ಡಿಜೆಯ ಧ್ವನಿಯನ್ನು ಕಡಿಮೆ ಮಾಡಲು ಹೇಳಿದ್ದರಿಂದ ಮತಾಂಧರಿಂದ ಹಿಂದೂ ಕುಟುಂಬದ ಮೇಲೆ ದಾಳಿ: ಒಬ್ಬರ ಹತ್ಯೆ

  • ಕ್ಷುಲ್ಲಕ ಕಾರಣಗಳಿಗಾಗಿ ಹಿಂದೂಗಳ ಮೇಲೆ ಆಕ್ರಮಣ ಮಾಡುವ ಮತಾಂಧರ ಈ ಅಸಹಿಷ್ಣುತೆಯ ಬಗ್ಗೆ ಪ್ರಗತಿ(ಅಧೋಗತಿ)ಪರರು ಹಾಗೂ ಜಾತ್ಯತೀತವಾದಿಗಳು ಯಾವಾಗಲೂ ಮೌನವಾಗಿರುತ್ತಾರೆ !
  • ಭಾರತದಲ್ಲಿ ಮತಾಂಧರು ಪ್ರತಿದಿನ ಹೆಚ್ಚು ಹೆಚ್ಚು ಉದ್ಧಟರಾಗುತ್ತಿದ್ದು ಅವರಿಗೆ ಯಾವುದೇ ರೀತಿಯ ಭಯ ಇಲ್ಲ, ಎಂಬುದು ಇದರಿಂದ ಕಂಡು ಬರುತ್ತದೆ ! ಹಿಂದೂಗಳು ಇಂತಹ ಘಟನೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸ್ವರಕ್ಷಣ ಪ್ರಶಿಕ್ಷಣ ತೆಗೆದುಕೊಳ್ಳುವುದು ಅಗತ್ಯವಿದೆ ಎಂಬುದು ಗಮನದಲ್ಲಿಟ್ಟುಕೊಳ್ಳಬೇಕು !

ನವ ದೆಹಲಿ – ಇಲ್ಲಿಯ ಮಹೇಂದ್ರ ಪಾರ್ಕ್ ಪ್ರದೇಶದಲ್ಲಿ ವಾಸಿಸುವ ಅಬ್ದುಲ್ ಸತ್ತಾರ್ ತಮ್ಮ ಮನೆಯಲ್ಲಿ ದೊಡ್ಡ ಧ್ವನಿಯಲ್ಲಿ ಡಿಜೆ ಹಾಕಿದ್ದರು. ಇದರಂದ ನೆರೆಹೊರೆಯವರಿಗೆ ತೊಂದರೆಯಾಗುತ್ತಿತ್ತು. ನೆರೆಯ ಸುಶೀಲ್ ಈ ಬಗ್ಗೆ ಹೇಳಿದಾಗ, ಸತ್ತಾರ್ ಹಾಗೂ ಆತನ ನಾಲ್ಕು ಮಕ್ಕಳು ಸುಶೀಲ್ ಅವರ ಕುಟುಂಬದ ಮೇಲೆ ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಿದರು. ಇದರಲ್ಲಿ ಸುಶೀಲ್ ಮೃತಪಟ್ಟರು ಮತ್ತು ಇತರ ಇಬ್ಬರು ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಬ್ದುಲ್ ಸತ್ತಾರ್ ಮತ್ತು ಆತನ ನಾಲ್ಕು ಮಕ್ಕಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅವರಲ್ಲಿ ಮೂವರನ್ನು ಬಂಧಿಸಲಾಗಿದೆ. ಸಧ್ಯ ಇಲ್ಲಿ ಧಾರ್ಮಿಕ ಉದ್ವಿಗ್ನತೆ ಉಂಟಾಗಬಹುದೆಂಬ ಭಯದಿಂದ ಪೊಲೀಸರು ಜಾಗ್ರತೆ ವಹಿಸುತ್ತಿದ್ದಾರೆ.