ಪುಣೆಯಲ್ಲಿ ಗೋರಕ್ಷಕನ ಜೊತೆ ಆತನ ಸ್ನೇಹಿತರನ್ನು ಹೊಡೆದಿದ್ದಕ್ಕಾಗಿ ೩ ಮತಾಂಧರ ಬಂಧನ

ಅಪರಾಧದಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ಉದ್ಧಟ ಮತಾಂಧರು !

ಪುಣೆ – ನಿರ್ಗತಿಕ ಹಸು-ಎತ್ತುಗಳ ಸೇವೆಯನ್ನು ಮಾಡುವ ಬದ್ರಿನಾಥ ಪಾರ್ಥಸಾರಥಿ ಎಂಬ ಗೋರಕ್ಷಕನನ್ನು ಹಾಗೂ ಆತನ ಸ್ನೇಹಿತರನ್ನು ೩ ಮತಾಂಧರು ರಾಡ್‍ನಿಂದ ಹಾಗೂ ಕಾಲುಗಳಿಂದ ಒದೆದು ಥಳಿಸಿದರು. ಈ ಪ್ರಕರಣದಲ್ಲಿ ವಾನವಡಿ ಪೊಲೀಸರು ಶಹಬಾಜ ಕುರೇಶಿ, ಅಫ್ಜಲ್ ಕುರೇಶಿ ಮತ್ತು ಹಸೀನಾ ಕುರೇಶಿಯನ್ನು ಬಂಧಿಸಿದ್ದಾರೆ. ಬದ್ರಿನಾಥ ಪಾರ್ಥಸಾರಥಿ ಅವರು ವಾನವಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಭೋಸರಿಯಲ್ಲಿರುವ ನಿರ್ಗತಿಕ ಹಸುಗಳನ್ನು ಭೋಸರಿಯ ಪಾಂಜಾರ್‍ಪೋಳಕ್ಕೆ ಕರೆದೊಯ್ಯುವ ಕಾರಣದಿಂದ ಪಾರ್ಥಸಾರಥಿ ಮತ್ತು ಮತಾಂಧರ ನಡುವೆ ವಿವಾದವಾಗಿತ್ತು. ಪಾರ್ಥಸಾರಥಿ ಟೆಂಪೊದಲ್ಲಿ ಕರೆದೊಯ್ಯುತ್ತಿದ್ದ ಎತ್ತು ತಮ್ಮದೆಂದು ಶಹಬಾಜ್ ಮತ್ತು ಅವರ ಕುಟುಂಬದವರು ಹೇಳಿಕೊಂಡಿದ್ದರು.