ರೈಲ್ವೆ ಆಡಳಿತದ ಅಕ್ಷಮ್ಯ ನಿರ್ಲಕ್ಷ್ಯ!
ಇದಕ್ಕೆ ಕಾರಣರಾದವರಿಂದ ಬಡ್ಡಿ ಸೇರಿ ಎಲ್ಲಾ ಮೊತ್ತವನ್ನು ವಸೂಲಿ ಮಾಡಬೇಕು!

ನವ ದೆಹಲಿ : ನವ ದೆಹಲಿಯಿಂದ ಅಂಬಾಲಾ ರೈಲು ನಿಲ್ದಾಣಕ್ಕೆ ೩ ಲಕ್ಷ ರೂಪಾಯಿಗಳ ನಗದು ಇದ್ದ ತಿಜೋರಿ ಕೊಂಡೊಯ್ದಿದ್ದ ಪ್ಯಾಸೆಂಜರ್ ರೈಲಿನಿಂದು ಆ ತಿಜೋರಿಯನ್ನು ಕೆಳಗಿಳಿಸಲೇ ಇಲ್ಲ. ಅದು ನೇರವಾಗಿ ಕಲಕಾಗೆ ತಲುಪಿತು. ಈ ತಿಜೋರಿ ಸುಮಾರು ೪ ವರ್ಷಗಳಿಂದ ಕಲಕಾ ರೈಲು ನಿಲ್ದಾಣದಲ್ಲಿ ಹಾಗೆ ಇತ್ತು. ಈ ಅವಧಿಯಲ್ಲಿ ನೋಟು ಅನಾಣ್ಯೀಕರಣ ಸಹ ಆಯಿತು. ಅನಂತರ ರೈಲ್ವೆ ಅಧಿಕಾರಿಗಳಿಗೆ ತಿಜೋರಿಯ ನೆನಪಾದಾಗ ಅದನ್ನು ಹುಡುಕಿಕೊಂಡು ತೆರೆದಾಗ ಅದರಲ್ಲಿದ್ದ ೫೦೦ ಮತ್ತು ೧,೦೦೦ ರೂ ನೋಟುಗಳು ಸಂಪೂರ್ಣವಾಗಿ ಹಾನಿಯಾಗಿದ್ದ ಸ್ಥಿತಿಯಲ್ಲಿ ದೊರೆತವು. ಇದರಿಂದಾಗಿ ೩ ಲಕ್ಷ ರೂ. ಹಾನಿ ಆಯಿತು. ಈ ಘಟನೆಯ ತನಿಖೆಗಾಗಿ ಅಧಿಕಾರಿಗಳನ್ನು ನೇಮಿಸಲಾಯಿತು. ೨೫ ಅಕ್ಟೋಬರ್ ೨೦೧೬ ರಂದು ತಿಜೋರಿಯನ್ನು ಅಂಬಾಲಾ ಗೆ ಕಳುಹಿಸಲಾಗಿತ್ತು.
ಪ್ರಗತಿಪರ ನಟ ಪ್ರಕಾಶ ರಾಜ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್
Bhatkal Kidnapping : ಮುಸಲ್ಮಾನನೊಬ್ಬ ಅಪಹರಿಸಿದ್ದ ಹಿಂದೂ ಯುವತಿಯನ್ನು ರಕ್ಷಿಸಿದ ಹಿಂದುತ್ವನಿಷ್ಠರ ವಿರುದ್ಧವೇ ಪ್ರಕರಣ ದಾಖಲು
ರೌಡಿಗಳೊಂದಿಗೆ ಸೇರಿ ಯುವಕರಿಂದ ೨೦ ಲಕ್ಷ ರೂಪಾಯಿ ದೋಚಿದ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ !
Andhra Pradesh Gold : ಆಂಧ್ರಪ್ರದೇಶದಲ್ಲಿ 50 ಟನ್ ಚಿನ್ನದ ದಾಸ್ತಾನು ಪತ್ತೆಯಾಗಿರುವ ದಾವೆ
ಸಹಾರನಪುರ (ಉತ್ತರಪ್ರದೇಶ) ಇಲ್ಲಿನ ಶಹಜಾದ ಆದ ‘ಶಂಕರ!’
Davanagere Fake Doctors : ದಾವಣಗೆರೆಯಲ್ಲಿ 40 ನಕಲಿ ವೈದ್ಯರು ಪತ್ತೆ!