ಮುಸಲ್ಮಾನ ಹುಡುಗಿಯೊಬ್ಬಳನ್ನು ಪ್ರೀತಿಸಿದ ಹಿಂದೂ ಯುವಕನನ್ನು ಹತ್ಯೆಗೈದ ಆಕೆಯ ಕುಟುಂಬ

ಲವ್ ಜಿಹಾದ್ ಅನ್ನು ತಿರಸ್ಕರಿಸಿ ಅದನ್ನು ‘ಪ್ರೀತಿ’ ಎಂದೆನ್ನುವ ತಥಾಕಥಿತ ಜಾತ್ಯತೀತವಾದಿಗಳು ಹಾಗೂ ಪ್ರಗತಿ (ಅಧೋಗತಿ) ಪರರು ಈಗ ಏಕೆ ಮಾತನಾಡುತ್ತಿಲ್ಲ ಅಥವಾ ‘ಘಟಿಸಿದ ಪ್ರಸಂಗವು ಸರಿ ಇದೆ’ ಎಂದು ಅವರಿಗೆ ಅನಿಸುತ್ತಿದೆಯೇ ?

ಬೆಂಗಳೂರು (ಕರ್ನಾಟಕ) – ಮುಸಲ್ಮಾನ ಹುಡುಗಿಯನ್ನು ಪ್ರೀತಿಸುತ್ತಿದ್ದ ಕೆ. ಲಕ್ಷ್ಮೀಪತಿ ಎಂಬ ಹಿಂದೂ ಯುವಕನನ್ನು ಹುಡುಗಿಯ ತಂದೆ ನಿಜಾಮುದ್ದೀನ್ ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ನಿಜಾಮುದ್ದೀನ್ ಮತ್ತು ಅವರ ಪುತ್ರ ಸಿಕಂದರ್‌ನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇಬ್ರತ ಮತ್ತು ಮಹಮ್ಮದ ಎಂಬ ಇತರ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ವಿವಾಹದ ಮಾತುಕತೆಗಾಗಿ ನಿಜಾಮುದ್ದೀನರು ಲಕ್ಷ್ಮೀಪತಿಯನ್ನು ಕರೆದಿದ್ದರು. ಆ ಸಮಯದಲ್ಲಿ ಲಕ್ಷ್ಮಿಪತಿಯ ಸಹೋದರ ನಟರಾಜ ಇವರೂ ಉಪಸ್ಥಿತರಿದ್ದರು. ಮಾತುಕತೆಯ ಸಮಯದಲ್ಲಿ ಲಕ್ಷ್ಮೀಪತಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಲಾಯಿತು. ಇದನ್ನು ನೋಡಿದ ನಟರಾಜನು ಅಲ್ಲಿಂದ ಓಡಿಹೋದನು.