ಹಿಂದೂಗಳು, ಸಿಖ್ಖರು ಮೊದಲಾದವರ ಬದಲಿಗೆ ಮುಸಲ್ಮಾನರು ಇದ್ದಿದ್ದರೆ ಕಾಂಗ್ರೆಸ್ ಸರಕಾರ ಲಸಿಕೆ ನೀಡುವುದನ್ನು ತಪ್ಪಿಸುತ್ತಿತ್ತೇನು ?
ಇಂತಹ ಸರಕಾರವನ್ನು ನ್ಯಾಯಾಲಯವು ತರಾಟೆಗೆ ತೆಗೆದುಕೊಳ್ಳುವುದರ ಜೊತೆಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ಜಯಪುರ (ರಾಜಸ್ಥಾನ) – ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಹಿಂದೂಗಳು ಮತ್ತು ಸಿಖ್ಖರಂತಹ ಅಲ್ಪಸಂಖ್ಯಾತರಿಗೆ ರಾಜಸ್ಥಾನ ಸರಕಾರವು ಲಸಿಕೆ ನೀಡದಿರುವುದು ಗಮನಕ್ಕೆ ಬಂದನಂತರ ರಾಜಸ್ಥಾನ ಉಚ್ಚ ನ್ಯಾಯಾಲಯದ ಜೋಧಪುರ ನ್ಯಾಯಪೀಠವು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯವು ಮೇ ೨೮ ರಂದು ಲಸಿಕೆ ನೀಡುವಂತೆ ಆದೇಶವನ್ನು ನೀಡಿಯೂ ಸರಕಾರ ಏಕೆ ಪಾಲಿಸಲಿಲ್ಲ ? ಎಂದು ನ್ಯಾಯಾಲಯವು ಸರಕಾರಕ್ಕೆ ಉತ್ತರಿಸುವಂತೆ ಸೂಚಿಸಿದೆ.
ಯಾವುದೇ ಅಧಿಕೃತ ಗುರುತಿನ ಚೀಟಿ ಇಲ್ಲದ ಪಾಕಿಸ್ತಾನದಿಂದ ಬಂದ ಅಲ್ಪಸಂಖ್ಯಾತ ವಲಸಿಗರು ಸಹ ಲಸಿಕೆ ಹಾಕಿಸಿಕೊಳ್ಳಲು ಅರ್ಹರು ಎಂದು ಸರಕಾರವು ಏಕೆ ಪರಿಗಣಿಸುವುದಿಲ್ಲ ? ಗುರುತಿನ ಚೀಟಿ ಇಲ್ಲದಿದ್ದರೂ ಎಲ್ಲರಿಗೂ ಲಸಿಕೆ ಹಾಕಬಹುದು ಎಂದು ಕೇಂದ್ರ ಸರಕಾರವು ಆದೇಶ ನೀಡಿದರೂ ಸರಕಾರವು ಅದನ್ನು ಯಾಕೆ ಪಾಲಿಸುತ್ತಿಲ್ಲ ? ಈ ನಿಟ್ಟಿನಲ್ಲಿ ಸರಕಾರವು ಕೇಂದ್ರದಿಂದ ಹೆಚ್ಚಿನ ಮಾಹಿತಿ ಏಕೆ ಕೇಳುತ್ತಿದೆ ?, ಇಂತಹ ಶಬ್ದದಲ್ಲಿ ನ್ಯಾಯಾಲಯವು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
‘Why are Pakistani Hindus not vaccinated yet?’ Rajasthan HC questions state govt https://t.co/LAgiEKM7J6
— OpIndia.com (@OpIndia_com) June 6, 2021
ಸ್ಥಳಾಂತರಿತ ಹಿಂದೂಗಳು ಅನರ್ಹರು; ಆದರೆ ಮುಸಲ್ಮಾನರಿಗಾಗಿ ವಿಶೇಷ ಲಸಿಕೀಕರಣ
ಒಂದೆಡೆ, ರಾಜಸ್ಥಾನದ ಕಾಂಗ್ರೆಸ್ ಸರಕಾರವು ಪಾಕಿಸ್ತಾನದಿಂದ ಬಂದಿರುವ ಹಿಂದೂಗಳು, ಸಿಖ್ಖರು ಮೊದಲಾದ ಅಲ್ಪಸಂಖ್ಯಾತರಿಗೆ ಕೊರೊನಾ ವಿರುದ್ಧ ಲಸಿಕೆ ನೀಡಲು ತಡೆಯುತ್ತಿದ್ದರೆ, ಮತ್ತೊಂದೆಡೆ ರಾಜ್ಯದ ಮುಸಲ್ಮಾನರಿಗೆ ಮಾತ್ರ ವಿಶೇಷ ಶಿಬಿರಗಳ ಮೂಲಕ ಲಸಿಕೆ ಹಾಕಲಾಗುತ್ತಿದೆ. ಲಸಿಕೆಗಳ ಬಗ್ಗೆ ಮುಸಲ್ಮಾನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಸರಕಾರವು ಲಸಿಕಾ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದು ಹೇಳಲಾಗುತ್ತಿದೆ.

‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !