ತುಂಡುಡುಗೆಯ ಮೇಲೆ ಗಣಪತಿಯ ಚಿತ್ರಕ್ಕೆ ಬ್ರೆಜಿಲ್‌ನ ಸಂಸ್ಥೆಯಿಂದ ಕ್ಷಮಾಯಾಚನೆ !

ಬ್ರಾಜಿಲ್‌ನಲ್ಲಿ ಹಿಂದೂಗಳ ಸಂಘಟಿತ ವಿರೋಧದ ಪರಿಣಾಮ !

  • ಹಿಂದೂಗಳೇ, ಈ ಯಶಸ್ಸಿಗೆ ಭಗವಂತನ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿ !
  • ಹಿಂದೂ ದೇವತೆಗಳ ವಿಡಂಬನೆಯಾದಾಗ ಕೂಡಲೇ ವಿರೋಧಿಸುವ ಬ್ರಾಜಿಲ್‌ನ ಹಿಂದೂಗಳು ! ಭಾರತದಲ್ಲಿ ಪ್ರತಿದಿನ ವಿವಿಧ ಮಾಧ್ಯಮಗಳ ಮೂಲಕ ದೇವತೆಗಳು, ಸಂಸ್ಕೃತಿ-ಪರಂಪರೆಗಳ ಅವಮಾನವಾಗಿಯೂ ಅದರ ಬಗ್ಗೆ ಏನೂ ಮಾತನಾಡದ ಭಾರತದ ಬಹುಸಂಖ್ಯಾತ ಹಿಂದೂಗಳು ಬ್ರಾಜಿಲ್‌ನ ಹಿಂದೂಗಳಿಂದ ಏನಾದರೂ ಕಲಿಯುವರೇ ?

ನವ ದೆಹಲಿ – ದಕ್ಷಿಣ ಅಮೆರಿಕಾದ ಬ್ರಾಜಿಲ್‌ನಲ್ಲಿ ಹಿಂದೂಗಳ ಸಂಘಟಿತ ವಿರೋಧದಿಂದಾಗಿ, ಇಲ್ಲಿಯ ‘ಜಾನ್ ಕೊಟ್ರೆ’ ಸಂಸ್ಥೆಯು ಪ್ರಸಾರ ಮಾಡಿದ್ದ ಗಣಪತಿಯ ವಿಡಂಬನಾತ್ಮಕ ಜಾಹೀರಾತುಗಳನ್ನು ಹಿಂಪಡೆದಿದೆ. ಈ ಜಾಹೀರಾತಿನಲ್ಲಿ ಪುರುಷರು ಮತ್ತು ಮಹಿಳೆಯರು ಗಣಪತಿಯ ಚಿತ್ರವಿರುವ ತುಂಡುಬಟ್ಟೆಗಳನ್ನು ಧರಿಸಿರುವುದನ್ನು ತೋರಿಸಲಾಗಿದೆ.

ಈ ಜಾಹೀರಾತು ಬಂದಾಗಿನಿಂದ ಸಂಸ್ಥೆಗೆ ವಿರೋಧ ಪ್ರಾರಂಭವಾಗಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿ ಬ್ರಾಜಿಲ್‌ನ ಹಿಂದೂಗಳು ಜಾಹೀರಾತನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು. ಹೆಚ್ಚುತ್ತಿರುವ ಹಿಂದೂಗಳ ವಿರೋಧವನ್ನು ಗಮನಿಸಿದ ಬ್ರಾಜಿಲ್‌ನ ಭಾರತದ ರಾಯಭಾರಿ ಸುರೇಶ್ ರೆಡ್ಡಿ ಕೂಡ ಈ ಸಂಸ್ಥೆಯನ್ನು ಸಂಪರ್ಕಿಸಿ ಸೂತ್ರವು ಸೂಕ್ಷ್ಮವಾಗಿದೆ ಎಂದು ಹೇಳಿದರು. ಹೆಚ್ಚುತ್ತಿರುವ ವಿರೋಧದ ನಂತರ, ಸಂಸ್ಥೆಯು ಜಾಹೀರಾತನ್ನು ತೆಗೆದುಹಾಕಿತು ಮತ್ತು ಹಿಂದೂಗಳಲ್ಲಿ ಕ್ಷಮೆಯಾಚಿಸಿತು. ಅದೆರೀತಿ ಈ ‘ತುಂಡುಬಟ್ಟೆ’ಗಳ ಉತ್ಪಾದನೆಯನ್ನು ಸಹ ನಿಲ್ಲಿಸಲಾಗಿದೆ ಎಂದು ಸಾವೊ ಪಾವುಲೊದಲ್ಲಿನ ಸಂಸ್ಥೆಯ ಕಚೇರಿ ತಿಳಿಸಿದೆ.