
ನವ ದೆಹಲಿ – ಉತ್ತರಪ್ರದೇಶ ಸರಕಾರವು ಕಾವಡ ಯಾತ್ರೆಗೆ ನೀಡಿದ ಅನುಮತಿಯ ಆದೇಶದ ಬಗ್ಗೆ ಪುನರ್ವಿಚಾರ ಮಾಡಬೇಕು ಇಲ್ಲದಿದ್ದರೆ ನಮಗೆ ಯೋಗ್ಯವಾದ ಆದೇಶ ನೀಡಬೇಕಾಗಬಹುದು, ಎಂದು ಸರ್ವೋಚ್ಚ ನ್ಯಾಯಾಲಯವು ಎಚ್ಚರಿಕೆ ನೀಡಿದೆ. ಕೇಂದ್ರ ಸರಕಾರವು ಈ ಬಗ್ಗೆ ಸಲ್ಲಿಸಿದ್ದ ಪ್ರತಿಜ್ಞಾಪತ್ರದಲ್ಲಿ ‘ಕೇಂದ್ರ ಸರಕಾರವು ಕಾವಡ ಯಾತ್ರೆಗೆ ಅನುಮತಿ ನೀಡುವ ವಿಚಾರದ ಪರ ಇಲ್ಲ’, ಎಂದು ಹೇಳಿದೆ. ಕಾವಡ ಯಾತ್ರೆಗೆ ಉತ್ತರಪ್ರದೇಶ ಸರಕಾರ ಅನುಮತಿ ನೀಡಿದ್ದು, ಉತ್ತರಾಖಂಡ ಸರಕಾರವು ಇದನ್ನು ನಿರಾಕರಿಸಿತ್ತು. ಈ ಬಗ್ಗೆ ಕೇಂದ್ರ ಸರಕಾರ, ಉತ್ತರ ಪ್ರದೇಶ ಸರಕಾರ ಮತ್ತು ಉತ್ತರಾಖಂಡ ಸರಕಾರಗಳು ತಮ್ಮ ಅಭಿಪ್ರಾಯವನ್ನು ಮಂಡಿಸಲು ಸರ್ವೋಚ್ಚ ನ್ಯಾಯಾಲಯವು ನೋಟಿಸ್ ನೀಡಿತ್ತು.
‘Right to life is paramount’: Supreme Court asks UP govt to reconsider allowing Kanwar yatra.#KanwarYatra #UttarPradesh (@AneeshaMathur/@mewatisanjoo)https://t.co/BRqgevBE1x
— IndiaToday (@IndiaToday) July 16, 2021
೧. ಕೇಂದ್ರ ಸರಕಾರವು ಈ ಪ್ರತಿಜ್ಞಾಪತ್ರದಲ್ಲಿ, ಕೊರೋನಾ ಕಾಲದಲ್ಲಿ ಉತ್ತರಾಖಂಡದಲ್ಲಿ ಹರಿದ್ವಾರದಿಂದ ಗಂಗಾಜಲವನ್ನು ತರಲು ಕಾವಡಧಾರಿಗಳಿಗೆ ಅನುಮತಿ ನೀಡದಿರಿ; ಆದರೆ ಧಾರ್ಮಿಕ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾ ರಾಜ್ಯ ಸರಕಾರವು ಟ್ಯಾಂಕರ್ ನಿಂದ ಭಕ್ತರಿಗಾಗಿ ಗಂಗಾಜಲ ವಿತರಿಸುವ ವ್ಯವಸ್ಥೆಯನ್ನು ಮಾಡಬೇಕು. ಟ್ಯಾಂಕರ ನಿರ್ದಿಷ್ಟ ಸ್ಥಳದಲ್ಲಿ ಒದಗಿಸಿಕೊಟ್ಟು ಇದರಿಂದ ಸಂಬಂಧಿತ ಪರಿಸರದಲ್ಲಿ ಭಕ್ತರಿಗೆ ಗಂಗಾಜಲ ಸಿಕ್ಕಿ ತಮಗೆ ಹತ್ತಿರವಿರುವ ಶಿವನ ದೇವಾಲಯದಲ್ಲಿ ಅಭಿಷೇಕ ಮಾಡಬಹುದು. ಈ ಕಾಲಾವಧಿಯಲ್ಲಿ ಕೊರೊನಾದ ನಿಯಮಗಳ ಪಾಲನೆ ನಿರ್ಧರಿಸುವ ಜವಾಬ್ದಾರಿಯನ್ನು ರಾಜ್ಯ ಸರಕಾರವುತೆಗೆದುಕೊಳ್ಳಬೇಕು.
೨. ಉತ್ತರಪ್ರದೇಶ ಸರಕಾರದ ಪಕ್ಷವನ್ನು ಮಂಡಿಸುವಾಗ ನ್ಯಾಯವಾದಿ ಸಿ.ಎಸ್. ವೈದ್ಯನಾಥನ್ ಇವರು, ಕಾವಡ ಯಾತ್ರೆಯ ಧಾರ್ಮಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಈ ಅನುಮತಿಯನ್ನು ನೀಡಲಾಗಿದೆ. ವ್ಯಾಕ್ಸಿನೇಶನ್, ಅದೇರೀತಿ `ಆರ್.ಟಿ.ಪಿ.ಸಿ.ಆರ್’ ಪರೀಕ್ಷಣೆಯ ನಕಾರಾತ್ಮಕ(ನೆಗೆಟಿವ್) ವರದಿಯ ಆಧಾರದ ಮೇಲೆ ಅನುಮತಿ ನೀಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
೩. ಈ ಬಗ್ಗೆ ನ್ಯಾಯಾಲಯವು, ನಾವು ಈ ಬಗ್ಗೆ ಇನ್ನೊಂದು ಸಲ ವಿಚಾರ ಮಾಡಲು ನಿಮಗೆ ಅವಕಾಶ ನೀಡಲು ಬಯಸುತ್ತೇವೆ. ಯಾತ್ರೆಗೆ ಅನುಮತಿ ನೀಡಬೇಕೆ ಅಥವಾ ಬೇಡವೇ ನೀವೇ ವಿಚಾರ ಮಾಡಿ. ನಾವೆಲ್ಲರು ಭಾರತೀಯ ನಾಗರಿಕರಿದ್ದೇವೆ. ಎಲ್ಲರಿಗೂ ಬದುಕುವ ಅಧಿಕಾರವಿದೆ. ನಾವು ನಿಮಗೆ ಜುಲೈ ೧೯ ರ ತನಕ ವಿಚಾರ ಮಾಡಲು ಸಮಯ ನೀಡುತ್ತೇವೆ. ಇಲ್ಲದಿದ್ದರೆ ಯೋಗ್ಯವಾದ ಆದೇಶವನ್ನು ನೀಡಬೇಕಾಗಬಹುದು ಎಂದು ಹೇಳಿತು.
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಕೇರಳಮ್ನ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ನ ಮೊದಲ ಮಹಿಳಾ ಶಾಸಕಿ ರೆಸ್ಟೋರೆಂಟ್ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಮಾಡಿದ್ದಕ್ಕೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!
ಒಡಿಶಾ: ಇಂಜಿನಿಯರ್ನಿಂದ ಕೋಟ್ಯಂತರ ರೂಪಾಯಿಗಳ ಅಕ್ರಮ ಆಸ್ತಿ ವಶ