|
ಇಂತಹ ಬೆದರಿಕೆಗಳನ್ನು ಹಾಕುವ ಮೂಲಕ ಮೆಹಬೂಬಾ ಮುಫ್ತಿ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲು ಹಾಕುತ್ತಿದ್ದಾರೆ. ಸರಕಾರವು ಅವರನ್ನು ಗೃಹಬಂಧನದಲ್ಲಿ ಅಲ್ಲ; ಜೀವಾವಧಿ ಶಿಕ್ಷೆ ವಿಧಿಸಿ ಕಾರಾಗೃಹಕ್ಕೆ ದೂಡಬೇಕು ಎಂದು ಯಾರಿಗಾದರು ಅನಿಸಿದರೆ ಅದರಲ್ಲಿ ತಪ್ಪೇನಿದೆ ?ಸಂಸತ್ತಿನಲ್ಲಿ ಬಹುಮತದಿಂದ ಅಂಗೀಕರಿಸಿದ ನಿರ್ಧಾರವನ್ನು ‘ಕಾನೂನುಬಾಹಿರ’ ಎಂದು ಹೇಳುವುದು, ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವಲ್ಲವೇ ? ಸರಕಾರವು ಮುಫ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! |
ಶ್ರೀನಗರ – ‘ದೆಹಲಿಯವರು ಕಸಿದುಕೊಂಡದ್ದನ್ನು, ಮರಳಿ ಪಡೆಯುವೆವು’ ಎಂಬ ಮಾತುಗಳಿಂದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಮೋದಿ ಸರಕಾರಕ್ಕೆ ಎಚ್ಚರಿಕೆ ಹಾಗೂ ಮತಾಂಧರಿಗೆ ಪ್ರಚೋದನೆ ನೀಡಿದ್ದಾರೆ.
‘Will take back what Delhi snatched,’ says #MehboobaMufti in audio message after release https://t.co/n2ePvLk6Yw
— scroll.in (@scroll_in) October 14, 2020
ಜಮ್ಮು-ಕಾಶ್ಮೀರದಿಂದ ಕಲಂ ೩೭೦ ಅನ್ನು ತೆಗೆದುಹಾಕಿದ ನಂತರ ಮುಫ್ತಿಯವರನ್ನು ಗೃಹಬಂಧನದಲ್ಲಿಡಲಾಗಿತ್ತು. ಅವರನ್ನು ೧೪ ತಿಂಗಳ ನಂತರ ಅಂದರೆ ಅಕ್ಟೋಬರ್ ೧೩ ರಂದು ಬಿಡುಗಡೆ ಮಾಡಲಾಯಿತು. ನಂತರ ಅವರು ಟ್ವಿಟರ್ನಲ್ಲಿ ಒಂದು ‘ವಿಡಿಯೋ’ ಪ್ರಸಾರ ಮಾಡಿ ಈ ಮೇಲಿನಂತೆ ವಿಷಕಾರಿದ್ದಾರೆ. ಅದರಲ್ಲಿ ಅವರು, ‘ಆಗಸ್ಟ್ ೫, ೨೦೧೯ ರ ಕಪ್ಪು ದಿನದಂದು ತೆಗೆದುಕೊಂಡ ನಿರ್ಧಾರವು ನನ್ನ ಹೃದಯಕ್ಕೆ ಬರೆ ಹಾಕುತ್ತಲಿತ್ತು. ಜಮ್ಮು ಮತ್ತು ಕಾಶ್ಮೀರದ ಜನರ ಪರಿಸ್ಥಿತಿಯು ಇದೇ ರೀತಿ ಇರಬಹುದು. ಸರಕಾರವು ಜನರಿಗೆ ಮಾಡಿದ ಅವಮಾನವನ್ನು ಅವರು ಮರೆಯುವುದಿಲ್ಲ. ಈಗ ನಾವು, ಆಗಸ್ಟ್ ೫ ರಂದು ದೆಹಲಿಯು ಅಕ್ರಮವಾಗಿ ಏನನ್ನು ಕಸಿದುಕೊಂಡಿದ್ದಾರೆಯೋ, ಅದನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಾಗಬಹುದು. ಈ ಅಕ್ರಮ ನಿರ್ಧಾರವನ್ನು ಬದಲಾಯಿಸಲು ಜಮ್ಮು ಮತ್ತು ಕಾಶ್ಮೀರದ ಜನರು ಒಟ್ಟಾಗಿ ಹೋರಾಡುವರು ಹಾಗೂ ಸಾವಿರಾರು ಜನರ ಪ್ರಾಣವನ್ನು ಕಸಿಯುವ ಅಂಶವನ್ನು ಕಿತ್ತೊಗೆಯಲು ಒಟ್ಟಾಗಿ ಕೆಲಸ ಮಾಡುತ್ತಾರೆ. ಈ ಹೋರಾಟವು ಅಷ್ಟು ಸುಲಭವಲ್ಲ. ನನ್ನನ್ನು ಬಿಡುಗಡೆ ಮಾಡುವುದರ ಜೊತೆಗೆ ಜಮ್ಮು ಮತ್ತು ಕಾಶ್ಮೀರದ ಸೆರೆಮನೆಯಲ್ಲಿರುವ ಎಲ್ಲ ನಾಗರಿಕರನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು’ ಎಂದು ಹೇಳಿದ್ದಾರೆ.

‘ಭಾಜಪ ಹರಡಿದ ವಿಷದಿಂದ ದೇಶದ ಬಹುಸಂಖ್ಯಾತ ಸಮಾಜ ವಿಷಪೂರಿತವಾಗಿದೆ!'(ಅಂತೆ)
‘ಅಕಾಲ ತಖ್ತ್’ನಿಂದ ಪಂಜಾಬ್ ಮುಖ್ಯಮಂತ್ರಿ ಮಾನ್ ಅವರನ್ನು ‘ಗುರು ದ್ರೋಹಿ’ ಎಂದು ಘೋಷಿಸಿತು!
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ಕುರಿತಾದ ರಾಜ್ಯದ ಗೃಹ ಸಚಿವರ ಹೇಳಿಕೆಯ ಮೇಲೆ ಪ.ಪೂ. ಸರಸಂಘಚಾಲಕ್ ಡಾ. ಮೋಹನಜಿ ಭಾಗವತ್ ಅವರ ಹೇಳಿಕೆ
‘ನೀಟ್’ ಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ಗೆ ನಿಷೇಧ
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು