ಸಾಕ್ಷಿಗಳಿಂದ ಸಹಾಯ ಮಾಡುವ ಬದಲು ಮೊಬೈಲ್ನಲ್ಲಿ ಘಟನೆಯ ಚಿತ್ರೀಕರಣ
|
* ಇದು ಸಮಾಜದ ಸಂವೇದನಾಶೀಲತೆ ನಾಶವಾಗುತ್ತಿದೆ ಎಂಬುದರ ಸಂಕೇತವಾಗಿದೆ. ಸ್ವಾತಂತ್ರ್ಯದ ೭೪ ವರ್ಷಗಳಲ್ಲಿ ಇದುವರೆಗಿನ ಆಡಳಿತಗಾರರು ‘ಅಂತಹ ಪರಿಸ್ಥಿತಿಯಲ್ಲಿ ಪರಸ್ಪರರನ್ನು ಸಹಾಯ ಮಾಡಬೇಕು’, ಎಂದು ಕಲಿಸಲಿಲ್ಲ ಎಂಬುದರ ಫಲಿತಾಂಶ ಇದು ! * ಇಂತಹ ಘಟನೆಗಳು ನಡುರಸ್ತೆಯಲ್ಲಿ ಹಾಡುಹಗಲೇ ನಡೆಯುತ್ತವೆ ಅಂದರೆ ಉತ್ತರ ಪ್ರದೇಶದ ಕಾನೂನು ವ್ಯವಸ್ಥೆ ಎಷ್ಟು ಚಿಂತಾಜನಕವಾಗಿದೆ ಎಂಬುದನ್ನು ತೋರಿಸುತ್ತದೆ! |
ಲಕ್ಷ್ಮಣಪುರಿ (ಉತ್ತರಪ್ರದೇಶ) – ಮಡಿಯಾವ್ ಪ್ರದೇಶದ ಪ್ರೀತಿನಗರದಲ್ಲಿ ರಫೀಕ್ ಎಂಬವನು ತನ್ನ ಪತ್ನಿ ಅಫ್ಸಾನಾಳನ್ನು ಚಾಕುವಿನಿಂದ ಇರಿದು ಸಾಯಿಸಿರುವ ಘಟನೆ ನಡೆಡಿದೆ. ಅವಳು ರಕ್ತಸಿಕ್ತಳಾಗಿ ರಸ್ತೆಯಲ್ಲಿ ನರಳುತ್ತಿದ್ದಳು. ಅಲ್ಲಿದ್ದ ಜನರು ಮೊಬೈಲ್ನಲ್ಲಿ ವೀಡಿಯೋವನ್ನು ಚಿತ್ರಿಸಿದರು; ಆದರೆ ಅವಳ ಸಹಾಯಕ್ಕೆ ಯಾರೂ ಮುಂದೆ ಬರಲಿಲ್ಲ. ಪೊಲೀಸರು ಸ್ಥಳಕ್ಕೆ ಧಾವಿಸಿ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ವೈದ್ಯರು ಅಫ್ಸಾನಾ ಸಾವನ್ನಪ್ಪಿದ್ದಾರೆಂದು ಘೋಷಿಸಿದರು. ಪೊಲೀಸರು ರಫೀಕ್ನನ್ನು ಬಂಧಿಸಿದ್ದಾರೆ. ರಫೀಕ್ನಿಗೆ ಅಫ್ಸಾನಾಗೆ ಅನೈತಿಕ ಸಂಬಂಧವಿದೆ ಎಂದು ಸಂಶಯವಿತ್ತು. ಅವನು ಅನೇಕ ಬಾರಿ ಅದರ ಬಗ್ಗೆ ಅವಳಿಗೆ ತಿಳಿಹೇಳಿದ್ದನು. ಅವಳನ್ನು ‘ಹಳ್ಳಿಗೆ ಹೋಗೋಣ’ ಎಂದೂ ಹೇಳಿದ್ದನು; ಆದರೆ ಅವಳು ಏನೂ ಕೇಳಲಿಲ್ಲ. ಅವಳು ವಿಚ್ಛೇದನೆ ಕೂಡ ಕೊಡುತ್ತಿರಲಿಲ್ಲ. ‘ನರಳಾಡಿ ಸಾಯಬೇಕು ನೀನು’ ಎಂದು ಅವಳು ಹೇಳಿದ್ದಳು, ಎಂದು ರಫೀಕನು ಪೊಲೀಸರಿಗೆ ತಿಳಿಸಿದ್ದಾನೆ.

ಇಂದಿನ ಕಾಲದಲ್ಲಿ ವೈಕುಂಠಗಮನ ಎಂದೆಲ್ಲಾ ಹೇಳುವುದನ್ನು ನಾನು ಒಪ್ಪುವುದಿಲ್ಲ, ಇವು ನಿರ್ದಿಷ್ಟ ವರ್ಗವೊಂದು ಹೇರಿದ ಸಂಗತಿಗಳು! : Sharad Pawar on Sant Tukaram
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!