ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನದಿಂದ ವಿಗ್ರಹಗಳ ಕಳ್ಳತನವಾಗುತ್ತದೆ, ಇದರಿಂದ ಪುರಾತತ್ವ ಇಲಾಖೆಯ ‘ನಿರ್ವಹಣೆ’ ಗಮನಕ್ಕೆ ಬರುತ್ತದೆ! ಅಂತಹ ಇಲಾಖೆ ಏಕೆ ಬೇಕು ?
ಭುವನೇಶ್ವರ (ಒಡಿಶಾ) – ಒಡಿಶಾದ ಖುರಧಾ ಜಿಲ್ಲೆಯ ಬಾನಪುರದಲ್ಲಿರುವ ಪ್ರಾಚೀನ ಮತ್ತು ಐತಿಹಾಸಿಕ ದಕ್ಷೇಶ್ವರ ದೇವಸ್ಥಾನದಲ್ಲಿ ಆದ ಕಳ್ಳತನದಲ್ಲಿ ಕಳ್ಳರು ೨೨ ಪ್ರಾಚೀನ ವಿಗ್ರಹಗಳನ್ನು ಕದ್ದೊಯ್ದಿದ್ದಾರೆ. ಕನಕ ದುರ್ಗಾ, ಗೋಪಿನಾಥ ದೇವ, ಕಲಿಯುಗೇಶ್ವರ ದೇವ, ಚಂದ್ರಶೇಖರ ದೇವ ಇತ್ಯಾದಿ ದೇವತೆಗಳು ಸೇರಿರುವ ಅಷ್ಟಧಾತುವಿನ ಈ ಎಲ್ಲಾ ವಿಗ್ರಹಗಳು ಕೋಟ್ಯಂತರ ರೂಪಾಯಿ ಮೌಲ್ಯದ ವಿಗ್ರಹಗಳಾಗಿವೆ. ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ. ಈ ದೇವಾಲಯವು ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುತ್ತದೆ.
In Odisha, 22 rare idols stolen from 13th century Shiva temple
(report by @debabrata2008)https://t.co/C2ry1PFfRO pic.twitter.com/yLjwuedMJK
— Hindustan Times (@htTweets) December 22, 2020
ರಾತ್ರಿ ಕಳ್ಳರು ದೇವಾಲಯದ ಮುಖ್ಯ ದ್ವಾರವನ್ನು ಭೇದಿಸಿ ಒಳಗೆ ಪ್ರವೇಶಿಸಿದ್ದಾರೆ. ಅರ್ಚಕರು ಬೆಳಿಗ್ಗೆ ದೇವಸ್ಥಾನಕ್ಕೆ ಬಂದಾಗ ಅವರ ಗಮನಕ್ಕೆ ಇದು ಬಂದಿತು. ಈ ದೇವಾಲಯದಲ್ಲಿ ಒಟ್ಟು ೩೧ ವಿಗ್ರಹಗಳಿದ್ದು, ಅವುಗಳಲ್ಲಿ ೨೨ ವಿಗ್ರಹಗಳನ್ನು ಕಳವು ಮಾಡಲಾಗಿದೆ.

ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ!
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!