ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸದಂತೆ ನೀಡಿದ್ದ ಆದೇಶವನ್ನು ಹಿಂಪಡೆದ ಕರ್ನಾಟಕ ವಕ್ಫ್ ಮಂಡಳಿ !

ಇಂತಹ ಜನರ ಪರ ಆದೇಶವನ್ನು ಹಿಂಪಡೆಯಲು ವಕ್ಫ್ ಮಂಡಳಿಯನ್ನು ಯಾರು ಒತ್ತಾಯಿಸಿದರು ?

ಧ್ವನಿವರ್ಧಕದಿಂದ ನೀಡುವ ಅಜಾನ್‍ನಿಂದ ಜನರಿಗೆ ಆಗುವ ತೊಂದರೆ ಎಲ್ಲರಿಗೂ ತಿಳಿದಿದೆ ಮತ್ತು ಮತಾಂಧರಿಗೂ ಸಹ ತಿಳಿದಿದೆ; ಆದರೆ, ಅವರು ಪೊಲೀಸ್ ಮತ್ತು ಆಡಳಿತದ ವಿರುದ್ಧ ಮಾತ್ರವಲ್ಲ, ಸರ್ವೋಚ್ಚ ನ್ಯಾಯಾಲಯದ ಮುಂದೆಯೂ ಬಾಗುವುದಿಲ್ಲ ಹಾಗೂ ಯಾರಾದರು ವಿರೋಧಿಸಿದರೆ ಅವರ ಧ್ವನಿಯನ್ನು ಅದುಮಿಡಲಾಗುತ್ತದೆ, ಇದೇ ಇದರಿಂದ ಗಮನಕ್ಕೆ ಬರುತ್ತದೆ !

ಬೆಂಗಳೂರು (ಕರ್ನಾಟಕ) – ಮಸೀದಿಗಳ ಧ್ವನಿವರ್ಧಕಗಳಿಗೆ ಸಂಬಂಧಿಸಿದಂತೆ ಹೊರಡಿಸಲಾದ ಸುತ್ತೋಲೆಯನ್ನು ಕರ್ನಾಟಕ ವಕ್ಫ್ ಮಂಡಳಿಯು ಹಿಂತೆಗೆದುಕೊಂಡಿದೆ. ಈ ಸುತ್ತೋಲೆಯಲ್ಲಿ ರಾತ್ರಿ ೧೦ ರಿಂದ ಬೆಳಿಗ್ಗೆ ೬ ರವರೆಗೆ ಧ್ವನಿವರ್ಧಕಗಳನ್ನು ಅಳವಡಿಸಬಾರದು ಎಂದು ಆದೇಶಿಸಲಾಗಿತ್ತು. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಅದಕ್ಕಾಗಿ ಈ ಆದೇಶ ಹೊರಡಿಸಲಾಗಿತ್ತು.