ರಾಜ್ಯಸಭೆಯಲ್ಲಿ ಗೊಂದಲ ಸೃಷ್ಟಿಸುವ ತೃಣಮೂಲ ಕಾಂಗ್ರೆಸ್ಸಿನ 6 ಸಂಸದರ ಅಮಾನತು

ಗೊಂದಲ ಮಾಡಿ ವ್ಯರ್ಥವಾದ ಕಾರ್ಯಕಲಾಪಗಳ ಖರ್ಚನ್ನು ಅವರಿಂದಲೇ ವಸೂಲು ಮಾಡಬೇಕು !

ನವದೆಹಲಿ – ರಾಜ್ಯಸಭೆಯಲ್ಲಿ ಸಭಾಪತಿಯ ಎದುರುಗಡೆಯ ಖಾಲಿ ಜಾಗದಲ್ಲಿ ಗೊಂದಲವನ್ನು ಉಂಟುಮಾಡಿದ ತೃಣಮೂಲ ಕಾಂಗ್ರೆಸ್ಸಿನ 6 ಸಂಸದರನ್ನು ಅಮಾನತು ಮಾಡಲಾಗಿದೆ. ಆಗಸ್ಟ್ 4 ರಂದು ರಾಜ್ಯಸಭೆಯ ಹಗಲಿನ ಕಾರ್ಯಕಲಾಪ ಆರಂಭವಾದ ನಂತರ ಸಂಸದರು ಗೊಂದಲ ಮಾಡಲು ಆರಂಭಿಸಿದಾಗ ಅವರನ್ನು ಅಮಾನತುಗೊಳಿಸಲಾಯಿತು. ದೊಲ ಸೇನ, ನದಿಮುಲ್ ಹಕ, ಅಬಿರ ರಂಜನ್ ಬಿಸ್ವಾಸ, ಶಾಂತಾ ಛೆತ್ರಿ, ಅರ್ಪಿತಾ ಘೋಷ ಮತ್ತು ಮೌಸಮ ನೂರ ಎಂಬುದು ಈ ಸಾಂಸದರ ಹೆಸರುಗಳಾಗಿವೆ.