ಮಂಗಳೂರಿನ ದೇವಸ್ಥಾನದಲ್ಲಿ ಅಪರಿಚಿತರಿಂದ ದೇವತೆಗಳ ಮೂರ್ತಿಗಳ ಧ್ವಂಸ ಮತ್ತು ಕಳ್ಳತನ

ಕರ್ನಾಟಕದಲ್ಲಿ ಭಾಜಪ ಸರಕಾವಿರುವಾಗ ಹಿಂದೂ ದೇವಸ್ಥಾನಗಳ ಮೇಲೆ ಈ ರೀತಿಯ ದಾಳಿಗಳಾಗುವುದು ಅಪೇಕ್ಷಿತವಿಲ್ಲ. ಸರಕಾರವು ಎಲ್ಲಾ ದೇವಸ್ಥಾನಗಳಿಗೆ ಭದ್ರತೆ ನೀಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು 

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕ

ಮಂಗಳೂರು – ಇಲ್ಲಿ ಅಕ್ಟೋಬರ್ 16 ರ ರಾತ್ರಿಯ ಸಮಯದಲ್ಲಿ ಬೈಕಂಪಾಡಿ ಕರ್ಕೆರಾದಲ್ಲಿಯ ಜಾರಂದಾಯ ದೇವಸ್ಥಾನ ಮತ್ತು ನಾಗಬ್ರಹ್ಮ ಪೀಠವು ಅಪರಿಚಿತರಿಂದ ವಿಧ್ವಂಸಕ್ಕೊಳಗಾಗಿವೆ. ಅಪರಿಚಿತರು ದೇವಸ್ಥಾನದಲ್ಲಿನ ನಾಗಮೂರ್ತಿ ಮತ್ತು ನಂದಿಯನ್ನೂ ಧ್ವಂಸ ಮಾಡಿದ್ದಾರೆ. ಹಾಗೂ ದೇವಸ್ಥಾನದ ತಿಜೋರಿ ಒಡೆದು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ.