ಮೇಡಕ್ (ತೆಲಂಗಾಣ) ನಲ್ಲಿ ಬಿಜೆಪಿ ನಾಯಕನನ್ನು ಚತುಶ್ಚಕ್ರ ವಾಹನದ ಡಿಕ್ಕಿಯಲ್ಲಿ ಕೂಡಿಟ್ಟು ಜೀವಂತ ಸುಟ್ಟರು !

ತೆಲಂಗಾಣದ ತೆಲಂಗಾಣ ರಾಷ್ಟ್ರ ಸಮಿತಿ ಸರಕಾರದ ಹದಗೆಟ್ಟಿರುವ ಕಾನೂನು-ಸುವ್ಯವಸ್ಥೆ !

ಮೇಡಕ್ (ತೆಲಂಗಾಣಾ) – ಇಲ್ಲಿನ ಬಿಜೆಪಿಯ ಮಾಜಿ ಜಿಲ್ಲಾ ಉಪಾಧ್ಯಕ್ಷ ವಿ. ಶ್ರೀನಿವಾಸ್ ಪ್ರಸಾದ್ (ವಯಸ್ಸು ೪೫) ಅವರನ್ನು ದುಷ್ಕರ್ಮಿಗಳು ಚತುಶ್ಚಕ್ರ ವಾಹನದ ಡಿಕ್ಕಿಯಲ್ಲಿ ಬಂದ್ ಮಾಡಿ ಜೀವಂತವಾಗಿ ಸುಟ್ಟಿದ್ದಾರೆ. ಪೊಲೀಸರು ಈ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.

ಶ್ರೀನಿವಾಸ್ ಇವರು ರಾ.ಸ್ವ.ಸಂಘ ಮತ್ತು ವಿಎಚ್‌ಪಿಯೊಂದಿಗೆ ಜೋಡಿಸಲ್ಪಟ್ಟಿದ್ದರು. ಅವರ ಮೇಲೆ ಈ ಹಿಂದೆಯೂ ಮಾರಣಾಂತಿಕ ಹಲ್ಲೆ ನಡೆದಿತ್ತು. ಅವರಿಗೆ ಕೆಲವು ಜನರೊಂದಿಗೆ ವ್ಯವಹಾರದ ಬಗ್ಗೆ ವಿವಾದವಿತ್ತು.