ಭೂ ಮಾಫಿಯಾದವರಿಂದ ಕರೌಲಿ (ರಾಜಸ್ಥಾನ)ಯಲ್ಲಿ ದೇವಸ್ಥಾನದ ಅರ್ಚಕನನ್ನು ಜೀವಂತವಾಗಿ ಸುಟ್ಟರು

ದೇವಸ್ಥಾನದ ಜಮೀನಿನ ಮೇಲೆ ಅಕ್ರಮ ನಿಯಂತ್ರಣವನ್ನು ವಿರೋಧಿಸಿದುದರೆಂದು ಮಾಡಿದ ಸೇಡಿನ ಕೃತ್ಯ

  • ಕಾಂಗ್ರೆಸ್ ರಾಜ್ಯದಲ್ಲಿ ಹಾಡುಹಗಲೇ ಈ ರೀತಿ ದೇವಸ್ಥಾನದ ಅರ್ಚಕನನ್ನು ಜೀವಂತವಾಗಿ ಸುಡಲಾಗುತ್ತದೆ; ಆದರೆ ಯಾವುದೇ ಕಾಂಗ್ರೆಸ್ ಮುಖಂಡರು ಇದನ್ನು ಖಂಡಿಸುವುದಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಆರೋಪಿಗಳನ್ನು ಕೂಡಲೇ ಬಂಧಿಸಲು ಅಥವಾ ಘಟನಾಸ್ಥಳಕ್ಕೆ ಹೋಗಿ ಅರ್ಚಕರ ಕುಟುಂಬದವರಿಗೆ ಸಾಂತ್ವನ ನೀಡುವುದಿಲ್ಲ ಎಂಬುದನ್ನು ಗಮನದಲ್ಲಿಡಿ
  • ಹಿಂದೂ ಅರ್ಚಕರ ಸ್ಥಾನದಲ್ಲಿ ಇತರ ಧರ್ಮಗಳ ಧಾರ್ಮಿಕ ಮುಖಂಡರು ಇದ್ದಿದ್ದರೆ, ಕಾಂಗ್ರೆಸ್ ಇದೇ ರೀತಿ ವರ್ತಿಸುತ್ತಿತ್ತೇನು ? ಜಿಹಾದಿ ಭಯೋತ್ಪಾದಕಿ ಇಶರತ್ ಜಹಾನ್‌ನಳ ಹತ್ಯೆಯಾದಾಗ, ಬಾಟಲಾ ಹೌಸ್‌ನಲ್ಲಿ ಭಯೋತ್ಪಾದಕರನ್ನು ಕೊಂದ ನಂತರ, ಅವರ ಮನೆಗೆ ಹೋಗಿ ಲಕ್ಷಾಂತರ ರೂಪಾಯಿಗಳನ್ನು ಪರಿಹಾರ ನೀಡುವ ಹಾಗೂ ಅವರ ಸಾವಿಗಾಗಿ ಕಣ್ಣೀರು ಸುರಿಸುವ ಸೋನಿಯಾ ಗಾಂಧಿಯವರು ಈ ಘಟನೆಯ ಬಗ್ಗೆ ಬಾಯಿಮುಚ್ಚಿಕೊಂಡಿರುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
  • ಸುಶಾಂತ ಸಿಂಹ ರಜಪೂತ ಇವರ ಪ್ರಕರಣವನ್ನು ಕಳೆದ ಹಲವು ತಿಂಗಳುಗಳಿಂದ ವಾರ್ತೆಗಳನ್ನು ಬಿತ್ತರಿಸುತ್ತಿದ್ದ ಮಾಧ್ಯಮಗಳು ಈ ಘಟನೆಯ ಬಗ್ಗೆ ಗಾಂಧಿಜೀಯವರ ಕೋತಿಗಳಂತೆ ವರ್ತಿಸುತ್ತಿವೆ. ರಾಷ್ಟ್ರೀಯ ವಾರ್ತಾ ವಾಹಿನಿಗಳು ಇದಕ್ಕೆ ಅಗತ್ಯವಿದ್ದಷ್ಟು ಪ್ರಚಾರವನ್ನು ನೀಡುವುದಿಲ್ಲ ಹಾಗೂ ಆಡಳಿತಗಾರರನ್ನು ಕಠೋರವಾಗಿ ಪ್ರಶ್ನಿಸುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಕರೌಲಿ (ರಾಜಸ್ಥಾನ) – ಇಲ್ಲಿಯ ಸಪೋಟರಾ ತಾಲ್ಲೂಕಿನ ರಾಧಾ ಗೋವಿಂದ ದೇವಸ್ಥಾನದ ೫೦ ವರ್ಷದ ಅರ್ಚಕ ಬಾಬುಲಾಲ ವೈಷ್ಣವ ಇವರನ್ನು ಅಕ್ಟೋಬರ್ ೮ ರಂದು ಭೂ ಮಾಫಿಯಾ ಹಾಗೂ ಅದರ ೫ ಸಹಚರರು ಸೇರಿ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟಿರುವ ಘಟನೆಯಾಗಿದೆ. ಆಸ್ಪತ್ರೆಗೆ ದಾಖಲಿಸಿದ ನಂತರ ಅಕ್ಟೋಬರ್ ೯ ರಂದು ಅವರು ಮೃತಪಟ್ಟರು. ಅರ್ಚಕ ಬಾಬುಲಾಲರು ಈ ಭೂ ಮಾಫಿಯಾಗಳು ದೇವಸ್ಥಾನದ ಭೂಮಿಯ ಅತಿಕ್ರಮಣ ಮಾಡುವುದನ್ನು ತಡೆಗಟ್ಟಿದ್ದರು. ಆದ್ದರಿಂದ ಅವರ ಹತ್ಯೆ ಗೈದಿದ್ದಾರೆ. ಪೊಲೀಸರು ೬ ಜನರ ವಿರುದ್ಧ ಅಪರಾಧವನ್ನು ದಾಖಲಿಸಿದ್ದಾರೆ. ಮುಖ್ಯ ಆರೋಪಿ ಕೈಲಾಶ್ ಮೀಣಾನನ್ನು ಪೊಲೀಸರು ಬಂಧಿಸಿದ್ದಾರೆ.

೧. ಮೂಲಗಳ ಪ್ರಕಾರ, ಭೀಮ್ ಆರ್ಮಿ ಎಂಬ ಸಂಘಟನೆಯಿಂದ ಇಲ್ಲಿಯ ಹಿಂದುಳಿದ ವರ್ಗಗಳನ್ನು ಉದ್ರೇಕಿಸಲಾಗುತ್ತಿದೆ, ಅದೇರೀತಿ ಹಿಂದೂ ಧರ್ಮದ ಬಗ್ಗೆ ದ್ವೇಷ ಹಬ್ಬಿಸುವುದು ಹಾಗೂ ಅದನ್ನು ಅವಮಾನಿಸಲು ಇವರನ್ನೆಲ್ಲ ಉದ್ಯುಕ್ತಗೊಳಿಸಲಾಗುತ್ತಿದೆ. ಅದಕ್ಕಾಗಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
೨. ಅರ್ಚಕ ಬಾಬುಲಾಲರಿಗೆ ದೇವಸ್ಥಾನದ ಹೆಸರಿನಲ್ಲಿ ಜಮೀನು ನೀಡಲಾಗಿತ್ತು. ಇಲ್ಲಿ ಅವರು ತಮ್ಮ ಮನೆಯನ್ನೂ ಕಟ್ಟಿಕೊಂಡಿದ್ದರು. ಭೂ ಮಾಫಿಯಾದವರು ಈ ಭೂಮಿಯನ್ನು ಅತಿಕ್ರಮಿಸಲು ಬಯಸಿದ್ದರು. ಸ್ಥಳೀಯ ಹಿಂದುಳಿದ ವರ್ಗದವರು ದೇವಸ್ಥಾನದ ಮೇಲೆ ಹಿಡಿತ ಸಾಧಿಸಲು ಬಯಸಿದ್ದರು ಮತ್ತು ಅರ್ಚಕ ಬಾಬುಲಾಲರು ಇದನ್ನು ವಿರೋಧಿಸುತ್ತಿದ್ದರು, ಎಂದು ಸ್ಥಳೀಯರು ಹೇಳುತ್ತಿದ್ದಾರೆ.