ಮೊದಲೇ ಬಂಗಾಲದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ; ಆದರೆ, ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ನಿರ್ಲಕ್ಷಿಸಿವೆ ಮತ್ತು ಕೇಂದ್ರ ಸರಕಾರವು ರಾಷ್ಟ್ರಪತಿಗಳ ಆಡಳಿತವನ್ನು ಹೇರದ ಕಾರಣ ಓರ್ವ ಪೊಲೀಸ್ ಅಧಿಕಾರಿಯ ಹತ್ಯೆಯಾಯಿತು, ಇದು ರಾಜಕೀಯ ಪಕ್ಷಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ.
ನವ ದೆಹಲಿ : ದರೋಡೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ಬಿಹಾರದ ಕಿಶನಗಂಜ್ ನಗರ ಪೊಲೀಸ್ ಠಾಣೆಯ ಅಧಿಕಾರಿ ಅಶ್ವಿನಿ ಕುಮಾರ ಇವರು ಪೊಲೀಸ್ ತಂಡದೊಂದಿಗೆ ಬಂಗಾಲಕ್ಕೆ ತೆರಳಿದ್ದರು. ಈ ಸಮಯದಲ್ಲಿ ದಿನಾಜಪುರ ಜಿಲ್ಲೆಯ ಪಂಜಿಪಾಡಾ ಪೊಲೀಸ್ ಪ್ರದೇಶದ ಪನತಾಪಾಡಾ ಗ್ರಾಮದಲ್ಲಿ, ಆರೋಪಿಗಳನ್ನು ರಕ್ಷಿಸಲು ಜನಸಮೂಹವು ಅಶ್ವಿನಿ ಕುಮಾರ ತಂಡದ ಮೇಲೆ ಹಲ್ಲೆ ನಡೆಸಿತು. ಇದರಲ್ಲಿ ತಂಡದ ಇತರ ಪೊಲೀಸರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಅಶ್ವಿನಿ ಕುಮಾರ ಜನಸಮೂಹದ ಕೈಗೆ ಸಿಲುಕಿದರು. ನಂತರ ಅವರನ್ನು ಅಮಾನವೀಯವಾಗಿ ಥಳಿಸಲಾಯಿತು. ಕತ್ತು ಹಿಸುಕಿದುದರಿಂದ ಅವರು ಮರಣ ಹೊಂದಿದರು. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಬಿಹಾರ ಪೊಲೀಸ್ ನಿರೀಕ್ಷಕರನ್ನು ಹೊಡೆದು ಹತ್ಯೆ!| https://t.co/K1fXUAICyK#BiharPolice #WestBengal #KilledByMob
— kannadaprabha (@KannadaPrabha) April 10, 2021
೧. ಬಿಹಾರದ ಪೊಲೀಸ್ ಮಹಾನಿರ್ದೇಶಕರು, ತಾವು ಈ ಘಟನೆಯ ಬಗ್ಗೆ ಬಂಗಾಲದ ಪೊಲೀಸ್ ಮಹಾನಿರ್ದೆಶಕರೊಂದಿಗೆ ಚರ್ಚಿಸಿದ್ದೇವೆ. ಆಗ ಘಟನೆಯ ಬಗ್ಗೆ ಅವರು ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಹುತಾತ್ಮರಾದ ಪೊಲೀಸ್ ಅಧಿಕಾರಿಗಳ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
೨. ಅಶ್ವಿನಿ ಕುಮಾರ್ ಅವರ ಕುಟುಂಬಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ತಲಾ ೧ ಕೋಟಿ ರೂಪಾಯಿಗಳ ಪರಿಹಾರ ನೀಡಬೇಕೆಂದು ಬಿಹಾರ ಪೊಲೀಸ್ ಸಂಘದ ಅಧ್ಯಕ್ಷ ಮೃತ್ಯುಂಜಯ ಕುಮಾರ ಸಿಂಗ್ ಒತ್ತಾಯಿಸಿದ್ದಾರೆ.

ಹಿಂದೂ ಯುವತಿಯನ್ನು ಪ್ರೇಮ ಜಾಲದಲ್ಲಿ ಸೆಳೆಯಲು ಯತ್ನ, ಮಾನಸಿಕ ಕಿರುಕುಳ ನೀಡಿದ ಸುಫಿಯಾನ್ ಖಾನ್!
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್
ದೇಶದ ಮೊದಲ ಖಾಸಗಿ ಸಂಸ್ಥೆಯಿಂದ ಉಪಗ್ರಹಗಳ ಯಶಸ್ವಿ ಉಡಾವಣೆ
ಗೂಗಲ್ ನ ‘ಜೆಮಿನಿ’ ಎಐ ಜಾಲತಾಣವು ‘ಜಯ ಶ್ರೀರಾಮ್’ಗೆ ಪ್ರತಿಕ್ರಿಯೆ ನೀಡುತ್ತದೆ, ಹೀಗಿರುವಾಗ ‘ಸಿರಿ’ಗೆ ಏಕೆ ನೀಡಲು ಸಾಧ್ಯವಿಲ್ಲ ? – ಹಿಂದುತ್ವನಿಷ್ಠರ ಪ್ರಶ್ನೆ