ಕೇಂದ್ರ ವಿಜ್ಞಾನ ಸಚಿವಾಲಯದ ಸಂಶೋಧನೆಗಾಗಿ ‘ಏಮ್ಸ್’ ಗೆ ೩ ಲಕ್ಷ ರೂಪಾಯಿ ಮಂಜೂರು !
ಗಾಯತ್ರಿ ಮಂತ್ರ ಮಾತ್ರವಲ್ಲ, ಇತರ ಮಂತ್ರಗಳನ್ನು ಸಹ ಇತರ ಕಾಯಿಲೆಗಳ ನಿವಾರಣೆಗಾಗಿ ಬಳಸಬಹುದು, ಎಂಬ ಬಗ್ಗೆಯೂ ಸಂಶೋಧನೆ ಮಾಡಬೇಕು !

ನವ ದೆಹಲಿ – ಕೇಂದ್ರ ವಿಜ್ಞಾನ ಸಚಿವಾಲಯವು ಗಾಯತ್ರಿ ಮಂತ್ರದಿಂದ ಕೊರೋನಾವನ್ನು ಗುಣಪಡಿಸಬಹುದೇ ? ಈ ಬಗ್ಗೆ ಸಂಶೋಧನೆಯನ್ನು ಮಾಡಲು ಹೃಷಿಕೇಶದಲ್ಲಿರುವ ಏಮ್ಸ್ ಆಸ್ಪತ್ರೆಗೆ ೩ ಲಕ್ಷ ರೂಪಾಯಿ ನೀಡಿದೆ.
ಈ ಆಸ್ಪತ್ರೆಯಲ್ಲಿ ಸಂಶೋಧನೆ ನಡೆಸಲು ಕೊರೊನಾದ ಸಾಮಾನ್ಯ ರೋಗಲಕ್ಷಣಗಳನ್ನು ಹೊಂದಿರುವ ೨೦ ಜನರನ್ನು ಆಯ್ಕೆ ಮಾಡಲಾಗುತ್ತದೆ. ಈ ಪೈಕಿ ಒಂದು ಗುಂಪಿಗೆ ನಿಯಮಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದರೆ, ಇನ್ನೊಂದು ಗುಂಪಿಗೆ ನಿಯಮಿತ ಔಷಧದೊಂದಿಗೆ ಆಯುರ್ವೇದ ಔಷಧ, ಗಾಯತ್ರಿ ಮಂತ್ರ ಪಠಣ ಮತ್ತು ಯೋಗಾಸನವನ್ನು ನಿಯಮಿತ ಮಾಡಲು ಹೇಳಲಾಗುತ್ತದೆ. ನಂತರ ಎರಡೂ ಗುಂಪಿನ ರೋಗಿಗಳ ಮೇಲಿನ ಪರಿಣಾಮಗಳನ್ನು ಪರಿಶೀಲಿಸಲಾಗುತ್ತದೆ. ರೋಗಿಗಳ ಮೇಲ್ವಿಚಾರಣೆಗಾಗಿ ತಜ್ಞ ವೈದ್ಯರನ್ನು ನಿಯೋಜಿಸಲಾಗುವುದು. ಈ ಸಂಶೋಧನೆಯು ಸುಮಾರು ೨-೩ ತಿಂಗಳುಗಳ ತನಕ ನಡೆಯಲಿದೆ. ಈ ಅವಧಿಯಲ್ಲಿ ರೋಗಿಗಳಿಗೆ ಸಾಮಾನ್ಯ ಔಷಧಿಗಳೊಂದಿಗೆ ಪತಂಜಲಿಯ ‘ಕೊರೊನಿಲ್’ ಈ ಆಯುರ್ವೇದ ಔಷಧವನ್ನೂ ನೀಡಲಾಗುವುದು. ಈ ಚಿಕಿತ್ಸೆಗಳಿಂದ ಕೊರೋನಾ ರೋಗಿಗಳಿಗೆ ಸಹಾಯ ಆಗುತ್ತದೆಯೇ ಎಂಬುದನ್ನು ನೋಡಬೇಕಾಗಿದೆ. ಎಂದು ಡಾ. ರುಚಿ ದುವಾ ಮಾಹಿತಿ ನೀಡಿದ್ದಾರೆ.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ