ಅಂತಹ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ಸರಕಾರಕ್ಕೆ ಅದೇಕೆ ಗಮನಕ್ಕೆ ಬರುವುದಿಲ್ಲ? ಹಿಂದೂಗಳು ಅಂತಹ ಬೇಡಿಕೆಯನ್ನು ಮಾಡುವುದು ಅಪೇಕ್ಷಿತವಲ್ಲ ! ಬಿಜೆಪಿ ಸಂಸದರು ಈ ಬೇಡಿಕೆಯ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಮತ್ತು ಇಂತಹ ವೆಬ್ ಸಿರೀಸ್ಗಳ ಮೇಲೆ ಕ್ರಮಕೈಗೊಳ್ಳಬೇಕು !
ನವ ದೆಹಲಿ : ವೆಬ್ ಸಿರೀಸ್ ಮಾಧ್ಯಮದಿಂದ ಹಿಂದೂಗಳ ದೇವತೆಗಳನ್ನು ಅವಮಾನಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಆಗುತ್ತಿರುವುದರಿಂದ ವೆಬ್ ಸಿರೀಸ್ಗೆ ಸೆನ್ಸಾರ್ಶಿಪ್ (ನಿರ್ಬಂಧಗಳನ್ನು) ವಿಧಿಸಬೇಕೆಂದು ಲೋಕಸಭೆಯಲ್ಲಿ ಬಿಜೆಪಿ ಸಂಸದರು ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ವಿವಿಧ ಬಿಜೆಪಿ ಸಂಸದರು ಮಾಡಿದ ಬೇಡಿಕೆಗಳು
೧. ಮನೋಜ್ ಕೋಟಕ ಇವರು ಮಾತನಾಡುತ್ತಾ, ವೆಬ್ ಸಿರೀಸ್ ಅನಗತ್ಯ ಹಿಂಸೆ, ಮದ್ಯಪಾನ ಮತ್ತು ಹಿಂದೂ ದೇವತೆಗಳನ್ನು ಅವಮಾನಿಸುವುದನ್ನು ಚಿತ್ರಿಸುತ್ತವೆ. ಈ ರೀತಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದನ್ನು ಸರಕಾರ ನಿಲ್ಲಿಸಬೇಕು ಮತ್ತು ವೆಬ್ ಸಿರೀಸ್ಗಳನ್ನು ಸೆನ್ಸಾರ್ ಮಾಡಬೇಕು, ಎಂದರು.
೨. ಡಾ. ಕಿರಿಟ್ ಸೋಲಂಕಿಯವರು ಮಾತನಾಡುತ್ತಾ, ‘ವೆಬ್ ಸಿರೀಸ್ಗಳ ಮೂಲಕ ಭಾರತೀಯ ಸಂಸ್ಕೃತಿಯ ಮೇಲೆ ಆಕ್ರಮಣ ಮಾಡಲಾಗುತ್ತಿದೆ. ಇದು ಯುವ ಪೀಳಿಗೆಯ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಒಟಿಟಿ ಆಪ್ಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಮತ್ತು ಅವುಗಳನ್ನು ನಿಷೇಧಿಸಬೇಕು’, ಎಂದರು.
#Bjp सांसद मनोज कोटक ने लोकसभा में उठाया OTT प्लेटफार्म पर सेंसरशिप की मांग@MrityunjayNews की रिपोर्टhttps://t.co/CPHksHxUyC
— ABP News (@ABPNews) February 12, 2021
೩. ಸಂಸದ ಶಂಕರ್ ಲಾಲ್ವಾನಿಯವರು ಮಾತನಾಡುತ್ತಾ ಮೊಬೈಲ್ ಫೋನ್ಗಳಲ್ಲಿ ವೆಬ್ ಸಿರೀಸ್ ಮೂಲಕ ಹಿಂಸೆ, ಅವಮಾನ ಇತ್ಯಾದಿಗಳನ್ನು ತೋರಿಸಲಾಗುತ್ತಿದೆ ಎಂದು ಹೇಳಿದರು. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗುತ್ತಿದೆ. ಹಾಗಾಗಿ ಸೆನ್ಸಾರ್ಶಿಪ್ ಇರಬೇಕು, ಎಂದು ಒತ್ತಾಯಿಸಿದರು.
೪. ವಿನೋದ್ಕುಮಾರ್ ಸೋಂಕರ್ ಕೂಡ ವೆಬ್ ಸಿರೀಸ್ಗಳಿಗೆ ಸೆನ್ಸಾರ್ಶಿಪ್ ಅನ್ವಯಿಸುವಂತೆ ಒತ್ತಾಯಿಸಿದರು. ವೆಬ್ ಸಿರೀಸ್ನ ಪಾತ್ರವೊಂದನ್ನು ಉಲ್ಲೇಖಿಸಿದ ಅವರು, ಉತ್ತರ ಪ್ರದೇಶದ ಉದ್ಯಮವೊಂದನ್ನು ಅಪಖ್ಯಾತಿಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದರು.


Bhatkal Kidnapping : ಮುಸಲ್ಮಾನನೊಬ್ಬ ಅಪಹರಿಸಿದ್ದ ಹಿಂದೂ ಯುವತಿಯನ್ನು ರಕ್ಷಿಸಿದ ಹಿಂದುತ್ವನಿಷ್ಠರ ವಿರುದ್ಧವೇ ಪ್ರಕರಣ ದಾಖಲು
ರೌಡಿಗಳೊಂದಿಗೆ ಸೇರಿ ಯುವಕರಿಂದ ೨೦ ಲಕ್ಷ ರೂಪಾಯಿ ದೋಚಿದ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ !
Andhra Pradesh Gold : ಆಂಧ್ರಪ್ರದೇಶದಲ್ಲಿ 50 ಟನ್ ಚಿನ್ನದ ದಾಸ್ತಾನು ಪತ್ತೆಯಾಗಿರುವ ದಾವೆ
ಸಹಾರನಪುರ (ಉತ್ತರಪ್ರದೇಶ) ಇಲ್ಲಿನ ಶಹಜಾದ ಆದ ‘ಶಂಕರ!’
Davanagere Fake Doctors : ದಾವಣಗೆರೆಯಲ್ಲಿ 40 ನಕಲಿ ವೈದ್ಯರು ಪತ್ತೆ!
ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಮಧ್ಯರಾತ್ರಿಯಲ್ಲಿ ತೆರವುಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ!