ಪರಿಸ್ಥಿತಿ ತಿಳಿಯದೆ ಅಮಾಯಕ ಜನರನ್ನು ಥಳಿಸುವವರ ವಿರುದ್ಧ ಅಪರಾಧ ದಾಖಲಿಸಿ ಸೆರೆಮನೆಗಟ್ಟಬೇಕು !

ಸೂರಜಪುರ (ಛತ್ತೀಸಗಡ) – ರಾಜ್ಯದಲ್ಲಿ ಸಂಚಾರ ನಿಷೇಧದ ಸಂದರ್ಭದಲ್ಲಿ ಔಷಧಿ ತರಲು ಹೊರಟಿದ್ದ ಯುವಕನ ಕೆನ್ನೆಗೆ ಬಾರಿಸಿ ಹಾಗೂ ಆತನ ಸಂಚಾರವಾಣಿಯನ್ನು ನೆಲಕ್ಕೆ ಅಪ್ಪಳಿಸಿದ ಆರೋಪದ ಮೇಲೆ ಸೂರಜಪುರದ ಜಿಲ್ಲಾಧಿಕಾರಿ ರಣವೀರ ಶರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ನಂತರ, ಮುಖ್ಯಮಂತ್ರಿ ಭೂಪೇಶ ಬಘೆಲರು ಶರ್ಮಾ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಆದೇಶಿಸಿದರು.
Chhattisgarh IAS officer removed after video of him slapping man went viral https://t.co/jpl7HdRZtl
— Hindustan Times (@HindustanTimes) May 23, 2021
ಮುಖ್ಯಮಂತ್ರಿ ಬಘೆಲ್ ಅವರು ಟ್ವೀಟ್ ಮಾಡಿ, ಸಾಮಾಜಿಕ ಮಾಧ್ಯಮದಿಂದ ಸೂರಜಪುರದ ಜಿಲ್ಲಾಧಿಕಾರಿ ರಣವೀರ ಶರ್ಮಾ ಅವರು ಯುವಕನ ಮೇಲೆ ತಪ್ಪಾಗಿ ವರ್ತಿಸಿದ ಪ್ರಕರಣವನ್ನು ನಾನು ನೋಡಿದೆ. ಇದು ಅತ್ಯಂತ ದುಃಖಕರ ಹಾಗೂ ಖಂಡನೀಯವಾಗಿದೆ. ಛತ್ತಿಸಗಡದಲ್ಲಿ ಇಂತಹ ಕೃತ್ಯವನ್ನು ಸಹಿಸಲಾಗುವುದಿಲ್ಲ. ಯಾವುದೇ ಅಧಿಕಾರಿಯ ಆಡಳಿತಾವಧಿಯಲ್ಲಿ ಈ ರೀತಿಯ ನಡವಳಿಕೆಯನ್ನು ಸಹಿಸಲಾಗುವುದಿಲ್ಲ. ಈ ಘಟನೆಯಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ. ನಾನು ಯುವಕ ಮತ್ತು ಅವನ ಕುಟುಂಬದ ಬಗ್ಗೆ ವಿಷಾದಿಸುತ್ತೇನೆ ಎಂದು ಹೇಳಿದರು.
ಇಂದಿನ ಕಾಲದಲ್ಲಿ ವೈಕುಂಠಗಮನ ಎಂದೆಲ್ಲಾ ಹೇಳುವುದನ್ನು ನಾನು ಒಪ್ಪುವುದಿಲ್ಲ, ಇವು ನಿರ್ದಿಷ್ಟ ವರ್ಗವೊಂದು ಹೇರಿದ ಸಂಗತಿಗಳು! : Sharad Pawar on Sant Tukaram
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!