ತಮಿಳುನಾಡಿನಲ್ಲಿ ಪ್ರಾಚೀನ ದೇವಾಲಯಗಳ ಗೋಡೆಗಳ ಮೇಲೆ ಕ್ರಾಸ್ ಚಿತ್ರಿಸಿ ಅದಕ್ಕೆ ಚರ್ಚ್‌ನ ರೂಪ ನೀಡುವ ಪ್ರಯತ್ನ !

  • ಯಾರಾದರೂ ಚರ್ಚ್ ಮೇಲೆ ‘ಓಂ’ ಬಿಡಿಸಲು ಪ್ರಯತ್ನಿಸಿದ್ದರೆ, ಆದ ಅದು ದೇಶದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ವರದಿಯಾಗುತ್ತಿತ್ತು ಮತ್ತು ಜಾತ್ಯತೀತವಾದಿಗಳು ಹಿಂದೂಗಳನ್ನು ‘ತಾಲಿಬಾನ್’ ಎಂದು ಘೋಷಿಸುತ್ತಿದ್ದರು; ಆದರೆ ಇಲ್ಲಿ ಹಿಂದೂ ದೇವಾಲಯಗಳ ಮೇಲೆ ವಿವಿಧ ಸ್ಥಳಗಳಲ್ಲಿ ಶಿಲುಬೆಗಳನ್ನು ಚಿತ್ರಿಸಲಾಯಿತು, ಆದರೆ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ಹಿಂದೂವಿರೋಧಿ ಸಂಘಟನೆಗಳು ಸಹ ಮೌನವಾಗಿವೆ !
  • ತಮಿಳುನಾಡಿನಲ್ಲಿ ಅಣ್ಣಾದ್ರಮುಕ್‌ನ ಪಕ್ಷದ ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ, ಶಂಕರಾಚಾರ್ಯರನ್ನು ಸುಳ್ಳು ಆರೋಪದಲ್ಲಿ ಬಂಧಿಸಿ ಅವರನ್ನು ಜೈಲಿನಲ್ಲಿರಿಸಲಾಗಿತ್ತು. ಇಂದು ಅದೇ ಪಕ್ಷದ ಸರಕಾರವು ಅಧಿಕಾರದಲ್ಲಿದೆ, ಹಾಗಾಗಿ ಹಿಂದೂವಿರೋಧಿ ಚಟುವಟಿಕೆಗಳಲ್ಲಿ ಹೆಚ್ಚಳವಾದರೆ ಆಶ್ಚರ್ಯವೇನು ?

ತಿರುಪತ್ತೂರು (ತಮಿಳುನಾಡು) – ನಟರಂಪಳ್ಳಿ ತಾಲ್ಲೂಕಿನ ಎಲಾಪಲ್ಲಿ ಗ್ರಾಮದಲ್ಲಿ ೨೫೦ ವರ್ಷಗಳಷ್ಟು ಪ್ರಾಚೀನ ಹಿಂದೂ ಅಮ್ಮನ್ ದೇವಸ್ಥಾನದ ಎಲ್ಲಾ ಗೋಡೆಗಳು ಮತ್ತು ನೆಲಹಾಸುಗಳಲ್ಲಿ ಕ್ರಿಶ್ಚಿಯನ್ ಶಿಲುಬೆಯನ್ನು ಚಿತ್ರಿಸಿ ಅದನ್ನು ಚರ್ಚ್ ಆಗಿ ಪರಿವರ್ತಿಸುವ ಪ್ರಯತ್ನ ನಡೆದಿರುವುದು ಗಮನಕ್ಕೆ ಬಂದಿದೆ. ಈ ಪ್ರಕರಣದ ಬಗ್ಗೆ ಪೊಲೀಸರಲ್ಲಿ ದೂರನ್ನು ದಾಖಲಿಸಲಾಗಿದೆ.

ಮಹೇಂದ್ರನ್ ಮತ್ತು ಬೇಬಿ ಎಂಬವರ ಮಗ ಭಾಸ್ಕರನು ಈ ಹಿಂದೆಯೂ ದೇವಾಲಯದಲ್ಲಿ ವಿಗ್ರಹಗಳು ಮತ್ತು ದಾನ ಪೆಟ್ಟಿಗೆಗಳನ್ನು ಒಡೆದಿದ್ದನು, ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. (ದೂರು ದಾಖಲಿಸಿದ ನಂತರ ಪೊಲೀಸರು ಯಾವ ಕ್ರಮ ಕೈಗೊಂಡಿದ್ದಾರೆ ? ಅದೇ ಸಮಯದಲ್ಲಿ ಕ್ರಮ ಕೈಗೊಂಡಿದ್ದಿದ್ದರೆ, ಮತಾಂಧರು ಭವಿಷ್ಯದಲ್ಲಿ ಹಿಂದೂವಿರೋಧಿ ಕೃತ್ಯಗಳನ್ನು ಮಾಡುವ ಧೈರ್ಯವನ್ನು ತೋರುತ್ತಿರಲಿಲ್ಲ! – ಸಂಪಾದಕರು) ಈ ಬಗ್ಗೆ ಗ್ರಾಮಸ್ಥರು ಭಾಸ್ಕರ ಅವರನ್ನು ಕೇಳಿದಾಗ ಅವರು ಅವಾಚ್ಯವಾಗಿ ಬೈದಿದ್ದಲ್ಲದೇ, ‘ನನ್ನೊಂದಿಗೆ ಹಳ್ಳಿಯ ಕೆಲವರು ಇದ್ದಾರೆ ಮತ್ತು ನಾವು ಇದನ್ನು ಒಟ್ಟಿಗೆ ಸೇರಿಮಾಡಿದ್ದೇವೆ. ಆದ್ದರಿಂದ ಯಾರೂ ನನಗೆ ಯಾವುದೇ ಹಾನಿ ಮಾಡಲು ಸಾಧ್ಯವಿಲ್ಲ.’, ಎಂದು ಬೆದರಿಕೆಯನ್ನೂ ಒಡ್ಡಿದ್ದಾರೆ. (ಮತಾಂಧರ ದುರಹಂಕಾರ! ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಮಾತ್ರ ಅವರು ಸರಿದಾರಿಗೆ ಬರುವರು ! – ಸಂಪಾದಕರು)