ಅಸ್ಸಾಂನ ದೇವಾಲಯಗಳಲ್ಲಿ ಲೂಟಿ ಮಾಡುವ ಮತಾಂಧರ ಗುಂಪು ಸಕ್ರಿಯ
ಮತಾಂಧರ ತಂಡವು ಶ್ರೀಮಂತ ಇಸ್ಲಾಮಿಕ್ ಸಂಘಟನೆಗಳ ಕಚೇರಿಗಳನ್ನು ಅಥವಾ ಮಸೀದಿಗಳನ್ನು ದೋಚುವುದಿಲ್ಲ, ಆದರೆ ದೇವಾಲಯಗಳಲ್ಲಿ ಲೂಟಿ ಮಾಡುತ್ತಾರೆ. ಇದರಿಂದ ಅವರ ಮತಾಂಧತೆ ಕಂಡು ಬರುತ್ತದೆ !
ಕರೀಮ್ಗಂಜ್ (ಅಸ್ಸಾಂ) – ಬಾಂಗ್ಲಾದೇಶ ಗಡಿಯ ಬಳಿಯ ಕರೀಮ್ಗಂಜ್ ಜಿಲ್ಲೆಯ ಬಾಲಿಯಾದಲ್ಲಿರುವ ೩೦೦ ವರ್ಷಗಳ ಹಳೆಯ ಪ್ರಸಿದ್ಧ ಶ್ರೀ ನುರಸಿಂಹ ದೇವಸ್ಥಾನದಲ್ಲಿ ಸಶಸ್ತ್ರ ಮತಾಂಧರು ದಾಳಿ ಮಾಡಿ ಚಿನ್ನದ ಆಭರಣ, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಈ ಸಮಯದಲ್ಲಿ ದೇವಾಲಯದ ಅರ್ಚಕನ ಕುಟುಂಬ ಸದಸ್ಯರನ್ನು ಕಟ್ಟಿಹಾಕಿ ಥಳಿಸಲಾಯಿತು. ಈ ಪ್ರಕರಣದಲ್ಲಿ ನೀಲಂಬಜಾರ್ ಪೊಲೀಸರ ತಂಡ ೧೨ ಮತಾಂಧರನ್ನು ಬಂಧಿಸಿದೆ. ಈ ಗುಂಪು ದರೋಡೆಗೆ ಬಳಸಿದ ವಾಹನವನ್ನು ವಶಪಡಿಸಿಕೊಂಡು ಅದರ ಚಾಲಕನನ್ನು ಬಂಧಿಸಿದೆ.
೧. ದೇವಾಲಯದಲ್ಲಿ ಅರ್ಚಕರ ಕದ್ದ ಮೊಬೈಲ್ ಫೋನ್ನಿಂದ ಮತಾಂಧ ದರೋಡೆಕೋರರನ್ನು ತನಿಖಾ ತಂಡ ಪತ್ತೆ ಮಾಡಿದೆ ಎಂದು ಕರಿಮ್ಗಂಜ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಪೊಲೀಸರು ಅವರಿಂದ ಆಭರಣ ಮತ್ತು ೩ ಸಾವಿರ ರೂಪಾಯಿ ಜಪ್ತಿ ಮಾಡಿದೆ.
೨. ಅಸ್ಸಾಂನ ಹಲವಾರು ಜಿಹಾದಿ ಗುಂಪುಗಳು ಅಸ್ಸಾಂನ ಬ್ರಹ್ಮಪುತ್ರ, ಬರಾಕ್ ಕಣಿವೆ ಮತ್ತು ಕಚಾರನಲ್ಲಿನ ದೇವಾಲಯಗಳನ್ನು ಲೂಟಿ ಮಾಡುವಲ್ಲಿ ಸಕ್ರಿಯವಾಗಿವೆ. ಈ ಗುಂಪುಗಳು ಗೋಸಾಗಾಟದಲ್ಲೂ ಭಾಗಿಯಾಗಿವೆ. ಅವರಲ್ಲಿ ಹೆಚ್ಚಿನವರು ಬಾಂಗ್ಲಾದೇಶದ ನುಸುಳುವವರು ಆಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ