‘ಆಶ್ರಮ’ ವೆಬ್ ಸೀರೀಸ್‌ನಲ್ಲಿ ತೋರಿಸಿರುವಂತೆ ಮತಾಂಧನಿಂದ ಯುವತಿಯ ಹತ್ಯೆ

ಆಶ್ರಮ ವೆಬ್ ಸೀರೀಸ್ ಹಿಂದೂ ಸಂತರ, ಆಶ್ರಮ ವ್ಯವಸ್ಥೆಯನ್ನು ಅವಮಾನಿಸಿದೆ ಮತ್ತು ಅದು ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದು ಗಮನಕ್ಕೆ ಬರುತ್ತಿದೆ. ಆದ್ದರಿಂದ ಸರಕಾರವು ಅದನ್ನು ಗಂಭೀರವಾಗಿ ಪರಿಗಣಿಸುತ್ತ ವೆಬ್ ಸೀರೀಸ್‌ಗಳನ್ನು ನಿಷೇಧಿಸಲು ಪ್ರಯತ್ನಿಸಬೇಕು !

‘ಆಶ್ರಮ’ ಎಂಬ ವೆಬ್ ಸೀರೀಸ್‌ನ್ನು ನೋಡಿದ ನಂತರ ಯುವತಿಯನ್ನು ಕೊಂದ ಶೇಖ್ ಬಿಲಾಲ್

ರಾಂಚಿ (ಜಾರ್ಖಂಡ್) – ಇಲ್ಲಿ ಯುವತಿಯ ಶಿರಚ್ಛೇದ ಮಾಡಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶೇಖ್ ಬಿಲಾಲ್ ಎಂಬವನನ್ನು ಬಂಧಿಸಿದ್ದಾರೆ. ‘ಆಶ್ರಮ’ ಎಂಬ ವೆಬ್ ಸೀರೀಸ್‌ನ್ನು ನೋಡಿದ ನಂತರ ಈ ಯುವತಿಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಿಲಾಲ್‌ನ ಹೊಲದಲ್ಲಿ ಬಾಲಕಿಯ ತಲೆಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ; ಆದರೆ ಶವ ಪತ್ತೆಯಾಗಿಲ್ಲ. ಆಕೆಯ ದೇಹವನ್ನು ನಂತರ ೨ ಕಿ.ಮೀ ದೂರದಲ್ಲಿ ಪತ್ತೆ ಮಾಡಲಾಯಿತು. ಪೊಲೀಸರು ಬಿಲಾಲ್‌ನನ್ನು ಬಂಧಿಸಿದ್ದಾರೆ. ಆಶ್ರಮ್ ವೆಬ್ ಸೀರೀಸ್‌ನಲ್ಲಿ ಈ ರೀತಿಯ ಘಟನೆಯನ್ನು ತೋರಿಸಲಾಗಿದೆ. ಯುವತಿಯನ್ನು ಗುರುತು ಸಿಗಬಾರದು; ಅದಕ್ಕಾಗಿಯೇ ಇದನ್ನು ಮಾಡಲಾಯಿತು. ಕತ್ತು ಹಿಸುಕಿ ಬಾಲಕಿಯನ್ನು ಕೊಂದ ನಂತರ, ಅವಳ ತಲೆ ಮತ್ತು ಮುಖದ ಮೇಲೆ ವಿದ್ರೂಪಗೊಳಿಸಲಾಗಿತ್ತು.