‘ನಾಥುರಾಮ್ ಗೋಡ್ಸೆ ದೇಶದ ಮೊದಲ ಭಯೋತ್ಪಾದಕ !(ಅಂತೆ) – ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್

  • ಯಾರನ್ನು ಭಯೋತ್ಪಾದಕರೆಂದು ಕರೆಯಬೇಕೆಂದು ಸಹ ತಿಳಿಯದ ಕಾಂಗ್ರೆಸ್ಸಿಗರು ! ಜಿಹಾದಿ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ನನ್ನು ‘ಒಸಾಮಾಜಿ’ ಎಂದು ಗೌರವದಿಂದ ಕರೆಯುವ ದಿಗ್ವಿಜಯ ಸಿಂಗ್ ಅಂತಹ ಹೇಳಿಕೆ ನೀಡುವುದರಲ್ಲಿ ಆಶ್ಚರ್ಯವಿದೆಯೇ ?
  • ಆಜಾದ್ ಹಿಂದ್ ಸೇನಾ ಬ್ರಿಟಿಷರ ವಿರುದ್ಧ ಹೋರಾಡುತ್ತಿರುವಾಗ ‘ಅದು ಭಾರತಕ್ಕೆ ಕಾಲಿಟ್ಟರೆ ನಾನು ಅದನ್ನು ಕತ್ತಿಯಿಂದ ವಿರೋಧಿಸುತ್ತೇನೆ’, ಎಂದು ಪಂಡಿತ್ ಜವಾಹರಲಾಲ್ ನೆಹರು ನೀಡಿದ ಹೇಳಿಕೆ ದೇಶಭಕ್ತಿ ತೋರಿಸುತ್ತದೆಯೇ ?
  • ೧೯೪೭ ರಲ್ಲಿ ಪಾಕಿಸ್ತಾನಕ್ಕೆ ೫೫ ಕೋಟಿ ರೂಪಾಯಿ (ಈಗಿನ ೫೧೧೨ ಕೋಟಿ ರೂಪಾಯಿ) ನೀಡಲು ಉಪವಾಸ ಸತ್ಯಾಗ್ರಹ ನಡೆಸಿದ ಮ. ಗಾಂಧಿ ದೇಶಭಕ್ತರಾಗಿದ್ದರು, ಎಂದು ಹೇಳಬಹುದೇ ?
  • ಗಾಂಧಿಯ ಹತ್ಯೆ ಮಾಡಿದ್ದಕ್ಕಾಗಿ ನಾಥುರಾಮ್ ಗೋಡ್ಸೆಯನ್ನು ಭಯೋತ್ಪಾದಕ ಎಂದು ಕರೆದ ಕಾಂಗ್ರೆಸ್ ಸ್ವಾಮಿ ಶ್ರದ್ಧಾನಂದರ ಹತ್ಯೆ ಮಾಡಿದ ರಶೀದ (ಮ. ಗಾಂಧಿಯವರು ‘ರಶೀದ ಭಾಯಿ’ ಎಂದು ಕರೆದಿದ್ದರು) ನನ್ನು ಎಂದೂ ಭಯೋತ್ಪಾದಕನೆಂದು ಕರೆಯುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಕಾಂಗ್ರೆಸ್ ಕೇವಲ ದೇಶಭಕ್ತರನ್ನು ಅವಮಾನಿಸುವುದನ್ನು ಕಲಿತಿದೆ ! – ಸಾಧ್ವಿ ಪ್ರಜ್ಞಾ ಸಿಂಗ್ ಪ್ರತ್ಯುತ್ತರ

ಭೋಪಾಲ್ (ಮಧ್ಯಪ್ರದೇಶ) – ‘ಕಾಂಗ್ರೆಸ್ ದೇಶಭಕ್ತರನ್ನು ಅವಮಾನಿಸಲು ಮಾತ್ರ ಕಲಿತಿದೆ. ಅವರ ನಾಯಕರು ‘ಕೇಸರಿ ಭಯೋತ್ಪಾದನೆ’ ಎಂಬ ಪದಗಳನ್ನು ಬಳಸಿದ್ದಾರೆ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನಿದೆ ?’ ಎಂದು ಬಿಜೆಪಿಯ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ತಿರುಗೇಟು ನೀಡಿದರು. ‘ನಾಥುರಾಮ್ ಗೋಡ್ಸೆ ಭಾರತದ ಮೊದಲ ಭಯೋತ್ಪಾದಕ’ ಎಂದು ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದರು.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ, ಗೋಡ್ಸೆ ದೇಶಭಕ್ತ ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿದ್ದರು. ಇದರ ನಂತರ ಬಿಜೆಪಿಗೆ ಈ ಬಗ್ಗೆ ವಿವರಣೆ ನೀಡಬೇಕಾಗಿತ್ತು.