
ಪಾಟಲಿಪುತ್ರ (ಬಿಹಾರ) – ಚೀನಾದ ಗೂಢಾಚಾರರು ಪ್ರಧಾನಮಂತ್ರಿ ಕಚೇರಿ, ದಲೈ ಲಾಮಾ ಮತ್ತು ಭಾರತದಲ್ಲಿ ಹಾಕಲಾಗಿರುವ ಭದ್ರತಾ ಉಪಕರಣಗಳ ಮೇಲೆ ನಿಗಾವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ ಉನ್ನತ ಅಧಿಕಾರಿಗಳ ಬಗ್ಗೆ ಗೂಢಾಚಾರರು ಮಾಹಿತಿ ಸಂಗ್ರಹಿಸುತ್ತಿರುವ ಬಗ್ಗೆ ಬಂಧಿಸಲಾಗಿರುವ ಚೀನಾದ ಗೂಢಾಚಾರನ ತನಿಖೆಯಿಂದ ಬೆಳಕಿಗೆ ಬಂದಿದೆ.
Espionage case: Prime Minister's Office, other important ministries on Chinese spy radar#China #espionage #PMO https://t.co/ebVcHdydgd
— DNA (@dna) October 21, 2020
ಚೀನಾದ ಗೂಢಾಚಾರ ಕ್ವಿಂ ಶಿ ಎಂಬವನ ವಿಚಾರಣೆಯಲ್ಲಿ ಆತ,
೧. ಪ್ರಧಾನ ಮಂತ್ರಿಗಳ ಕಚೇರಿ ಸೇರಿದಂತೆ ದೊಡ್ಡ ಕಚೇರಿಗಳಿಂದ ಮಾಹಿತಿ ಸಂಗ್ರಹಿಸುವ ಮೂಲಕ ಚೀನಾವು ಭಾರತದಲ್ಲಿರುವ ಗೂಢಾಚಾರರು ತಂಡಕ್ಕೆ ಕೆಲಸ ನೀಡಿತ್ತು. ಕಚೇರಿಯಲ್ಲಿ ಪ್ರಮುಖ ವ್ಯಕ್ತಿ ಯಾರು ? ಯಾವ ಸ್ಥಾನದಲ್ಲಿ ಯಾರು ಕೆಲಸ ಮಾಡುತ್ತಿದ್ದಾರೆ ? ಮತ್ತು ಎಷ್ಟು ಪ್ರಭಾವಶಾಲಿಯಾಗಿದ್ದಾರೆ ? ಎಂಬ ಮಾಹಿತಿಯನ್ನು ಸಂಗ್ರಹಿಸುವ ಬಗ್ಗೆ ಹೇಳಲಾಗಿತ್ತು.
೨. ಚೀನಾದ ಗೂಢಾಚಾರ ತಂಡದಲ್ಲಿ ಮಹಾಬೋಧಿ ದೇವಸ್ಥಾನದ ಪ್ರಮುಖ ಬೌದ್ಧ ಸನ್ಯಾಸಿ ಹಾಗೂ ಕೋಲಕಾತಾದ ಓರ್ವ ಮಹಿಳೆ ಸೇರಿದ್ದಾರೆ. ಕ್ವಿಂಗ್ ಶಿ ಮತ್ತು ಈ ಮಹಿಳೆಯನ್ನು ಪರಿಚಯಿಸಲಾಗಿತ್ತು. ಈ ಮಹಿಳೆಯು ಆತನಿಗೆ ಪ್ರಮುಖ ದಾಖಲೆಗಳನ್ನು ನೀಡುತ್ತಿದ್ದಳು. ಶಿ ಈ ದಾಖಲೆಗಳನ್ನು ಚೀನಾಕ್ಕೆ ಕಳುಹಿಸುತ್ತಿದ್ದನು.
(ಸೌಜನ್ಯ : ABP NEWS)
೩. ದೆಹಲಿ ಪೊಲೀಸರ ವಿಶೇಷ ತಂಡ ಕಳೆದ ತಿಂಗಳು ಕ್ವಿಂಗ್ ಶಿ ಮತ್ತು ಅವನ ನೇಪಾಳಿ ಸಹಚರ ಶೇರ್ ಬಹದ್ದೂರ್ ಹಾಗೂ ಭಾರತೀಯ ಪತ್ರಕರ್ತ ರಾಜೀವ್ ಶರ್ಮಾನನ್ನು ಬಂಧಿಸಿತ್ತು. ಆತನ ವಿಚಾರಣೆಯ ಸಮಯದಲ್ಲಿ ಕೆಲವು ದಾಖಲೆಗಳು ಪತ್ತೆಯಾಗಿವೆ. ಅದರಲ್ಲಿ ಪ್ರಧಾನಿ ಕಚೇರಿಯ ಅಧಿಕಾರಿಯೊಬ್ಬರು ಮತ್ತು ದಲೈ ಲಾಮಾಯವರ ಎಲ್ಲ ಕಾರ್ಯಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿತ್ತು.
೪. ಭಾರತದಲ್ಲಿ ಬೇಹುಗಾರಿಕೆ ನಡೆಸಲು ಕ್ವಿಂಗ್ ಶಿಗೆ ಚೀನಾ ಪ್ರತಿ ತಿಂಗಳಿಗೆ ಒಂದು ಲಕ್ಷ ರೂಪಾಯಿ ನೀಡುತ್ತಿತ್ತು. ದಕ್ಷಿಣ ದೆಹಲಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಶಿಯ ಮನೆಯ ಬಾಡಿಗೆ ತಿಂಗಳಿಗೆ ೫೦,೦೦೦ ರೂಪಾಯಿ ಇತ್ತು. ಬಾಡಿಗೆ ಯಾರು ಪಾವತಿಸುತ್ತಿದ್ದರು ?, ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ
ಅಶ್ಲೀಲತೆ ಹರಡುವ ‘ಸ್ಟ್ಯಾಂಡ್-ಅಪ್ ಕಾಮಿಡಿ’ ಕಾರ್ಯಕ್ರಮಗಳಿಗೆ ಸೆನ್ಸಾರ್ ಮಂಡಳಿಯ ಪೂರ್ವಾನ್ಮತಿ ಕಡ್ಡಾಯಗೊಳಿಸಿ!
‘ಭಾರತವು ಹಿಂದೂ ಬಹುಸಂಖ್ಯಾತವಾಗಿರುವುದರಿಂದ ಜಾತ್ಯತೀತವಾಗಿದೆ, ಯಾವುದಾದರೂ ಇಸ್ಲಾಮಿಕ್ ದೇಶ ಜಾತ್ಯತೀತವಾಗಿದ್ದರೆ ತಿಳಿಸಿ !’ – ರಾಜಾ ಭಯ್ಯಾ, ಶಾಸಕರು, ಉತ್ತರ ಪ್ರದೇಶ
Muslims Oppose Yoga Day : ‘ರಸ್ತೆಯಲ್ಲಿ ನಮಾಜ್ ಮಾಡಲು ಅವಕಾಶವಿಲ್ಲ ಎಂದಾದರೆ, ಯೋಗ ದಿನ ಏತಕ್ಕೆ ?’
ಚಿಕ್ಕ ಮಕ್ಕಳಿಗೆ ಗೋಮಾಂಸ ತಿನ್ನಲು ಸಲಹೆ ನೀಡುವವರ ವಿರುದ್ಧ ಮೊಕದ್ದಮೆ ದಾಖಲಿಸಿ ! – ವಿಶ್ವ ಹಿಂದೂ ಪರಿಷತ್