ಮಕರ ರಾಶಿಯಲ್ಲಿ ೭ ಗ್ರಹಗಳ ಮಿಲನದಿಂದಾಗಿ ಭಾರತದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಬಹುದು! – ಜ್ಯೋತಿಷಿಗಳು ಹೇಳಿಕೆ

ನವ ದೆಹಲಿ: ಫೆಬ್ರವರಿ ೯ ರಂದು ರಾತ್ರಿ ೮ ಗಂಟೆ ೩೧ ನಿಮಿಷಕ್ಕೆ ಚಂದ್ರನು ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಮಕರ ರಾಶಿಯಲ್ಲಿ ಈಗಾಗಲೇ ಸೂರ್ಯ, ಗುರು, ಶುಕ್ರ, ಶನಿ, ಬುಧ ಮತ್ತು ಪ್ಲುಟೊ ಗ್ರಹಗಳಿವೆ. ಜ್ಯೋತಿಷ್ಯಾಚಾರ್ಯ ಡಾ. ಅರವಿಂದ್ ಮಿಶ್ರಾ ಇವರು ಈಗ ಚಂದ್ರನ ಪ್ರವೇಶದ ನಂತರ ೭ ಗ್ರಹಗಳ ಮಿಲನವಾಗಿದೆ ಹೇಳಿದ್ದಾರೆ. ಈ ಯೋಗವು ಭಾರತದ ಮೇಲೆ ವಿಶೇಷ ಪರಿಣಾಮ ಬೀರಲಿದೆ; ಏಕೆಂದರೆ ಭಾರತದ್ದು ವೃಷಭ ಲಗ್ನದ ಜಾತಕ. ಈ ಜಾತಕದ ಮೂರನೇ ಮನೆ ಅಂದರೆ ಕರ್ಕ ರಾಶಿಯಲ್ಲಿ ಸೂರ್ಯ, ಬುಧ, ಶುಕ್ರ, ಶನಿ ಮತ್ತು ಚಂದ್ರರು ಈಗಾಗಲೇ ಕುಳಿತಿವೆ. ಈಗ ಈ ಯೋಗ ಮಕರ ರಾಶಿಯಲ್ಲಿ ನಡೆಯುತ್ತಿದೆ. ಅವರು ಪರಸ್ಪರ ಮೇಲೆ ದೃಷ್ಟಿ ಇರಲಿದೆ ಮತ್ತು ಅದರ ಮೇಲೆ ರಾಹುವಿನ ಕಣ್ಣಿದೆ. ಈ ಪರಿಸ್ಥಿತಿ ಭಾರತದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಬಹುದು. ರಾಜಕೀಯ ಪ್ರಕ್ಷುಬ್ಧತೆ ಸಹ ಕಾಣಬಹುದು. ಅಪಘಾತಗಳ ಸಂಖ್ಯೆ ಮತ್ತು ಹಣದುಬ್ಬರದಲ್ಲಿ ಏರಿಕೆಯಾಗಬಹುದು. ಈ ಅವಧಿಯಲ್ಲಿ, ವಿಶ್ವದಲ್ಲಿ ಭಾರತದ ಪ್ರಾಬಲ್ಯ ಮತ್ತು ಶಕ್ತಿಯು ಹೆಚ್ಚಾಗುತ್ತದೆ. ವಿಶ್ವದ ಎಲ್ಲ ದೇಶಗಳ ಸಭೆಗಳಲ್ಲಿ ಭಾರತ ವಿಶೇಷ ಪಾತ್ರ ವಹಿಸಲಿದೆ.

೭ ಗ್ರಹಗಳ ಮಿಲನದ ಪರಿಣಾಮ

. ಭಾರತದಲ್ಲಿ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆಯಿದೆ

೨. ನೈಸರ್ಗಿಕ ವಿಪತ್ತಿನಂತಹ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ

೩. ಮಹಾಯುದ್ಧದ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ

. ಕೊರೋನಾ ಸಾಂಕ್ರಾಮಿಕ ರೋಗ ಇನ್ನಷ್ಟು ತೀವ್ರಗೊಳ್ಳಬಹುದು

. ಇತರ ಕೆಲವು ವೈರಸ್‌ನಂತಹ ರೋಗಗಳ ಸಾಧ್ಯತೆ

. ಜೀವಹಾನಿ ಮತ್ತು ಆರ್ಥಿಕ ನಷ್ಟಗಳಾಗುವ ಅಂದಾಜು

. ಭಾರತದಲ್ಲಿ ರಾಜಕೀಯ ಪ್ರಕ್ಷುಬ್ಧತೆಯನ್ನು ಹೆಚ್ಚಾಗುವ ಸಾಧ್ಯತೆ