾಕುವ ಬದಲು ಅವರ ಮೇಲೆ ಶೀಘ್ರಗತಿಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರ ಪ್ರಯತ್ನಿಸಬೇಕು !- ಸಂಪಾದಕರು 

ಶ್ರೀನಗರ (ಜಮ್ಮು-ಕಾಶ್ಮೀರ) – ಪುಲವಾಮಾ ಪೊಲೀಸರು ಶೌಕತ್ ಇಸ್ಲಾಂ ದಾರ್, ಎಜಾಜ್ ಅಹಮದ್ ಲೋನ್, ಎಜಾಜ್ ಗುಲಜಾರ್ ಲೋನ್, ಮಂಜೂರ್ ಅಹಮದ್ ಭಟ್ ಮತ್ತು ನಾಸಿರ್ ಅಹಮದ್ ಶಾಹ ಹೀಗೆ 5 ಜಿಹಾದಿ ಉಗ್ರರನ್ನು ಬಂಧಿಸಿದ್ದಾರೆ. ದಕ್ಷಿಣ ಕಾಶ್ಮೀರ ಜಿಲ್ಲೆಯಲ್ಲಿ ನಡೆದ ಹಲವು ಗ್ರೆನೇಡ್ ದಾಳಿ ಪ್ರಕರಣಗಳ ತನಿಖೆ ವೇಳೆ ಉಗ್ರರನ್ನು ಬಂಧಿಸಲಾಗಿದೆ. ಈ ಭಯೋತ್ಪಾದಕರು ಸಹಾಯಕರೆಂದು ಇತರ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸಾಗಿಸಲು ಸಹಾಯ ಮಾಡುತ್ತಿದ್ದರು. ಭದ್ರತಾ ಪಡೆಗಳ ಮೇಲೆ ನಡೆದ ಹಲವಾರು ಗ್ರೆನೇಡ್ ದಾಳಿಗಳಲ್ಲಿ ಅವರ ಸಹಭಾಗವಿತ್ತು. ಅವರಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡು ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.