ಬೆಂಗಳೂರಿನ ಸ್ಮಶಾನದ ಹೊರಗೆ ‘ಹೌಸ್ ಫುಲ್’ ಫಲಕ !

ಭಾರತದಲ್ಲಿ ಇಂತಹ ಪರಿಸ್ಥಿತಿ ಬರಬಹುದು ಎಂಬುದು ಯಾರೂ ನಿರೀಕ್ಷಿಸಿರಲಿಲ್ಲ; ಆದರೆ ಆಪತ್ಕಾಲ ಬರುತ್ತದೆ, ಎಂದು ದ್ರಷ್ಟಾರರು, ಸಂತರು ಇತ್ಯಾದಿಗಳು ಹೇಳುತ್ತಿದ್ದರು, ಅದು ಅಂತಹ ಘಟನೆಗಳಲ್ಲಿ ಕಂಡುಬರುತ್ತದೆ !

ಸ್ಮಶಾನದ ಹೊರಗೆ ಹೌಸ್ ಫುಲ್ ಫಲಕ

ಬೆಂಗಳೂರು (ಕರ್ನಾಟಕ) – ಕೊರೋನಾ ಸೋಂಕಿನಿಂದ ನಗರದಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳು ಸಾಯುತ್ತಿದ್ದಾರೆ. ಅವರ ಶವಸಂಸ್ಕಾರ ಮಾಡಲು ಸ್ಮಶಾನದಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗುತ್ತಿದೆ. ಚಾಮರಾಜಪೇಟೆಯ ಸ್ಮಶಾನಭೂಮಿಯ ಹೊರಗಂತೂ ‘ಹೌಸ್ ಫುಲ್’ ಎಂಬ ಫಲಕ ಹಾಕಲಾಗಿದೆ. ಸ್ಮಶಾನಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಸ್ಥಳಾವಕಾಶವಿಲ್ಲದ ಕಾರಣ ಈ ಫಲಕವನ್ನು ಹಾಕಲಾಗಿದೆ. ಸ್ಮಶಾನಭೂಮಿಯಲ್ಲಿ ೨೦ ಶವಗಳ ಅಂತ್ಯಕ್ರಿಯೆ ಮಾಡಲು ವ್ಯವಸ್ಥೆ ಇದೆ. ಆದ್ದರಿಂದ ಶವ ಸಂಸ್ಕಾರಕ್ಕಾಗಿ ಹೊಸ ಮೃತದೇಹಗಳನ್ನು ತೆಗೆದುಕೊಳ್ಳಲು ನಿರಾಕರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಈ ರೀತಿಯ ೧೩ ಸ್ಮಶಾನ ಭೂಮಿಗಳಿವೆ ಅಲ್ಲಿ ವಿದ್ಯುತ್ ಶವಗಾರಿವೆ; ಆದರೆ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಜನರು ಅಂತ್ಯಕ್ರಿಯೆಗಾಗಿ ಬಹಳ ಸಮಯ ಕಾಯಬೇಕಾಬೇಕಾಗುತ್ತದೆ.

ಸೂರತ್‍ನಲ್ಲಿ ಮರಣ ಪ್ರಮಾಣಪತ್ರಕ್ಕಾಗಿ ಸಾಲು

ಕೊರೋನಾದಿಂದ ಸಾವನ್ನಪ್ಪಿದವರ ಮರಣ ಪ್ರಮಾಣಪತ್ರವನ್ನು ಪಡೆಯಲು ಸೂರತ್‍ನ ಜನರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅವುಗಳನ್ನು ಪಡೆಯಲು ಸರಕಾರಿ ಕಚೇರಿಗಳ ಹೊರಗೆ ದೊಡ್ಡ ಸರತಿ ಸಾಲುಗಳು ಇದೆ. ನಗರದಲ್ಲಿ ಸಾವಿನ ಸಂಖ್ಯೆ ಹೆಚ್ಚು ಇದೆ.