‘ಶಿವನು ಕೂಡ ಮಾದಕವಸ್ತುಗಳನ್ನು ಸೇವಿಸುತ್ತಾರೆ !’(ಅಂತೆ) – ಲೇಖಕಿ ಮೇಘನಾ ಪಂತ್

ಬಿಜೆಪಿಯ ರಾಷ್ಟ್ರೀಯ ವಕ್ತಾರ ಡಾ. ಸಂಬಿತ್ ಪತ್ರಾ ಇವರಿಂದ ತಿರುಗೇಟು

  • ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಹಾಗೂ ತಮ್ಮನ್ನು ಪ್ರಗತಿ(ಅಧೋಗತಿ)ಪರರೆಂದು ತಿಳಿದುಕೊಳ್ಳುವುದರಿಂದ ಅವರು ಈ ರೀತಿಯ ತಮ್ಮ ಅಜ್ಞಾನವನ್ನು ತೋರಿಸುವಂತಹ ಹೇಳಿಕೆಗಳನ್ನು ನೀಡುತ್ತಾರೆ ಮತ್ತು ಇತರ ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರು ಇಂತಹ ಹಿಂದೂಗಳನ್ನು ಬೆಂಬಲಿಸುತ್ತಾರೆ ! ಮತ್ತೊಂದೆಡೆ ಇತರ ಧರ್ಮದವರಿಗೆ ತಮ್ಮ ಧರ್ಮದ ಶಿಕ್ಷಣ ಸಿಗುತ್ತಿರುವುದರಿಂದ ಅವರು ಎಂದಿಗೂ ತಮ್ಮ ಧರ್ಮ ಮತ್ತು ಶ್ರದ್ಧಾಸ್ಥಾನವನ್ನು ಅವಮಾನಿಸುವುದಿಲ್ಲ !

  • ಹಿಂದೂಗಳಿಗೆ ಬಲವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ತಡೆಯುತ್ತಿರುವ ಸುದ್ದಿ ವಾಹಿನಿಗಳಲ್ಲಿನ ಚರ್ಚಾಕೂಟದ ನಿವೇದಕರು ಹಿಂದೂ ವಿರೋಧಿಗಳ ಇಂತಹ ವಕ್ತಾರರ ಹೇಳಿಕೆಗಳನ್ನು ಆಕ್ಷೇಪಿಸುತ್ತಾ ಅವರ ಮಾತುಗಳನ್ನು ಎಂದಾದರೂ ತಡೆಯುತ್ತಾರೆಯೇ ?

ನವ ದೆಹಲಿ – ಭಾರತೀಯ ಚಲನಚಿತ್ರೋದ್ಯಮದ ನಟರು ಮಾದಕ ವಸ್ತುಗಳ ಸೇವನೆ ಮಾಡುತ್ತಾರೆ, ಇದು ಬಹಿರಂಗವಾಗುತ್ತಿರುವಾಗ ಈ ಬಗ್ಗೆ ‘ಇಂಡಿಯಾ ಟುಡೇ’ ಸುದ್ದಿವಾಹಿನಿಯಲ್ಲಿನ ಚರ್ಚಾಕೂಟದಲ್ಲಿ ಲೇಖಕಿ ಮೇಘನಾ ಪಂತ್ ಇವರು, ‘ಭಗವಾನ ಶಿವನೂ ಕೂಡಾ ಮಾದಕ ವಸ್ತುಗಳನ್ನು ಸೇವಿಸುತ್ತಾರೆ’ ಎಂದು ಹೇಳಿದರು,

ಈ ಚರ್ಚಾಕೂಟದಲ್ಲಿ ಸಹಭಾಗಿಯಾಗಿರುವ ಭಾಜಪದ ರಾಷ್ಟ್ರೀಯ ವಕ್ತಾರರಾದ ಡಾ. ಸಂಬಿತ್ ಪತ್ರಾ ಇವರು ಪಂತ್ ಇವರಿಗೆ ತಿರುಗೇಟು ನೀಡುತ್ತಾ, ಮೇಘನಾ ಪಂತ್ ಇವರಂತಹ ಜನರು ಇತರ ಧರ್ಮದವರ ಶ್ರದ್ಧಾಸ್ಥಾನಗಳ ಬಗ್ಗೆ ಇಂತಹ ಹೇಳಿಕೆ ನೀಡಲು ಧೈರ್ಯ ಮಾಡುವುದಿಲ್ಲ ಎಂದು ಹೇಳಿದರು.