ಮುಂಬರುವ ಆಪತ್ಕಾಲದಲ್ಲಿ ಎಲ್ಲ ಮಾನವರು ಜೀವಂತವಾಗಿರಬೇಕೆಂದು ಕೃತಿಶೀಲರಾಗಿರುವ ಮತ್ತು ಜಗತ್ತಿಗೆ ಆಧಾರವಾಗಿರುವ ಏಕೈಕ ದಾರ್ಶನಿಕ ಪರಾತ್ಪರ ಗುರು ಡಾ. ಜಯಂತ ಆಠವಲೆ !

(ಪೂ.) ಸಂದೀಪ ಆಳಶಿ

ಹಿರಣ್ಯಾಕ್ಷನೆಂಬ ರಾಕ್ಷಸನು ಪೃಥ್ವಿಯನ್ನು ಅಪಹರಿಸಿ ಮಹಾಸಾಗರದಲ್ಲಿ ಬಚ್ಚಿಟ್ಟಾಗ ಶ್ರೀವಿಷ್ಣುವು ವರಾಹ ಅವತಾರವನ್ನು ತಾಳಿ ಪೃಥ್ವಿಯನ್ನು ರಕ್ಷಿಸಿದ್ದನು. ಸೃಷ್ಟಿಯು ಯಾವಾಗಲೂ ಸಮತೋಲನದಲ್ಲಿರಬೇಕೆಂದು ಭಗವಾನ ಶಿವನು ಅಖಂಡ ಧ್ಯಾನಾವಸ್ಥೆಯಲ್ಲಿರುತ್ತಾನೆ. ಪರಾತ್ಪರ ಗುರು ಡಾ. ಜಯಂತ ಆಠವಲೆಯವರಿಗೂ ಅಖಿಲ ಮನುಕುಲದ ರಕ್ಷಣೆ ಮತ್ತು ಕಲ್ಯಾಣದ ಜೊತೆಗೆ ಸೃಷ್ಟಿಯ ಕಾಳಜಿಯೂ ಇದೆ. ಮುಂಬರುವ ಆಪತ್ಕಾಲದಲ್ಲಿ ನೆರೆ, ಭೂಕಂಪಗಳಂತಹ ನೈಸರ್ಗಿಕ ಆಪತ್ತುಗಳು ಮತ್ತು ಮಹಾಯುದ್ಧದಂತಹ ಮಾನವನಿರ್ಮಿತ ಆಪತ್ತುಗಳು ಬರಲಿವೆ. ಆಪತ್ಕಾಲದಲ್ಲಿ ರಕ್ಷಣೆಯಾಗಲು ವ್ಯಕ್ತಿಯು ಸ್ವಂತದ ಬಲದಲ್ಲಿ ಎಷ್ಟು ಸಿದ್ಧತೆಯನ್ನು ಮಾಡಿದರೂ, ಭೂಕಂಪ, ತ್ಸುನಾಮಿಗಳಂತಹ ಮಹಾಭಯಂಕರ ವಿಪತ್ತುಗಳಿಂದ ಪಾರಾಗಲು ಕೊನೆಗೆ ದೇವರ ಮೇಲೆಯೇ ಎಲ್ಲ ಶ್ರದ್ಧೆಯನ್ನು ಇಡಬೇಕಾಗುತ್ತದೆ. ವ್ಯಕ್ತಿಯು ಸಾಧನೆಯನ್ನು ಮಾಡಿ ದೇವರ ಕೃಪೆಯನ್ನು ಪಡೆದುಕೊಂಡರೆ ದೇವರು ಅವನನ್ನು ಎಲ್ಲ ಸಂಕಟದಿಂದ ರಕ್ಷಣೆ ಮಾಡಿಯೇ ಮಾಡುತ್ತಾನೆ. ಭಕ್ತ ಪ್ರಹ್ಲಾದ, ಪಾಂಡವರು ಮುಂತಾದವರ ಅನೇಕ ಉದಾಹರಣೆಗಳಿಂದ ಇದು ದೃಢಪಟ್ಟಿದೆ. ಇದಕ್ಕಾಗಿಯೇ ಪರಾತ್ಪರ ಗುರು ಡಾಕ್ಟರರು ಕೆಲವು ವರ್ಷಗಳಿಂದ ಗ್ರಂಥಗಳು, ನಿಯತಕಾಲಿಕೆಗಳು ಮತ್ತು ಜಾಲತಾಣಗಳು ಮುಂತಾದವುಗಳ ಮಾಧ್ಯಮದಿಂದ ಅಖಿಲ ಮನುಕುಲಕ್ಕೆ ಅತ್ಯಂತ ಕಳಕಳಿಯಿಂದ ‘ಈಗ ಜೀವಂತವಾಗಿರಲಿಕ್ಕಾದರೂ ಸಾಧನೆಯನ್ನು ಮಾಡಿ ! ಎಂದು ಹೇಳುತ್ತಿದ್ದಾರೆ.

‘ಧರ್ಮಾಚರಣೆಯು ನಾಶವಾಗಿ ಅಧರ್ಮವು ಪ್ರಬಲವಾದಾಗ ಪೃಥ್ವಿಯ ಮೇಲೆ ಸಂಕಟಗಳು ಬರುತ್ತವೆ, ಎಂದು ಹಿಂದೂ ಧರ್ಮಶಾಸ್ತ್ರವು ಹೇಳುತ್ತದೆ. ಸಮಾಜವು ಧರ್ಮಾಚರಣಿ ಮತ್ತು ಸಾಧಕನಾದರೆ, ಹಾಗೆಯೇ ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನದಲ್ಲಿ ಧರ್ಮದ ಅಧಿಷ್ಠಾನವಿದ್ದಲ್ಲಿ ಪೃಥ್ವಿಯ ಮೇಲೆ ಸಂಕಟಗಳು ಬರುವುದಿಲ್ಲ ಮತ್ತು ಸೃಷ್ಟಿಯ ಸಮತೋಲನವು ಸ್ಥಿರವಾಗಿರಲು ಸಹಾಯವಾಗುತ್ತದೆ. ಇದಕ್ಕಾಗಿಯೇ ಪರಾತ್ಪರ ಗುರು ಡಾಕ್ಟರರು ಕೇವಲ ಭಾರತದಲ್ಲಷ್ಟೇ ಅಲ್ಲ, ಆದರೆ ಸಂಪೂರ್ಣ ಪೃಥ್ವಿಯ ಮೇಲೆ ಧರ್ಮದ ಅಧಿಷ್ಠಾನವಿರುವ ‘ಈಶ್ವರೀ ರಾಜ್ಯವನ್ನು ಸ್ಥಾಪಿಸಲು ಆಧ್ಯಾತ್ಮಿಕ ಸ್ತರದಲ್ಲಿ ಮಾರ್ಗದರ್ಶನ ಮಾಡುತ್ತಿದ್ದು, ಅದಕ್ಕಾಗಿ ಸಂತರು, ಸಂಪ್ರದಾಯದವರು, ಸಾಧಕರು, ಹಿಂದುತ್ವವಾದಿಗಳು, ಧರ್ಮಪ್ರೇಮಿಗಳು ಮತ್ತು ರಾಷ್ಟ್ರಭಕ್ತರ ಸಂಘಟನೆಯನ್ನೂ ಮಾಡುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಪರಾತ್ಪರ ಗುರು ಡಾಕ್ಟರರ ಪ್ರಾಣಶಕ್ತಿಯು ಅತ್ಯಂತ ಕಡಿಮೆ ಇದೆ, ಅಂದರೆ ಕೇವಲ ಜೀವಂತವಾಗಿರಲು ಆವಶ್ಯಕವಿರುವಷ್ಟೇ ಇದ್ದು, ಅವರಿಗೆ ಅನೇಕ ಶಾರೀರಿಕ ತೊಂದರೆಗಳೂ ಆಗುತ್ತಿರುತ್ತವೆ. ಅವರು ಸ್ವತಃ ಬ್ರಹ್ಮಲೀನ ಅವಸ್ಥೆಯಲ್ಲಿದ್ದು ಮನಸ್ಸು ಮಾಡಿದರೆ ಅವರು ಯಾವುದೇ ಕ್ಷಣದಲ್ಲಿ ಆನಂದದಿಂದ ದೇಹತ್ಯಾಗ ಮಾಡಬಲ್ಲರು. ಹೀಗಿರುವಾಗಲೂ ಅವರು ಕೇವಲ ಅಖಿಲ ಮಾನುಕುಲವನ್ನು ಆಪತ್ಕಾಲದಿಂದ ರಕ್ಷಿಸಲು ಮತ್ತು ಅಖಿಲ ಮನುಕುಲವನ್ನು ಸಾತ್ತ್ವಿಕವನ್ನಾಗಿಸಿ ಎಲ್ಲೆಡೆ ಈಶ್ವರೀ ರಾಜ್ಯ ಬರಬೇಕು ಮತ್ತು ಸಕಲ ಸೃಷ್ಟಿಯ ಕಲ್ಯಾಣವಾಗಬೇಕೆಂದು ಪ್ರತಿದಿನ ಅಕ್ಷರಶಃ ದೇಹದಲ್ಲಿನ ಪ್ರಾಣವನ್ನು ಒಟ್ಟುಗೂಡಿಸಿ ೧೫-೧೬ ಗಂಟೆ ಕಾರ್ಯನಿರತರಾಗಿರುತ್ತಾರೆ ?! ಇಂತಹ ಧರ್ಮಸಂಸ್ಥಾಪಕ, ಜಗದೋದ್ಧಾರಕ, ಸೃಷ್ಟಿಯ ಪಾಲನಕರ್ತ ಮತ್ತು ಯುಗಪ್ರವರ್ತಕ ಪರಮಕೃಪಾಳು ಗುರುದೇವರ ಚರಣಗಳಲ್ಲಿ ಶಿರಸಾಷ್ಟಾಂಗ ನಮನಗಳು !

(ಪೂ.) ಶ್ರೀ. ಸಂದೀಪ ಆಳಶಿ (೧೧.೧೧.೨೦೧೯)