ಸಾಮೂಹಿಕ ಅತ್ಯಾಚಾರದ ದೂರು ನೀಡಲು ಹೋದ ಸಂತ್ರಸ್ತೆಯ ಮೇಲೆ ಮತ್ತೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ !

  • ರಕ್ಷಕರಲ್ಲ ಭಕ್ಷಕ ಪೊಲೀಸರು ! ಇಂತಹ ಪೊಲೀಸರನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸುವ ಶಿಕ್ಷೆಯನ್ನು ವಿಧಿಸಬೇಕು ಎಂದು ಜನರು ಆಗ್ರಹಿಸಿದರೆ ಅದರಲ್ಲಿ ತಪ್ಪೇನಿದೆ ? 
  • ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಮತ್ತೊಂದು ಉದಾಹರಣೆ !
(ಚಿತ್ರ ಸೌಜನ್ಯ : TIMES NOW)

ಶಾಹಜುಹಾನಪುರ (ಉತ್ತರ ಪ್ರದೇಶ) – ಸ್ಥಳೀಯ ಜಲಾಲಾಬಾದ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರದ ದೂರು ನೀಡಲು ತೆರಳಿದ್ದ ಮದನಪುರ ಪ್ರದೇಶದ ೩೫ ವರ್ಷದ ಮಹಿಳೆಯ ಮೇಲೆ ಪೊಲೀಸ್ ಅಧಿಕಾರಿಯು ಮತ್ತೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

(ಚಿತ್ರ ಸೌಜನ್ಯ : TIMES NOW)

ಪೀಡಿತ ಮಹಿಳೆಯು ಸುದ್ಧಿಗಾರರೊಂದಿಗೆ ಮಾತನಾಡುತ್ತಾ, ನವೆಂಬರ್ ೩೦ ರಂದು ತನ್ನ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ರಸ್ತೆಯಲ್ಲಿ ಕಾರೊಂದು ಅವಳ ಬಳಿ ನಿಂತಿತು. ಅದರಲ್ಲಿದ್ದ ೫ ಮಂದಿ ಅವಳನ್ನು ಬಲವಂತವಾಗಿ ಅದರಲ್ಲಿ ಕೂರಿಸಿ ಹತ್ತಿರದ ಹೊಲಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದರು. ನಂತರ ಸಂತ್ರಸ್ತೆ ಜಲಾಲಾಬಾದ್ ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಉಪಸ್ಥಿತರಿದ್ದರು. ಅವನು ಅವಳನ್ನು ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರ ಮಾಡಿದನು. ಎರಡೂ ಪ್ರಕರಣಗಳಲ್ಲಿ ಯಾವುದೇ ದೂರು ದಾಖಲಾಗದ ಕಾರಣ, ಆಕೆ ಬರೇಲಿಯ ಸಹಾಯಕ ಪೊಲೀಸ್ ಮಹಾನಿರ್ದೇಶಕ ಅವಿನಾಶ ಚಂದ್ರ ಅವರನ್ನು ಭೇಟಿಯಾದಳು. ಅವರು ತನಿಖೆಗೆ ಆದೇಶಿಸಿದ್ದಾರೆ.